10 ದಿನಗಳಲ್ಲೇ ಬಳ್ಳಾರಿ ಪಾಲಿಕೆ ಆಯುಕ್ತೆ ದಿಢೀರ್ ವರ್ಗಾವಣೆ
ಬಳ್ಳಾರಿ, ನವೆಂಬರ್ 24: ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಬಂದಿದ್ದ ಪ್ರೀತಿ ಗೆಹ್ಲೋಟ್ ಕೇವಲ 10 ದಿನಗಳಲ್ಲೇ ಮತ್ತೆ ದಿಢೀರ್ ವರ್ಗಾವಣೆಯಾಗಿದ್ದಾರೆ. ಕಳೆದ ಹತ್ತು ದಿನದ ಹಿಂದೆಯಷ್ಟೇ ಪ್ರೀತಿ ಗೆಹ್ಲೋಟ್ ಅಧಿಕಾರ ಸ್ವೀಕರಿಸಿದ್ದರು.
ನವೆಂಬರ್ 12 ರಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ನೇಮಕವಾಗಿದ್ದ 2016ರ ಬ್ಯಾಚಿನ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್, ಅದಕ್ಕೂ ಮೊದಲು ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತೆಯಾಗಿ ವರ್ಗವಾಗಿದ್ದರು.
ಬಳ್ಳಾರಿ; ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಆಹ್ವಾನ
ಅದನ್ನು ರದ್ದುಪಡಿಸಿ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಸರ್ಕಾರ ನೇಮಕ ಮಾಡಿತ್ತು. ಇದೀಗ ಬಳ್ಳಾರಿಗೆ ಬಂದು ಹತ್ತೇ ದಿನದಲ್ಲಿ ಬಳ್ಳಾರಿಯಿಂದಲೂ ಪ್ರೀತಿ ಗೆಹ್ಲೋಟ್ ಎತ್ತಂಗಡಿಯಾಗಿದ್ದಾರೆ.
ಕೆಎಎಸ್ ಅಧಿಕಾರಿ ಎನ್.ಮಹೇಶ ಬಾಬು ಬಳ್ಳಾರಿ ಪಾಲಿಕೆಯ ನೂತನ ಆಯುಕ್ತರಾಗಿ ನೇಮಕಗೊಂಡಿದ್ದು, ಎನ್.ಮಹೇಶ ಬಾಬು ಪ್ರಸ್ತುತ ಕಾರವಾರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದಾರೆ.
ಪಾಲಿಕೆ ಆಯುಕ್ತರ ಹುದ್ದೆಯನ್ನು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಸರಿಸಮಾನವಾಗಿ ಮೇಲ್ದರ್ಜೆಗೆ ಏರಿಸಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ.