ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೇಟ್ ತೆರೆದುಕೊಳ್ಳಲಿಲ್ಲವೆಂದು ಗುಂಡು ಹಾರಿಸಿದ ಭೂಪ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 15 : ಇಲ್ಲೊಬ್ಬ ಆಸಾಮಿ ಕುಡಿದ ಮತ್ತಿನಲ್ಲಿ ತನ್ನ ಮನೆ ಗೇಟು ತೆರಯಲು ಗೇಟಿಗೆ ಬಂದೂಕಿನಿಂದ ಗುಂಡು ಹೊಡೆದಿದ್ದಾನೆ.

ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮುನಿಕಾಳಪ್ಪ ಎಂಬುವನು ನಿನ್ನೆ ರಾತ್ರಿ ಚೆನ್ನಾಗಿ ಕುಡಿದು ಬಂದು ಗೇಟು ತೆರೆಯಲು ಪ್ರಯತ್ನಿಸಿದ್ದಾನೆ ಆದರೆ ಗೇಟು ಸರಿಯಾಗಿ ತೆರೆದುಕೊಳ್ಳದೆ ಕೋಪ ಗೊಂಡ ಮುನಿಕಾಳಪ್ಪ ಗೇಟಿಗೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

A drunken man fires on gate to open it

ಬಂದೂಕು ಗುಂಡಿನ ಶಬ್ದ ಕೇಳಿ ಹೌಹಾರಿದ ಅಕ್ಕಪಕ್ಕದ ಮನೆಯವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಆಗಮಿಸಿದ ಪೊಲೀಸರು ಮುನಿಕಾಳಪ್ಪನನ್ನು ವಶಕ್ಕೆ ಪಡೆದು ನಂತರ ಬೇಲ್ ಮೇಲೆ ಬಿಡುಗಡೆ ಮಾಡಿ ಕಳಿಸಿದ್ದಾರೆ.

ಪರವಾನಗಿ ಇರುವ ತನ್ನ ಬಂದೂಕಿನಿಂದಲೇ ಮುನಿಕಾಳಪ್ಪ ಈ ಕೃತ್ಯ ಮಾಡಿದ್ದಾನೆ. ಮೂರು ಸುತ್ತು ಗುಂಡು ಹಾರಿಸಿರುವ ಮುನಿಕಾಳಪ್ಪ ಅವರ ಮೇಲೆ ಪ್ರಕರಣ ದಾಖಲಿಸಿ. ಖಡಕ್ ಎಚ್ಚರಿಕೆ ನೀಡಲಾಗಿದೆ.

English summary
Muniswamy resident of Amruthalli, fires on his house gate to open it while he was on high alcohol. Amruthalli police arrested him and released on bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X