ಗ್ರಾಮಕ್ಕೆ ಬಾರದಂತೆ ಕರೊನಾಮ್ಮಗೆ ಗ್ರಾಮಸ್ಥರ ವಿಶೇಷ ಪೂಜೆ!
ವಿಜಯನಗರ, ಮೇ 30; ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ಗ್ರಾಮಸ್ಥರು ಕರೊನಾಮ್ಮನಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇಡೀ ಗ್ರಾಮದ ಜನರು ಭಕ್ತಿಯಿಂದ ಪೂಜೆ ಮಾಡಿ ಊರಾಚೆ ಇರುವ ಇರುವ ಬೇವಿನ ಮರದ ಬಳಿ ಬಿಟ್ಟು ಬಂದಿದ್ದಾರೆ.
ಈ ಗ್ರಾಮದಲ್ಲಿ ಒಂದು ದಿನ ಮುಂಚಿತವಾಗಿ ಎಲ್ಲ ಸೇರಿ ಪೂಜೆ ಮಾಡುವ ಕುರಿತು ಡಂಗುರ ಸಾರಲಾಗಿತ್ತು. ಪ್ರತಿಯೊಂದು ಮನೆಯಿಂದ ಪೂಜೆ ಮಾಡಿ ಕರೊನಾಮ್ಮನನ್ನು ಊರಾಚೆಗೆ ಕಳುಹಿಸಿ ಕೊಡಬೇಕೆಂದು ಮಾಹಿತಿ ನೀಡಲಾಗಿತ್ತು.
ವಿಜಯನಗರ; ಕೋವಿಡ್ ಕೇರ್ ಸೆಂಟರ್ಗೆ ಬರಲು ಒಪ್ಪದ ಗ್ರಾಮಸ್ಥರು
ಗ್ರಾಮಸ್ಥರು ಬೆಳಗ್ಗೆಯಿಂದ ಮನೆಯನ್ನು ಶುಚಿಗೊಳಿಸಿ ಎಲ್ಲರೂ ಮಡಿ ಸ್ನಾನ ಮಾಡಿ ಶ್ರದ್ಧೆ-ಭಕ್ತಿಯಿಂದ ಪೂಜೆ ನೆರವೇರಿಸಿದರು. ಗ್ರಾಮಸ್ಥರು ಸಾಮೂಹಿಕವಾಗಿ ಸಂಕಲ್ಪ ತೊಟ್ಟು ಸಿಹಿ ತಿನಿಸುಗಳನ್ನು ಮಾಡಿ ಮೌನವ್ರತ ಆಚರಿಸಿದರು.
ಹೊಸಪೇಟೆ; ಒಂದೇ ದಿನದ ಅಂತರದಲ್ಲಿ ಕೋವಿಡ್ಗೆ ಅಕ್ಕ, ತಮ್ಮ ಬಲಿ
ಬಳಿಕ ಗ್ರಾಮದ ಗಡಿರೇಖೆಯಲ್ಲಿ ಗುರುತಿಸಲಾದ ಬೇವಿನ ಮರದಡಿ ಉಡಿ ಪದಾರ್ಥ ಇಟ್ಟು, ಹಣ್ಣು, ಹೂ ಕಾಯಿ, ಸಿಹಿ ಅರ್ಪಿಸುವ ಮೂಲಕ ಕರೊನಾಮ್ಮನನ್ನು ಸಂತೃಪ್ತಿಗೊಳಿಸಿ, ನಮ್ಮೂರಿಂದ ಹೋಗಿ ಎಂದು ಪ್ರಾರ್ಥಿಸಿದ್ದಾರೆ.
ಕೋವಿಡ್; ಕೇರಳದ ಟಿಡಿಬಿ ಆದಾಯ 21 ಕೋಟಿಗೆ ಕುಸಿತ!
ಕೊರೊನಾ ಮಾರಿಯಿಂದ ಮುಕ್ತಿಗೊಳಿಸಿರುವ ಮನೋ ಧೈರ್ಯದ ಆಚರಣೆ ಇದಾಗಿದೆ. ಈ ಹಿಂದೆ ಪ್ಲೇಗ್, ಮಲೇರಿಯಾ, ಚಿಕನ್ ಗುನ್ಯ ಬಂದಾಗಲೂ ಈ ರೀತಿಯ ಆಚರಣೆಯನ್ನು ಗ್ರಾಮಸ್ಥರು ಮಾಡಿದ್ದರಂತೆ.
ಈ ಪೂಜೆಯಿಂದ ಕೊರೊನಾ ರೋಗ ಕಡಿಮೆಯಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಹೀಗಾಗಿ ಗ್ರಾಮದರೆಲ್ಲ ಸೇರಿ ಈ ರೀತಿಯ ಆಚರಣೆಯನ್ನು ಮಾಡಿದ್ದಾರೆ.