ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಳೆಗೆ ಮತ್ತೊಂದು ಬಲಿ, ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15 : ಬೆಂಗಳೂರಿನ ಮಳೆ ಮತ್ತೊಂದು ಬಲಿ ಪಡೆದಿದೆ. 16 ವರ್ಷದ ಬಾಲಕಿಯೊಬ್ಬಳು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾಳೆ. ಶುಕ್ರವಾರ ನಗರದಲ್ಲಿ ಸುರಿದ ಮಳೆಗೆ 5 ಜನರು ಬಲಿಯಾಗಿದ್ದರು.

In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

ಸಿ.ವಿ.ರಾಮನ್ ನಗರದ ಕೃಷ್ಣಪ್ಪ ಗಾರ್ಡನ್‌ನಲ್ಲಿ ಭಾನುವಾರ ಬೆಳಗ್ಗೆ ನರಸಮ್ಮ (16) ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಬಾಲಕಿ ಕೊಚ್ಚಿ ಹೋದ ಸ್ಥಳದಿಂದ ಸುಮಾರು 400 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.

16 year old girl washed away in Bengaluru

ಕಲಬುರಗಿ ಮೂಲದ ವೆಂಕಪ್ಪ, ಕಾಶಿಬಾಯಿ ದಂಪತಿಯ ಪುತ್ರಿ ನರಸಮ್ಮ ಇಂದು ಬೆಳಗ್ಗೆ ಶೌಚಕ್ಕೆ ಹೋದ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ನಸರಮ್ಮನಿಗೆ ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

115 ವರ್ಷಗಳ ದಾಖಲೆ ಮುರಿಯಲು ಸಜ್ಜಾಗಿದೆ ಬೆಂಗಳೂರು ಮಳೆ115 ವರ್ಷಗಳ ದಾಖಲೆ ಮುರಿಯಲು ಸಜ್ಜಾಗಿದೆ ಬೆಂಗಳೂರು ಮಳೆ

ಮಗಳ ಶವ ಪತ್ತೆ : ಶುಕ್ರವಾರ ನಗರದಲ್ಲಿ ಸುರಿದ ಮಳೆಯ ವೇಳೆ ಕೊಚ್ಚಿ ಹೋಗಿದ್ದ ತಾಯಿ, ಮಗಳ ಶವಕ್ಕಾಗಿ ಇಂದು ಹುಡುಕಾಟ ನಡೆಸಲಾಗುತ್ತಿತ್ತು. ಮಗಳು ಪುಷ್ಪಾ ಶವ ಕುಂಬಳಗೋಡು ಬಳಿ ಭಾನುವಾರ ಸಿಕ್ಕಿದೆ. ನಿಂಗಮ್ಮ ಶವಕ್ಕಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.

English summary
16 year old Narasamma washed away in raja kaluve Krishnappa garden C.V.Raman Nagar, Bengaluru on October 15, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X