ಕುಂ. ವೀರಭದ್ರಪ್ಪ ಹೊಸ ಕಾದಂಬರಿ 'ಕತ್ತೆಗೊಂದು ಕಾಲ'
ಬಳ್ಳಾರಿ, ಮಾರ್ಚ್ 10 : ವಿಭಿನ್ನ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕಾದಂಬರಿಗಳನ್ನು ಬರೆಯುವ ಬಿಸಿಲೂರ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ಹೊಸ 'ಕತ್ತೆಗೊಂದು ಕಾಲ' ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಆಕರ್ಷಕವಾದ ವ್ಯಂಗ್ಯಚಿತ್ರದ ಮುಖಪುಟವನ್ನು ಹೊಂದಿರುವ ಈ ಪುಸ್ತಕದ ಶೀರ್ಷಿಕೆಯೂ ಅಷ್ಟೇ ಗಮನಾರ್ಹವಾಗಿದೆ. ಅರಮನೆ, ರಾಯಲುಸೀಮ, ನಿಜಲಿಂಗ ಹೀಗೇ ಕನ್ನಡದ ನೆಲ, ಕರ್ನಾಟಕದ ಗಡಿಭಾಗದ ರಾಯಲಸೀಮೆ ಪ್ರಭಾವದಲ್ಲೇ ಬರಹವನ್ನು ಚಿತ್ರೀಕರಿಸಿ, ಖ್ಯಾತಿ ಪಡೆದಿರುವ ಅವರ 'ಕತ್ತೆಗೊಂದು ಕಾಲ' ಕಾದಂಬರಿ ಸಾಹಿತ್ಯಾಸಕ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಗೌರಿ ಹತ್ಯೆ ಪ್ರಜಾಪ್ರಭುತ್ವವನ್ನು ಕತ್ತಲಲ್ಲಿರಿಸಿದೆ: ಕುಂ.ವೀರಭದ್ರಪ್ಪ
ಲೇಖಕರ ಆಪ್ತರ ಪ್ರಕಾರ, 'ಪುಸ್ತಕದ ಮುದ್ರಣ ಬಹುತೇಕ ಪೂರ್ಣಗೊಂಡಿದೆ. ಪುಸ್ತಕ ಬಿಡುಗಡೆ ದಿನಾಂಕ ಮತ್ತು ಸ್ಥಳವೂ ನಿಗದಿ ಆಗುವ ಹಂತದಲ್ಲಿದೆ. ಎಲ್ಲ ಮಾಹಿತಿಯೂ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ' ಎನ್ನುತ್ತಾರೆ.
ಕುಂ.ವೀರಭದ್ರಪ್ಪ ಅವರ ಕತೆ- ಕಾದಂಬರಿಗಳಲ್ಲಿ ಪಾತ್ರಗಳು ಅದ್ಭುತವಾಗಿರುತ್ತವೆ ಜತೆಗೆ ನಮ್ಮ ಮಧ್ಯೆಯೂ ನಿತ್ಯ ಕಾಣಸಿಗುವಂಥವಾಗಿರುತ್ತವೆ. ಭಳಾರೇ ವಿಚಿತ್ರಂ ಕಥಾ ಸಂಕಲನ, ಗಾಂಧಿಕ್ಲಾಸ್ ಕಾದಂಬರಿಯನ್ನು ಪದೇ ಪದೇ ನೆನಪಿಸಿಕೊಳ್ಳುವಂತಾಗುತ್ತದೆ. ಇವರ 'ಕೂರ್ಮಾವತಾರ' ಕಥೆಯು ಸಿನಿಮಾ ಆಗಿದೆ.