ಲಾಕ್ ಡೌನ್; ಸರಿಯಾಗಿ ಆಹಾರ ಸಿಗದೇ ಸಿಂಧನೂರು ಮಹಿಳೆ ಸಾವು
ಬಳ್ಳಾರಿ, ಏಪ್ರಿಲ್ 07: ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಯಚೂರಿಗೆ ಹೊರಟಿದ್ದ ಮಹಿಳೆ ಅನ್ನ, ನೀರು ಸಿಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
Recommended Video
ಅರಣ್ಯ
ಅಧಿಕಾರಿಗಳು
ಪರಸ್ಪರ
ನಿಂದಿಸುತ್ತಾರೆ
|
Forest
Officer
|
Karnataka
ಬಳ್ಳಾರಿಯ ವಿಮ್ಸ ನಲ್ಲಿ ಸಿಂಧನೂರಿನ ವೆಂಕಟೇಶ್ವರ ನಗರದ ಗಂಗಮ್ಮಾ (23) ಸಾವನ್ನಪ್ಪಿದ್ದಾರೆ. ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 30ರಂದು ಬೆಂಗಳೂರಿನಿಂದ ಈ ಕುಟುಂಬ ಗುಳೆ ಹೊರಟಿತ್ತು. ಬೆಂಗಳೂನಿಂದ ರಾಯಚೂರಿನ ಸಿಂಧನೂರಿಗೆ ಈ ಕುಟುಂಬ ಹೊರಟಿತ್ತು. ಆದರೆ ಸರಿಯಾಗಿ ಆಹಾರ ಸಿಗದೇ ಮಹಿಳೆ ಅಸ್ವಸ್ಥಳಾಗಿದ್ದರು.
ಮಹಿಳೆಯನ್ನು ಏಪ್ರಿಲ್ 5ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸರಿಯಾಗಿ ಊಟ ಸಿಗದ ಕಾರಣ ರಕ್ತ ಕಡಿಮೆಯಾಗಿದ್ದು, ಕಿಡ್ನಿ ಸಮಸ್ಯೆ ಇಂದ ಬಳಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
Comments
English summary
Raichuru based women who suffered without food and water died in vims hospital