ಆನಂದ್ ಸಿಂಗ್ ಒಂದೇ ಕಲರ್ ಶರ್ಟ್ ಧರಿಸುವ ಉದ್ದೇಶವೇನು?
ಬಳ್ಳಾರಿ, ನವೆಂಬರ್ 29: ಹೊಸಪೇಟೆ ಉಪ ಚುನಾವಣಾ ರಣ ಕಣ ರಂಗೇರುತ್ತಿದ್ದು, ಇನ್ನೇನು ಚುನಾವಣಾ ದಿನ ಸಮೀಪಿಸುತ್ತಿದ್ದಂತೆಯೇ ಆಭ್ಯರ್ಥಿಗಳಿಂದ ಕೊನೆಯ ಹಂತದ ಪ್ರಚಾರದ ಕಸರತ್ತು ಮಾಡ್ತಿದ್ದಾರೆ.
ಅದರಲ್ಲಿಯೂ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ಭರ್ಜರಿ ಸುದ್ದಿಯಲ್ಲಿದ್ದಾರೆ. ಅದೇನ್ ಅಂದ್ರೆ ಅವರು ಚುನಾವಣಾ ಪ್ರಚಾರದಲ್ಲಿ ಒಂದೇ ಬಣ್ಣದ ಶರ್ಟ್ ನ್ನು ಧರಿಸುವ ಮೂಲಕ ಹಲವರನ್ನು ಹುಬ್ಬೇರಿಸಿದ್ದಾರೆ.
ಗಣಿನಾಡಿನಲ್ಲಿ ಧೂಳ್ ಎಬ್ಬಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ!
ಆನಂದ್ ಸಿಂಗ್ ಜ್ಯೋತಿಷಿಗಳ ಮೊರೆ ಹೋಗಿದ್ದಾರಾ ಎಂಬ ಪ್ರಶ್ನೆ ಕಾಡ್ತಿದೆ. ಎಲ್ಲಾ ಕಡೆ ಕೇಸರಿ ಪರ್ಪಲ್ ಕಲರ್ ನ ಶರ್ಟ್ ಧರಿಸುತ್ತಿದ್ದಾರೆ. ನವೆಂಬರ್ 16 ರಿಂದಲೂ ಆನಂದ್ ಸಿಂಗ್ ಒಂದೇ ಬಣ್ಣದ ಶರ್ಟ್ ಧರಿಸುವ ಹಿಂದಿನ ಉದ್ದೇಶ ಏನಿರಬಹುದು ಎಂದು ಕೇಳಿದರೆ "ನನಗೆ ಈ ಕಲರ್ ನ ಶರ್ಟ್ ಎಂದರೆ ತುಂಬಾ ಇಷ್ಟ ಹಾಗಾಗಿ ಹಾಕಿಕೊಳ್ಳುತ್ತಿದ್ದೇನೆ ಎಂದರು.
ಯಡಿಯೂರಪ್ಪ ಇದ್ದಲ್ಲಿಗೆ ಚಪ್ಪಲಿ ತಂದುಕೊಟ್ಟ ಆನಂದ್ಸಿಂಗ್
ಒಂದೇ ಅಂಗಡಿಯಲ್ಲಿ 20 ಶರ್ಟ್ ಖರೀದಿಸಿದ್ದಾರಂತೆ ಆನಂದ್ ಸಿಂಗ್. ಚುನಾವಣೆ ಸಮೀಪಿಸುತ್ತಿರುವುದರಿಂದ ನೆಗಟಿವ್ ಎನರ್ಜಿಯಿಂದ ಪಾರಾಗಲು ಈ ಶರ್ಟ್ ಧರಿಸುತ್ತಿದ್ದಾರಾ ಅಂದುಕೊಳ್ಳಬಹುದು. ಉಪ ಚುನಾವಣೆಯು ಡಿಸೆಂಬರ್ 05 ರಂದು ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.