ಸೋಮವಾರದ ವರೆಗೂ ಜೈಲಿನಲ್ಲೇ ಇರಬೇಕು ದುನಿಯಾ ವಿಜಯ್
ಬೆಂಗಳೂರು, ಸೆಪ್ಟೆಂಬರ್ 29: ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಸೋಮವಾರಕ್ಕೆ ನ್ಯಾಯಾಲಯವು ಕಾಯ್ದಿರಿಸಿದೆ.
ಜಿಮ್ ಟ್ರೈನರ್ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ದುನಿಯಾ ವಿಜಯ್ ಅವರನ್ನು ಸೆಪ್ಟೆಂಬರ್ 23 ರಂದು ಬಂಧಿಸಲಾಗಿದೆ. ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ದುನಿಯಾ ವಿಜಯ್ ವಿರುದ್ಧ ಹೇಳಿಕೆ ನೀಡಿದ ಹಲ್ಲೆಗೊಳಗಾದ ಮಾರುತಿ
ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಅವರು ಜಾಮೀನಿಗಾಗಿ ಮೊದಲು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಮನವಿ ಸಲ್ಲಿಸಿದ್ದರು ಆದರೆ ಅಲ್ಲಿ ಅವರ ಅರ್ಜಿ ತಿರಸ್ಕೃತವಾಯಿತು. ಆ ನಂತರ ಅವರು ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು.
ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದೆ. ಹಾಗಾಗಿ ದುನಿಯಾ ವಿಜಯ್ ಅವರಿಗೆ ಇನ್ನೂ ಎರಡು ದಿನಗಳ ಕಾಲ ಜೈಲೇ ಗತಿ ಆಗಲಿದೆ.
ನಟ ದುನಿಯಾ ವಿಜಯ್ ಜಾಮೀನು ಅರ್ಜಿ ವಜಾ, ಜೈಲೇ ಗತಿ
ದುನಿಯಾ ವಿಜಯ್ ಹಾಗೂ ಅವರ ನಾಲ್ಕು ಜನ ಸಂಗಡಿಗರು ಜಿಮ್ ಟ್ರೈನರ್ ಆಗಿರುವ ಮಾರುತಿ ಗೌಡ ಅವರನ್ನು ಸೆಪ್ಟೆಂಬರ್ 22ರಂದು ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.