ಜಯನಗರದಲ್ಲಿ ಅನುಮತಿ ಇಲ್ಲದೆ ಮರಕಡಿದ ಬಿಬಿಎಂಪಿ: ಹೆಬ್ಳೀಕರ್ ಕಿಡಿ
ಬಿಬಿಎಂಪಿ ವಿರುದ್ಧ ಹಿರಿಯ ನಟ ಹಾಗೂ ಪರಿಸರ ತಜ್ಞ ಸುರೇಶ್ ಹೆಬ್ಳೀಕರ್ ಕಿಡಿ. ಜಯನಗರ 4ನೇ ಬ್ಲಾಕ್ ನಲ್ಲಿ ಅನುಮತಿಯಿಲ್ಲದೆ ಎರಡು ಮರ ಕತ್ತರಿಸಿದ್ದಕ್ಕೆ ಕಿಡಿ.
ಬೆಂಗಳೂರು, ಆಗಸ್ಟ್ 8: ಜಯನಗರದಲ್ಲಿ ಭಾನುವಾರ (ಆಗಸ್ಟ್ 6) ಯಾವುದೇ ಅನುಮತಿಯನ್ನು ಪಡೆಯದೇ, ಅಲ್ಲಿನ ನಾಗರಿಕರಿಗೂ ಈ ಬಗ್ಗೆ ತಿಳಿಸದೇ ಎರಡು ಬೃಹತ್ ಮರಗಳನ್ನು ಏಕಾಏಕಿಯಾಗಿ ಕತ್ತರಿಸಿದ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವಿರುದ್ಧ ಹಿರಿಯ ನಟ ಹಾಗೂ ನಿಸರ್ಗ ಪ್ರೇಮಿ ಸುರೇಶ್ ಹೆಬ್ಳೀಕರ್ ಕಿಡಿಕಾರಿದ್ದಾರೆ.
ಮುಂಬೈ,: ತೆಂಗಿನ ಮರ ಬಿದ್ದು ಮಾಜಿ ವಾರ್ತಾ ನಿರೂಪಕಿ ಸಾವು!
ಜಯನಗರದ 4ನೇ ಟಿ ಬ್ಲಾಕ್ ನ 36ನೇ ಕ್ರಾಸ್ ನಲ್ಲಿ ಎಸ್ಎಸ್ಎಂವಿಆರ್ ಕಾಲೇಜಿನ ಹತ್ತಿರದಲ್ಲಿ ಯಾವುದೇ ಸಕಾರಣವಿಲ್ಲದೆ, ಬಿಬಿಎಂಪಿಯು ಎರಡು ಮರಗಳನ್ನು ಕತ್ತರಿಸಿದ್ದಾರೆ ನಾಗರಿಕರು ಆರೋಪಿಸಿದ್ದರು. ಇದು ಕೆಲವಾರು ಮಾಧ್ಯಮಗಳಲ್ಲಿಯೂ ಪ್ರತಿಧ್ವನಿಗೊಂಡಿದೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸುರೇಶ್ ಹೆಬ್ಳೀಕರ್, ''ಯಾವುದೇ ಸಕಾರಣವಿಲ್ಲದೆ ಬಿಬಿಎಂಪಿಯು ಹೀಗೆ ಮರಗಳನ್ನು ಕತ್ತರಿಸುವುದು ನಾಚಿಗೆಗೇಡಿನ ವಿಚಾರ. ಮರಗಳು ಕೇವಲ ಮರಗಳಲ್ಲ. ಅವು ನಮ್ಮ ಪರಿಸರದ ಅವಿಭಾಜ್ಯ ಅಂಗಗಳು. ಇದು ಏಕೆ ಬಿಬಿಎಂಪಿಗೆ ಅರ್ಥವಾಗುವುದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.