ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಉ.ಪ್ರ ಸಿಎಂ ನಟನೆಗೆ ನನ್ನೆಲ್ಲ ರಾಷ್ಟ್ರಪ್ರಶಸ್ತಿ ಕೊಡೋಣ ಅನಿಸಿತು'

|
Google Oneindia Kannada News

ಬೆಂಗಳೂರು, ಅಕ್ಟೋಬರ್ 2: "ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಒಂದು ವಿಡಿಯೋ ನೋಡಿದೆ. ಅದರಲ್ಲಿದ್ದುದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು. ನನಗೆ 5 ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅವರ ನಟನೆ ನೋಡಿ ಅವನ್ನು ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು! ನಾನೊಬ್ಬ ದೊಡ್ಡ ನಟ. ಅವರೆಲ್ಲ (ರಾಜಕಾರಣಿಗಳು) ನನಗಿಂತ ದೊಡ್ಡ ನಟರಾಗಲು ಯತ್ನಿಸುತ್ತಿದ್ದಾರೆ".

ಗೌರಿ ಲಂಕೇಶ್ ಹಂತಕರ ಹೆಸರಲ್ಲಿ 7 ಪತ್ರಕರ್ತರಿಗೆ ಜೀವ ಬೆದರಿಕೆಗೌರಿ ಲಂಕೇಶ್ ಹಂತಕರ ಹೆಸರಲ್ಲಿ 7 ಪತ್ರಕರ್ತರಿಗೆ ಜೀವ ಬೆದರಿಕೆ

-ಬಹುಭಾಷಾ ನಟ ಪ್ರಕಾಶ್ ರೈ ನೀಡಿದ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಆರಂಭವಾದ ಮೂರು ದಿನಗಳ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ)ನ 11ನೇ ರಾಜ್ಯ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Adityanath is a better actor than me. I think I must give out all my five national awards to him: Prakash Rai

ಗೌರಿ ನನ್ನ ಆತ್ಮೀಯ ಗೆಳತಿ. ಗೌರಿಯನ್ನು ಕೊಂದವರು ಯಾರು ಎಂಬುದು ಗೊತ್ತಿಲ್ಲದಿರಬಹುದು, ಆದರೆ ಗೌರಿಯವರ ಸಾವನ್ನು ಸಂಭ್ರಮಿಸುತ್ತಿರುವವರು ಯಾರು ಎಂಬುದು ಗೊತ್ತಿದೆ. ಗೌರಿಯವರ ಹತ್ಯೆಯನ್ನು ನಾನು ಖಂಡಿಸಿದ ಮೇಲೆ, ಜಾಲತಾಣಗಳಲ್ಲಿ ನಾನು ಎಂದೂ ಕೇಳಿರದಂತಹ ಕೆಟ್ಟ ಭಾಷೆಯ ಬಯ್ಗುಳವನ್ನು ನೋಡುತ್ತಿದ್ದೇನೆ. ಆದರೆ ಇಂತಹ ಬೆದರಿಕೆಗಳಿಂದ ನಾನು ಬೆದರುವವನಲ್ಲ ಎಂದು ಹೇಳಿದರು.

'ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸಲು ಬ್ರಾಹ್ಮಣಶಾಹಿ ಮಾಧ್ಯಮ ಯತ್ನ''ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸಲು ಬ್ರಾಹ್ಮಣಶಾಹಿ ಮಾಧ್ಯಮ ಯತ್ನ'

ಟ್ವೀಟರ್, ಫೇಸ್ ಬುಕ್ ಮುಂತಾದ ಜಾಲತಾಣದಲ್ಲಿ ಕೆಟ್ಟದಾಗಿ ನಿಂದಿಸುವವರು ಎದುರಿಗೆ ಬಂದು ನಿಂತು ಮಾತನಾಡಿ' ಎಂದು ಸವಾಲು ಹಾಕಿದರು.

ಸಮಾಜದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಜನರು ಅವರಿಗೇನು ಆಳುವ ಪಕ್ಷ. ಹಣಬಲದಿಂದ ಗೆಲ್ಲುತ್ತಾರೆ.', ಕ್ಷೇತ್ರದಲ್ಲಿ ಅವರ ಜಾತಿ ಓಟು ಜಾಸ್ತಿ ಇದೆ. ಗೆಲ್ಲುತ್ತಾರೆ' ಎಂಬಂತೆ ಮಾತನಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಮಕ್ಕಳಿಗೆ ಕುಡಿಯಲು ಹಾಲಿಲ್ಲದಿರುವಾಗ ಚಿತ್ರನಟರ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವುದು ಮೂರ್ಖತನ. ರಾಜಕೀಯ, ಸಮಾಜ ಸುಧಾರಣೆ ಆಗಬೇಕಾದರೆ ಯುವಜನರು ಉತ್ತಮ ನಾಯಕರಾಗಿ ಬೆಳೆದು ಬರಬೇಕು ಎಂದರು.

English summary
When you look at the kind of statements UP Chief minister Adityanath makes, you don’t understand whether he’s a Chief Minister or a priest. He is a better actor than me. I think I must give out all my five national awards to him, Actor Prakash Rai criticised in DYFI meeting at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X