ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿರು ಬಿಸಿಲು, ಕೊರೊನಾ ಮಾರ್ಗಸೂಚಿ ಲೆಕ್ಕಕ್ಕಿಲ್ಲ: ಹಂಪಿಯಲ್ಲಿ ಜನವೋ ಜನ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಏಪ್ರಿಲ್ 5: ಭಾನುವಾರ ರಜೆ ದಿನವಾಗಿದ್ದರಿಂದ ಕೊರೊನಾ ಕಠಿಣ ಮಾರ್ಗಸೂಚಿಗಳನ್ನು ಲೆಕ್ಕಿಸದೇ ಪ್ರವಾಸಿಗರು ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಗೆ ಆಗಮಿಸಿದ್ದರು.

ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ 2ನೇ ಅಲೆ ಕಾಣಿಸಿಕೊಂಡಿದ್ದು, ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆಡ ಮಾಡಿದೆ. ಒಂದೇ ಕಡೆ ಹೆಚ್ಚು ಜನರು ಸೇರದಂತೆ ಸೂಚಿಸಿದ್ದರೂ, ಹಂಪಿಯಲ್ಲಿ ಜನಸಾಗರ ನೆರೆದಿತ್ತು.

ಕೊರೊನಾ ಸೋಂಕು ಹರಡುವುದನ್ನು ಲೆಕ್ಕಿಸದೇ, ಸಾಮಾಜಿಕ ಅಂತರವಿಲ್ಲದೆ, ಬಿರು ಬಿಸಿಲಿನ ನಡುವೆಯೂ ಪ್ರವಾಸಿ ತಾಣ ಹಂಪಿಗೆ ಪ್ರವಾಸಿಗರು ಆಗಮಿಸಿದ್ದರು.

Vijayanagara: People Visited To A World Famous Tourist Spot Hampi

ಪ್ರವಾಸಿಗರು ತಮ್ಮ ಕುಟುಂಬಗಳೊಂದಿಗೆ ಹಂಪಿಯ ಮನಮೋಹಕ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ತೇರು ಬೀದಿ, ಕಲ್ಲಿನ ರಥ, ಸಾಸಿವೆ ಕಾಳು ಗಣೇಶ್, ಬಡವಿ ಲಿಂಗ ದೇವಸ್ಥಾನ, ಹಂಪಿ ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಸ್ಥಾನ ಹೀಗೆ ಹಲವು ದೇವಸ್ಥಾನ ಮತ್ತು ಸ್ಮಾರಕಗಳನ್ನು ನೋಡಿಕೊಂಡು ಹೋದರು

ವೀಕೆಂಡ್ ಆಗಿರುವ ಕಾರಣ ಹೆಚ್ಚಿನ ಜನರು ಹಂಪಿಗೆ ಆಗಮಿಸುತ್ತಿದ್ದು, ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಇದರಿಂದ ಸ್ಥಳೀಯ ಜನರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ.

English summary
As Sunday was a holiday, More people visited the world famous tourist destination Hampi, amidst covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X