ಬೆಂಗಳೂರು : ಶಾಲೆಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ
ಬೆಂಗಳೂರು, ಜ.2 : ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಮಡಿವಾಳದ ರೂಪೇನ ಅಗ್ರಹಾರ ಬಳಿಯ ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಶುಕ್ರವಾರ
ಬೆಳಗ್ಗೆ
ರಸ್ತೆಯಲ್ಲಿ
ಸಿಕ್ಕಿದ್ದ
ಜಿಲೆಟಿನ್
ಕಡ್ಡಿಗಳನ್ನು
ಶಾಲೆಗೆ
ತಂದಿದ್ದ
ವಿದ್ಯಾರ್ಥಿಗಳು
ಅದಕ್ಕೆ
ವೈಯರ್
ಫಿಕ್ಸ್
ಮಾಡಿ,
ಸ್ವಿಚ್
ಬೋರ್ಡ್
ಆನ್
ಮಾಡಿದಾಗ
ಅದು
ಸ್ಫೋಟಗೊಂಡಿದೆ.
ಘಟನೆಯಲ್ಲಿ
ಗಾಯಗೊಂಡ
ಮೂವರು
ವಿದ್ಯಾರ್ಥಿಗಳನ್ನು
ಇಎಸ್ಐ
ಆಸ್ಪತ್ರೆಗೆ
ದಾಖಲಿಸಲಾಗಿದೆ.
[ಬೆಂಗಳೂರು
ಸ್ಫೋಟದ
ರುವಾರಿ
ಬಿಹಾರದಲ್ಲಿ
ಸೆರೆ?]
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶುಕ್ರವಾರ
ಬೆಳಗ್ಗೆ
ವಿದ್ಯಾರ್ಥಿಗಳು
ಶಾಲೆಗೆ
ಆಗಮಿಸುವಾಗ
ಶಾಲೆಯ
ಸಮೀಪ
ಕಸದ
ರಾಶಿಯಲ್ಲಿ
ಸಿಕ್ಕ
ಜಿಲೆಟಿನ್
ಕಡ್ಡಿಗಳನ್ನು
ಶಾಲೆಗೆ
ತಂದಿದ್ದರು.
ಮಧ್ಯಾಹ್ನ
ಅದಕ್ಕೆ
ವಿದ್ಯುತ್
ಸಂಪರ್ಕಿಸಿದಾಗ
ಅದು
ಸ್ಫೋಟಗೊಂಡಿದೆ.
ಶಾಲೆಯಲ್ಲಿ
ಉಂಟಾದ
ಶಬ್ದ
ಕೇಳಿ
ಶಿಕ್ಷಕರು
ಕೊಠಡಿಗೆ
ಆಗಮಿಸಿದಾಗ
ಮೂವರು
ವಿದ್ಯಾರ್ಥಿಗಳು
ಗಾಯಗೊಂಡಿದ್ದರು.
ತಕ್ಷಣ
ಅವರನ್ನು
ಇಎಸ್ಐ
ಆಸ್ಪತ್ರೆಗೆ
ದಾಖಲು
ಮಾಡಲಾಗಿದೆ.
[ಬೆಂಗಳೂರು
ಬಾಂಬ್
ಸ್ಫೋಟಕ್ಕೆ
ಮಹಿಳೆ
ಬಲಿ]
ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಮತ್ತು ಪೊಲೀಸರು ಕಸದ ರಾಶಿ ಇರುವ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ. ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಜಿಲೆಟಿನ್ ಕಡ್ಡಿಗಳನ್ನು ಬಂಡೆ ಒಡೆಯಲು ತಂದಿರಬಹುದು ಎಂದು ಶಂಕಿಸಲಾಗಿದೆ.