ನಮ್ಮ ಮೆಟ್ರೋಗೆ ಪರೋಕ್ಷವಾಗಿ ತಟ್ಟಿದೆ ಬಂದ್ ಬಿಸಿ!
ಬೆಂಗಳೂರು, ಜನವರಿ 25 : ಮಹಾದಾಯಿ ನದಿ ವಿವಾದ ಇತ್ಯರ್ಥಕ್ಕಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರೂ ಮೆಟ್ರೋಗೆ ಬಂದ್ ನ ಬಿಸಿ ಅಷ್ಟಾಗಿ ತಟ್ಟಿಲ್ಲ.
ನಮ್ಮ ಮೆಟ್ರೋ ಸಾರ್ವಜನಿಕರಿಗೆ ಸಹಾಯವಾಗಲೆಂದು ಎಂದಿನಂತೆ ಸಂಚಾರ ಪ್ರಾರಂಭಿಸಿತ್ತು. ಆದರೆ ಪ್ರಯಾಣಿಕಕರ ಸಂಖ್ಯೆ ಕಡಿಮೆಯಿತ್ತು. ಕಳೆದ ವಾರ ಜನವರಿ 18 ನೇ ತಾರೀಕಿನ ಗುರುವಾರಕ್ಕೆ ಹೋಲಿಸಿದೆ ಕೇವಲ ಶೇ.50 ರಷ್ಟು ಮಂದಿ ಗುರುವಾರ ಮೆಟ್ರೋ ಬಳಕೆ ಮಾಡಿದ್ದಾರೆ. ಜನವರಿ18 ರಂದು ಬೆಳಗ್ಗೆ 5 ರಿಂದ ಮಧ್ಯಾಹ್ನ1 ಗಂಟೆಯವರೆಗೆ 1,48,308 ಮಂದಿ ಮೆಟ್ರೋ ಬಳಕೆ ಮಾಡಿದ್ದರು. ಶೇ.50 ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆಎಂದು ನಮ್ಮ ಮೆಟ್ರೋದ ಪ್ರಧಾನ ವ್ಯವಸ್ಥಾಪಕ ಯು.ಎ.ವಸಂತರಾವ್ ತಿಳಿಸಿದ್ದಾರೆ.
Recommended Video
ಆದರೆ ಗುರುವಾರ ಬೆಳಗ್ಗೆ 5 ರಿಂದ ಮಧ್ಯಾಹ್ನ1 ರವರೆಗೆ ಎರಡೂ ಮಾರ್ಗಗಳು ಸೇರಿ ಒಟ್ಟು ಕೇವಲ 69,394 ಮಂದಿ ಪ್ರಯಾಣ ಮಾಡಿದ್ದಾರೆ. ಕರ್ನಾಟಕ ಬಂದ್ ನೇರವಾಗಿ ನಮ್ಮ ಮೆಟ್ರೋ ಮೇಲೆ ಪರಿಣಾಮ ಬೀರದಿದ್ದರೂ ಪರೋಕ್ಷವಾಗಿ ಬಂದ್ ನ ಬಿಸಿ ನಮ್ಮ ಮೆಟ್ರೋಗೂ ತಟ್ಟಿದೆ.