ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮಕ್ಕೆ ಬಾರದಂತೆ ಕರೊನಾಮ್ಮಗೆ ಗ್ರಾಮಸ್ಥರ ವಿಶೇಷ ಪೂಜೆ!

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಮೇ 30; ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ಗ್ರಾಮಸ್ಥರು ಕರೊನಾಮ್ಮನಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇಡೀ ಗ್ರಾಮದ ಜನರು ಭಕ್ತಿಯಿಂದ ಪೂಜೆ ಮಾಡಿ ಊರಾಚೆ ಇರುವ ಇರುವ ಬೇವಿನ ಮರದ ಬಳಿ ಬಿಟ್ಟು ಬಂದಿದ್ದಾರೆ.

ಈ‌ ಗ್ರಾಮದಲ್ಲಿ ಒಂದು ದಿನ‌ ಮುಂಚಿತವಾಗಿ ಎಲ್ಲ ಸೇರಿ‌ ಪೂಜೆ ಮಾಡುವ ಕುರಿತು ಡಂಗುರ ಸಾರಲಾಗಿತ್ತು. ಪ್ರತಿಯೊಂದು ಮನೆಯಿಂದ ಪೂಜೆ ಮಾಡಿ ಕರೊನಾಮ್ಮನನ್ನು ಊರಾಚೆಗೆ ಕಳುಹಿಸಿ ಕೊಡಬೇಕೆಂದು ಮಾಹಿತಿ ನೀಡಲಾಗಿತ್ತು.

ವಿಜಯನಗರ; ಕೋವಿಡ್ ಕೇರ್‌ ಸೆಂಟರ್‌ಗೆ ಬರಲು ಒಪ್ಪದ ಗ್ರಾಮಸ್ಥರು ವಿಜಯನಗರ; ಕೋವಿಡ್ ಕೇರ್‌ ಸೆಂಟರ್‌ಗೆ ಬರಲು ಒಪ್ಪದ ಗ್ರಾಮಸ್ಥರು

ಗ್ರಾಮಸ್ಥರು ಬೆಳಗ್ಗೆಯಿಂದ ಮನೆಯನ್ನು ಶುಚಿಗೊಳಿಸಿ ಎಲ್ಲರೂ ಮಡಿ ಸ್ನಾನ ಮಾಡಿ ಶ್ರದ್ಧೆ-ಭಕ್ತಿಯಿಂದ ಪೂಜೆ ನೆರವೇರಿಸಿದರು. ಗ್ರಾಮಸ್ಥರು ಸಾಮೂಹಿಕವಾಗಿ ಸಂಕಲ್ಪ ತೊಟ್ಟು ಸಿಹಿ ತಿನಿಸುಗಳನ್ನು ಮಾಡಿ ಮೌನವ್ರತ ಆಚರಿಸಿದರು.

ಹೊಸಪೇಟೆ; ಒಂದೇ ದಿನದ ಅಂತರದಲ್ಲಿ ಕೋವಿಡ್‌ಗೆ ಅಕ್ಕ, ತಮ್ಮ ಬಲಿಹೊಸಪೇಟೆ; ಒಂದೇ ದಿನದ ಅಂತರದಲ್ಲಿ ಕೋವಿಡ್‌ಗೆ ಅಕ್ಕ, ತಮ್ಮ ಬಲಿ

Special Pooja To Control Coronavirus Spread At Kotturu

ಬಳಿಕ ಗ್ರಾಮದ ಗಡಿರೇಖೆಯಲ್ಲಿ ಗುರುತಿಸಲಾದ ಬೇವಿನ ಮರದಡಿ ಉಡಿ ಪದಾರ್ಥ ಇಟ್ಟು, ಹಣ್ಣು, ಹೂ ಕಾಯಿ, ಸಿಹಿ ಅರ್ಪಿಸುವ ಮೂಲಕ ಕರೊನಾಮ್ಮನನ್ನು ಸಂತೃಪ್ತಿಗೊಳಿಸಿ, ನಮ್ಮೂರಿಂದ ಹೋಗಿ ಎಂದು ಪ್ರಾರ್ಥಿಸಿದ್ದಾರೆ.

ಕೋವಿಡ್; ಕೇರಳದ ಟಿಡಿಬಿ ಆದಾಯ 21 ಕೋಟಿಗೆ ಕುಸಿತ! ಕೋವಿಡ್; ಕೇರಳದ ಟಿಡಿಬಿ ಆದಾಯ 21 ಕೋಟಿಗೆ ಕುಸಿತ!

ಕೊರೊನಾ ಮಾರಿಯಿಂದ ಮುಕ್ತಿಗೊಳಿಸಿರುವ ಮನೋ ಧೈರ್ಯದ ಆಚರಣೆ ಇದಾಗಿದೆ. ಈ‌ ಹಿಂದೆ ಪ್ಲೇಗ್, ಮಲೇರಿಯಾ, ಚಿಕನ್ ಗುನ್ಯ ಬಂದಾಗಲೂ ಈ ರೀತಿಯ ಆಚರಣೆಯನ್ನು ಗ್ರಾಮಸ್ಥರು ಮಾಡಿದ್ದರಂತೆ.

ಈ ಪೂಜೆಯಿಂದ ಕೊರೊನಾ ರೋಗ ಕಡಿಮೆಯಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಹೀಗಾಗಿ ಗ್ರಾಮದರೆಲ್ಲ ಸೇರಿ ಈ ರೀತಿಯ ಆಚರಣೆಯನ್ನು ಮಾಡಿದ್ದಾರೆ.

English summary
Vijayanagara district Kotturu taluk Gangammanahalli villagers special pooja to control Coronavirus spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X