ನೆಲಮಂಗಲ ಬಳಿ 8.ಕಿಮೀ ಟ್ರಾಫಿಕ್ ಜಾಮ್: ಪ್ರಯಾಣಿಕರು ಕಂಗಾಲು
Recommended Video
ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ಮಳೆ ಹಾಗೂ ಮರದ ದಿಮ್ಮಿಗಳು ರಸ್ತೆಯಲ್ಲಿ ಬಿದ್ದಿದ್ದರಿಂದ ಸುಮಾರು 8 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಹ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ
ನೆಲಮಂಗಲದ ಮಾಕಳಿ ಬಳಿ ಬೆಳಗಿನಜಾವ 4 ಗಂಟೆಯಿಂದಲೇ ಟ್ರಾಫಿಕ್ ಜಾಮ್ ಉಂಟಾಗಿದೆ, ಮರದ ದಿಮ್ಮಿ ಹೊತ್ತು ತರುತ್ತಿದ್ದ ಲಾರಿ ಮಗುಚಿ ದಿಮ್ಮಿಗಳು ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದು ವಾಹನಗಳು ಮುಖ್ಯ ರಸ್ತೆಯ ಮೂಲಕ ಹೋಗಲಾರದಂತೆ ಆಗಿ ಸಂಚಾರ ದಟ್ಟಣೆ ಉಂಟಾಗಿತ್ತು.
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಇನ್ನೆರಡು ದಿನ ಮುಂದುವರಿಯುವ ಸೂಚನೆ
ಸರ್ವೀಸ ರಸ್ತೆ ಇಕ್ಕಟ್ಟಾಗಿರುವುದರಿಂದ ರಸ್ತೆಯ ಮೇಲೆ ಸಾವಿರಾರು ಪ್ರಯಾಣಿಕರು ನಾಲ್ಕೈದು ತಾಸು ನಿಲ್ಲುವ ಪರಿಸ್ಥಿತಿ ಎದುರಾಯಿತು, ಬೆಳಗಿನ ಜಾವ ಬೆಂಗಳೂರು ಬಂದು ಸೇರಬೇಕಾದ ನೂರಾರು ವಾಹನಗಳು ಎಸಿ ಹಾಗೂ ನಾನ್ ಎಸಿ ಬಸ್ ಗಳು ಹಾಗೂ ಸರಕು ಸಾಗಾಣಿಕೆಯ ಸಾವಿರಾರು ಲಾರಿಗಳು ಜಾಮ್ ಆಗಿದ್ದವು.
ಪ್ರಯಾಣಿಕರು ಬೆಂಗಳೂರು ಬಂದು ತಲುಪುವುದು ತುಂಬಾ ತಡವಾಯಿತು. ಸೋಮವಾರವಾದ್ದರಿಂದ ಸರ್ಕಾರಿ ಕೆಲಸಗಳು, ಖಾಸಗಿ ಕಂಪನಿ ಕೆಲಸಗಳಿಗೆ ಬರುವ ನೌಕರರಿಗೆ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಇಷ್ಟೇ ಅಲ್ಲದೆ ಬೆಂಗಳೂರಿನಾದ್ಯಂತ ಭಾನುವಾರ ಸಂಜೆಯಿಂದ ಆರಂಭವಾಗಿರುವ ಮಳೆ ಇನ್ನು ನಿಂತಿಲ್ಲ ಹೀಗಾಗಿ ಬೆಂಗಳೂರು ತಲುಪಿದರೂ ಪ್ರಯಾಣಿಕರು ಅವರವರ ಸ್ಥಳಗಳಿಗೆ ತಲುಪುವುದು ಕಷ್ಟವಾಯಿತು.