ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಕೇಸ್ ಬಗ್ಗೆ ಶ್ರೀರಾಮುಲು ವಿಚಿತ್ರ ಹೇಳಿಕೆ

|
Google Oneindia Kannada News

Recommended Video

ಜನಾರ್ಧನ ರೆಡ್ಡಿ ಬಗ್ಗೆ ವಿಚಿತ್ರ ಹೇಳಿಕೆ ಕೊಟ್ಟ ಬಿ ಶ್ರೀರಾಮುಲು | Oneindia Kannada

ಬಳ್ಳಾರಿ, ನವೆಂಬರ್ 7: ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಜನಾರ್ದನ ರೆಡ್ಡಿ ಮೇಲಿನ ಆರೋಪದ ಕುರಿತು ಶ್ರೀರಾಮುಲು ಅವರ ಮಾತಿದು.

ದೀಪಾವಳಿ ವಿಶೇಷ ಪುರವಣಿ

ಬಳ್ಳಾರಿಯಲ್ಲಿ ಬುಧವಾರ ಚುಟುಕು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ತನ್ನ ಕೆಲಸ ಮಾಡಲಿದೆ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ನಾನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ ಜನಾರ್ದನ ರೆಡ್ಡಿ ಅವರು ನನ್ನ ಸ್ನೇಹಿತರು ಹೌದು ಆದರೆ ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಬಹುಕೋಟಿ ಮೋಸ ಪ್ರಕರಣ: ಸಿಸಿಬಿಯಿಂದ ಜನಾರ್ದನ ರೆಡ್ಡಿ ಹುಡುಕಾಟ ಬಹುಕೋಟಿ ಮೋಸ ಪ್ರಕರಣ: ಸಿಸಿಬಿಯಿಂದ ಜನಾರ್ದನ ರೆಡ್ಡಿ ಹುಡುಕಾಟ

ಹಾಗೆಯೇ ಜನಾರ್ದನ ರೆಡ್ಡಿ ಮೇಲಿನ ಸಿಸಿಬಿ ಪ್ರಕರಣದ ಕುರಿತು ಹೆಚ್ಚು ಮಾತನಾಡಲು ಅವರು ನಿರಾಕರಿಸಿದ್ದಾರೆ. ಜನಾರ್ದನ ರೆಡ್ಡಿ ಅವರು ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಾಯಿಸಿಕೊಳ್ಳಲು ಚಿನ್ನದ ಡೀಲ್ ಮಾಡಿದ್ದರು,

ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?ಶ್ರೀರಾಮುಲುಗೆ ಅತಿಯಾದ ಆತ್ಮವಿಶ್ವಾಸವೇ ಮುಳ್ಳಾಗಿ ಪರಿಣಮಿಸಿತೇ..?

Sriramulu keeps distance to react on Reddy case

ಅಷ್ಟೇ ಅಲ್ಲದೆ ಹಣವನ್ನು ಪಡೆದು ಚಿನ್ನ ನೀಡದೆ ನಕಲಿ ರಶೀದಿ ತೋರಿಸಿ ವಂಚನೆ ಮಾಡಿದ್ದರು ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಹುಡುಕಾಟದಲ್ಲಿದ್ದಾರೆ. ಈ ವಿಚಾರ ಕುರಿತು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು ನನಗೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲ, ನಾನು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೆ, ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಹೇಳಿದರು.

English summary
Close friend of Janardhan Reddy and former minister B.Sriramulu has denied to react on CCB case against the farmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X