ಮಾರ್ಚ್ 19ರ ತನಕ ವಿಜಯನಗರ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳು ಬಂದ್
ಹೊಸಪೇಟೆ(ವಿಜಯನಗರ ಜಿಲ್ಲೆ), ಮಾ.16: ವಿಜಯನಗರ ಜಿಲ್ಲೆಯಲ್ಲಿ ಹೋಳಿ ಹಬ್ಬ ಮತ್ತು ಷಬ್-ಎ-ಬರಾತ್ ಹಿನ್ನೆಲೆಯಲ್ಲಿ ಮಾ.16ರ ರಾತ್ರಿ 10ರಿಂದ ಮಾ.19ರ ಬೆಳಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಹೋಳಿ ಮತ್ತು ಷಬ್-ಎ-ಬರಾತ್ ಹಬ್ಬಗಳನ್ನು ಆಚರಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮತ್ತು ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಮದ್ಯದ ಅಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡದಂತೆ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಈ ಆದೇಶವನ್ನು ಅನುಷ್ಠಾನಕ್ಕೆ ತರಲು ಅಬಕಾರಿ ಇಲಾಖೆಯ ಉಪ ಆಯುಕ್ತರು ಹಾಗೂ ಜಿಲ್ಲಾ ಪೆÇಲೀಸ್ ಅಧೀಕ್ಷಕರು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
***
ಮಾ.17
ರಿಂದ
22
ವರೆಗೆ
ನಡೆಯಲಿರುವ
ಜಾತ್ರೆಗಳಿಗೆ
ಉರುಸ್ಗೆ
ವಿಶೇಷ
ಬಸ್
ಸೌಕರ್ಯ
ಬಳ್ಳಾರಿ:
ಮಾ.17ರಿಂದ
ಮಾ.22ರವರೆಗೆ
ನಡೆಯಲಿರುವ
ಜಾತ್ರೆಗಳು
ಮತ್ತು
ಉರುಸ್ಗಳಿಗೆ
ವಿಶೇಷ
ಬಸ್
ಸೌಕರ್ಯವನ್ನು
ಬಳ್ಳಾರಿ
ಎನ್ಇಕೆಎಸ್ಆರ್ಟಿಸಿ
ಕಲ್ಪಿಸಿದೆ.
ಕುರುಗೋಡು
ಪಟ್ಟಣದಲ್ಲಿ
ಶ್ರೀ
ದೊಡ್ಡಬಸವೇಶ್ವರ
ಸ್ವಾಮಿ
ಜಾತ್ರೆ,
ಮಾ.
18
ರಂದು,
ನಾಯಕನಹಟ್ಟಿ
ಶ್ರೀ
ಗುರುತಿಪ್ಪೇರುದ್ರಸ್ವಾಮಿ
ಜಾತ್ರೆ
ಮಾ.20
ರಂದು
ಹಾಗೂ
ಗದಗ
ಜಿಲ್ಲೆಯ
ನವಲಗುಂದ
ತಾಲೂಕಿನ
ಯಮನೂರು
ಉರುಸ್
ಮಾ.20
ಮತ್ತು
21
ರಂದು
ಜರುಗಲಿವೆ.
ಈ ಜಾತ್ರೆಗಳು ಮತ್ತು ಉರುಸ್ಗೆ ಬಳ್ಳಾರಿ, ಕಂಪ್ಲಿ, ಸಂಡೂರು, ಸಿರುಗುಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳುತ್ತಿರುವ ಹಿನ್ನೆಲೆ ಭಕ್ತಾಧಿಗಳ ಅನುಕೂಲಕ್ಕಾಗಿ ಮಾ.17 ರಿಂದ ಆರು ದಿನಗಳವರೆಗೆ ವಿಶೇಷ ಸಾರಿಗೆ ಸೌಕರ್ಯವನ್ನು ಬಳ್ಳಾರಿ ವಿಭಾಗದಿಂದ ಒದಗಿಸಲಾಗುತ್ತಿದೆ. ಈ ವಿಶೇಷ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಕರಸಾನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.