ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿ ದುರಂತ ನಂತರ ಚೇತರಿಕೆಯತ್ತ ಕೆ.ಆರ್. ಮಾರ್ಕೆಟ್: ಚಿತ್ರಗಳು

|
Google Oneindia Kannada News

Recommended Video

ಕೆಆರ್ ಮಾರುಕಟ್ಟೆಯಲ್ಲಿನ ಕೈಲಾಶ್ ಬಾರ್ ನಲ್ಲಿ ಅಚಾನಕ್ ಬೆಂಕಿ | Oneindia Kannada

ಬೆಂಗಳೂರು, ಜನವರಿ 08: ನಗರದ ಕೆ.ಆರ್. ಮಾರುಕಟ್ಟೆ ಸಮೀಪದಲ್ಲಿರುವ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಬೆಳಗಿನ ಜಾವ ಅಗ್ನಿ ದುರಂತ ಸಂಭವಿಸಿದೆ. ಅವಘಡದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು ಇಬ್ಬರು ಬೆಂಕಿ ತಗುಲಿ ಮೃತಪಟ್ಟರೆ ಇನ್ನುಳಿದ ಮೂರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 2.30 ರ ವೇಳೆಗೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸ್ವಾಮಿ, ಪ್ರಸಾದ್, ಮಹೇಶ್, ಮಂಜುನಾಥ್ ಕೀರ್ತಿ ಮೃತಪಟ್ಟವರು. ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕೈಲಾಶ್ ಬಾರ್ ಅಗ್ನಿ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ!ಕೈಲಾಶ್ ಬಾರ್ ಅಗ್ನಿ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ!

ಘಟನೆ ಸಂಭವಿಸಿದ ಸಂದರ್ಭದಿಂದ ಬಾರ್ ಮಾಲೀಕ ಹಾಗೂ ಮ್ಯಾನೇಜರ್ ಮೊಬೈಲ್ ನ್ನು ಬಂದು ಮಾಡಿಟ್ಟುಕೊಂಡಿದ್ದರು. ಪೊಲೀಸರು ಬಾರ್ ಮಾಲೀಕ ದಯಾಶಂಕರ್ ಅವರನ್ನು ಬಂಧಿಸಿದ್ದಾರೆ. ದಯಾಶಂಕರ ಪರ ವಕೀಲ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬಕ್ಕೆ ತಲಾ 1.5 ಲಕ್ಷ ಪರಿಹಾರ ನೀಡಿದ್ದಾರೆ. ಅಗ್ನಿ ದುರಂತದ ನಂತರ ಕೊಂಚ ಚೇತರಿಕೆ ಕಾಣುತ್ತಿದೆ.

 ಅಗ್ನಿ ದುರಂತದ ಬಳಿಕ ಕೈಲಾಶ್ ಬಾರ್ ಸ್ಥಿತಿ:

ಅಗ್ನಿ ದುರಂತದ ಬಳಿಕ ಕೈಲಾಶ್ ಬಾರ್ ಸ್ಥಿತಿ:

ಸೋಮವಾರ ನಸುಕಿನ ಜಾವ ಕೆ.ಆರ್. ಮಾರುಕಟ್ಟೆಯ ಸಮೀಪದಲ್ಲಿರು ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತದ ನಂತರ ರೆಸ್ಟೋರೆಂಟ್ ಸ್ಥಿತಿಯನ್ನು ನೋಡುತ್ತಾ ಸಾಗಿದ ದಾರಿಹೋಕರು.

ಕೈಲಾಶ್ ಬಾರ್ ಅಗ್ನಿ ಅವಘಡ: ಬಾರ್ ಮ್ಯಾನೇಜರ್ ನಾಪತ್ತೆಕೈಲಾಶ್ ಬಾರ್ ಅಗ್ನಿ ಅವಘಡ: ಬಾರ್ ಮ್ಯಾನೇಜರ್ ನಾಪತ್ತೆ

ಅಗ್ನಿ ದುರಂತದ ಬಳಿಕ ಪೊಲೀಸರ ಭೇಟಿ:

ಅಗ್ನಿ ದುರಂತದ ಬಳಿಕ ಪೊಲೀಸರ ಭೇಟಿ:

ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂರುಮಂದಿ ಮೃತಪಟ್ಟಿದ್ದಾರೆ. ನಂತರ ವಿಧಿ ವಿಜ್ಞಾನ ಪ್ರಯೋಗಾಲಯ ತಂಡದವರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ಸ್ಥಳೀಯರ ತನಿಖೆ ನಡೆಸುತ್ತಿರುವುದು.

ಅಗ್ನಿ ದುರಂತ ಸಂಭವಿಸಿದ ಕೈಲಾಶ್ ಬಾರ್ ಗೆ ಮೇಯರ್ ಭೇಟಿ:

ಅಗ್ನಿ ದುರಂತ ಸಂಭವಿಸಿದ ಕೈಲಾಶ್ ಬಾರ್ ಗೆ ಮೇಯರ್ ಭೇಟಿ:

ಸೋಮವಾರ ನಸುಕಿನ ಜಾವ ಬೆಂಗಳೂರಿನ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ನಡೆದ ಅಗ್ನಿ ದುರಂತದ ಬಳಿಕ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿರುವುದು.

ತರಕಾರಿ ತ್ಯಾಜ್ಯ ತೆರವುಗೊಳಸುತ್ತಿರುವ ಕಾರ್ಮಿಕರು:

ತರಕಾರಿ ತ್ಯಾಜ್ಯ ತೆರವುಗೊಳಸುತ್ತಿರುವ ಕಾರ್ಮಿಕರು:

ಸೋಮವಾರ ಬೆಳಗಿನ ಜಾವ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಅಗ್ನಿ ದುರಂತ ಸಂಭವಿಸಿದ ಬಳಿಕ ಬೆಳಗ್ಗೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಬಳಿ ಬಿಬಿಎಂಪಿ ಕಾರ್ಮಿಕರು ತರಕಾತಿ ತ್ಯಾಜ್ಯವನ್ನು ತೆರವುಗೊಳಸುವುದರಲ್ಲಿ ನಿರತರಾಗಿದ್ದರು. ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಂತಾಗಿದೆ ಎಂದು ವರ್ತಕರು ಅಲವತ್ತುಕೊಳ್ಳುತ್ತಿದ್ದಾರೆ.

 ಡಿಡಿಟಿ ಸಿಂಪಡಿಸುತ್ತಿರುವ ಬಿಬಿಎಂಪಿ ಕಾರ್ಮಿಕರು:

ಡಿಡಿಟಿ ಸಿಂಪಡಿಸುತ್ತಿರುವ ಬಿಬಿಎಂಪಿ ಕಾರ್ಮಿಕರು:

ಸೋಮವಾರ ನಸುಕಿನ ಜಾವ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿದ ಬಳಿಕ ಬೆಳಗ್ಗೆ ಬೆಂಗಳೂರಿನ ಕೆ,.ಆರ್. ಮಾರ್ಕೆಟ್ ನ ಹೋಲ್ ಸೇಲ್ ಮಾರುಕಟ್ಟೆ ಬಳಿ ಬಿಬಿಎಂಪಿ ಕಾಮೀ್ಕರು ಡಿಡಿಟಿ ಸಿಂಪಡಿಸುವಲ್ಲಿ ನಿರತರಾಗಿರುವುದು.

 ತ್ಯಾಜ್ಯ ತೆರವುಗೊಳಿಸುತ್ತಿರುವ ಯಂತ್ರ:

ತ್ಯಾಜ್ಯ ತೆರವುಗೊಳಿಸುತ್ತಿರುವ ಯಂತ್ರ:

ಬೆಂಗಳೂರಿನಲ್ಲಿ ಪ್ರಮುಖ ಸಮಸ್ಯೆಯೇ ತ್ಯಾಜ್ಯವಾಗಿದೆ. ಅದರಲ್ಲೂ ಕೆ.ಆರ್. ಮಾರುಕಟ್ಟೆಯ ಸುತ್ತಮುತ್ತ ಪ್ರತಿನಿತ್ಯ ನೂರಾರು ಜನ ರೈತರು ತಮ್ಮ ಮಳಿಗೆಗಳನ್ನು ತೆರೆದಿರುತ್ತಾರೆ. ಅಲ್ಲಿ ಸಾಕಷ್ಟು ತ್ಯಾಜ್ಯ ಶೇಖರಣೆಯಾಗಿರುತ್ತದೆ. ಬಿಬಿಎಂಪಿ ಕಾರ್ಮಿಕರಿಗೆ ತ್ಯಾಜ್ಯ ತೆರವುಗೊಳಿಸುವುದೇ ದೊಡ್ಡ ತಲೆನೋವಾಗಿದೆ.

English summary
After a fire tragedy in Kailash bar and restaurant in early hours of Monday. KR Market is getting normal as fire and safety and BBMP officials have taken rescue and precautionary majors in a war footing manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X