ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಏನಿದ್ದರೂ ಸ್ವಚ್ಛ, ಪ್ರಾಮಾಣಿಕ ಆಡಳಿತ -ಶ್ರೀರಾಮುಲು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ 26: "ಕಳೆದ 14 ತಿಂಗಳುಗಳಿಂದ ಇದ್ದ ಭ್ರಷ್ಟ ಸರ್ಕಾರ ಪತನವಾಗಿದೆ. ಇನ್ನೇನಿದ್ದರೂ ಸ್ವಚ್ಛ, ಪ್ರಾಮಾಣಿಕ ಆಡಳಿತ ನಡೆಯುತ್ತದೆ. ಸದನದಲ್ಲಿ ನಾವು ಗೆದ್ದಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಶಾಸಕ ಶ್ರೀರಾಮುಲು.

"ಯಡಿಯೂರಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನಾನೂ ಅಲ್ಲಿಗೆ ಹೋಗುತ್ತಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ, ಸ್ವಚ್ಛ ಪ್ರಾಮಾಣಿಕ ಆಡಳಿತ, ಭದ್ರತೆ ನೀಡಲು ಬಿಎಸ್ವೈ ಸಿಎಂ ಆಗ್ತಾರೆ- 40 ವರ್ಷಗಳ‌ ಕಾಲ ರಾಜ್ಯಕ್ಕಾಗಿ ದುಡಿದಿದ್ದಾರೆ. ಅವರ ಶ್ರಮಕ್ಕೆ ಫಲ ಸಿಕ್ಕಿದೆ. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲಿ" ಎಂದು ಹಾರೈಸಿದರು.

 ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಿ; ವೈರಲ್ ಆಗಿದೆ ಅಭಿಮಾನಿಗಳ ಈ ಪೋಸ್ಟ್ ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಿ; ವೈರಲ್ ಆಗಿದೆ ಅಭಿಮಾನಿಗಳ ಈ ಪೋಸ್ಟ್

ತಮಗೆ ಡಿಸಿಎಂ ಹುದ್ದೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಜನರು ನನ್ನನ್ನು ಗುರುತಿಸಿದ್ದಾರೆ. ನಾನು ಸ್ಥಾನಮಾನಕ್ಕಾಗಿ ದುಡಿಯೋನಲ್ಲ. ಪಕ್ಷಕ್ಕಾಗಿ ದುಡಿಯುವವನು. ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ. ಜನರ ಭಾವನೆಗೆ ನಾನು ಬೆಲೆ ಕೊಡುವೆ" ಎಂದರು.

Sriramulu Reacts On New Bjp Government

ಮೂವರು ಶಾಸಕರ ಅನರ್ಹತೆ ವಿಚಾರದ ಕುರಿತು ಮಾತನಾಡುತ್ತಾ, "ಈ ವಿಷಯದಲ್ಲಿ ಪಕ್ಷಪಾತ ಆಗಿದೆ. ಇದು ಸರಿಯಲ್ಲ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕುತಂತ್ರದ ರಾಜಕಾರಣ ಮಾಡ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
"People now can expect clean and honest administration" said B Sriramulu in Ballari. "The 14 months corrupted government has fall. And from now on there will be a clean, honest administration" he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X