ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಶಾಸಕ ಸೋಮಶೇಖರ್ ರೆಡ್ಡಿ ಕೊಟ್ಟ ಉತ್ತರವೇನು?

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜನವರಿ 06: ಸಚಿವ ಪುಟ್ಟ ರಂಗಶೆಟ್ಟಿ ಆಪ್ತರ ಬಳಿ ಹಣ ಸಿಕ್ಕರೂ ಪುಟಗೋಸಿ ಹಣ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳ್ತಾರೆ. ಪುಟ್ಟರಂಗಶೆಟ್ಟಿಗೆ ಆ ಹಣ ಪುಟಗೋಸಿಯಾದ ಕಾರಣ ವಿಧಾನಸೌಧಕ್ಕೆ ಕಳಿಸಿರಬಹುದು. ಸರ್ಕಾರ ಜನವಿರೋಧಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಬಳ್ಳಾರಿಯಲ್ಲಿ ಮಾತನಾಡಿದ ಅವರು ಈ ಕೂಡಲೇ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು ಎಂದರು.

25 ಲಕ್ಷ ಹಣ ಪತ್ತೆ : ಸಿದ್ದರಾಮಯ್ಯ ಭೇಟಿಯಾದ ಪುಟ್ಟರಂಗ ಶೆಟ್ಟಿ25 ಲಕ್ಷ ಹಣ ಪತ್ತೆ : ಸಿದ್ದರಾಮಯ್ಯ ಭೇಟಿಯಾದ ಪುಟ್ಟರಂಗ ಶೆಟ್ಟಿ

ಸಂಕ್ರಾಂತಿ ನಂತರ ಬಿಜೆಪಿ ಸರಕಾರ ರಚನೆ ಮಾಡ್ತೀರಾ? ಎಂಬ ಪ್ರಶ್ನೆಗೆ ಸೋಮಶೇಖರ್ ರೆಡ್ಡಿ ಜೈ ಶ್ರೀರಾಮ್ ಎಂದು ಉತ್ತರಿಸಿ ಆಕಾಶ ನೋಡಿ ಕೈ ಮುಗಿದರು.

Somashekar Reddy talked about BJP will form government

ಹಣದ ಜೊತೆ ಸಿಕ್ಕಿಬಿದ್ದ ವ್ಯಕ್ತಿಯನ್ನು ನೋಡಿಯೇ ಇಲ್ಲ: ಪುಟ್ಟರಂಗ ಶೆಟ್ಟಿಹಣದ ಜೊತೆ ಸಿಕ್ಕಿಬಿದ್ದ ವ್ಯಕ್ತಿಯನ್ನು ನೋಡಿಯೇ ಇಲ್ಲ: ಪುಟ್ಟರಂಗ ಶೆಟ್ಟಿ

ಸರಕಾರ ಹಂಪಿ ಉತ್ಸವ ಮಾಡಲು ಮೀನಾಮೇಷ ಎಣಿಸುತ್ತಿದೆ. ಜನವರಿ ತಿಂಗಳಲ್ಲಿ ಹಂಪಿ ಉತ್ಸವ ಮಾಡದೇ ಇದ್ದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಹಂಪಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇನೆ. ಹಂಪಿ ಉತ್ಸವ ಮಾಡ್ತೀವಿ ಅಂತ ಸರ್ಕಾರ ಹೇಳಿತ್ತು, ಆದರೆ ಮಾಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ವಿಜಯನಗರ ಗತವೈಭವ ಸಾರುವ ಹಂಪಿ ಉತ್ಸವ ಆಚರಣೆ ನಿರ್ಲಕ್ಷ ಖಂಡನೀಯ ಎಂದು ಸೋಮಶೇಖರ್ ರೆಡ್ಡಿ ಆರೋಪಿಸಿದರು.

English summary
BJP MLA Somashekar Reddy talked about BJP will form government in Karnataka State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X