ಡಾಕ್ಟರೇಟ್ ಗೌರವಕ್ಕೆ ಪಾತ್ರವಾದ ಜೇಕಬ್ ಕ್ರಾಸ್ಟಾ
ಶ್ರೀ ಕೃಷ್ಣ ದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಿರುವ ಜೇಕಬ್ ಕ್ರಾಸ್ಟಾರವರು 1951ರಲ್ಲಿ ದಕ್ಷಿಣ ಕನ್ನಡದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
ಕಾರ್ಪೊರೇಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಜೇಕಬ್ ಅವರು, ಆರ್ & ಡಿ ಮತ್ತು ಕ್ವಾಲಿಟಿ ಕಂಟ್ರೋಲ್ ಪ್ರಯೋಗಾಲಯಕ್ಕೆ ಉಪಯುಕ್ತವಾಗುವ ಉಪಕರಣಗಳನ್ನು ತಯಾರಿಸಲು ಸಿ.ಎಂ ಇಕ್ವಿಪ್ಮೆಂಟ್ಸ್ ಇಂಡಿಯ ಪ್ರೈವೆಟ್ ಲಿಮಿಟೆಡ್ ಎಂಬ ಕಾರ್ಖಾನೆಯನ್ನು 1981ರಲ್ಲಿ ಆರಂಭಿಸಿದರು.
ಎನ್ವಿರಾನ್ಮೆಂಟಲ್
ಟೆಸ್ಟಿಂಗ್
ಚೆಂಬರ್
ಎಂಬ
ಪ್ರಮುಖ
ಉತ್ಪನ್ನವನ್ನು
ತಯಾರಿಸಲು
ಆರಂಭಿಸಿದರು.
ಭಾರತದ
ಅಗ್ನಿ,
ಪೃಥ್ವಿ,
ಆಕಾಶ
ಮತ್ತು
ಬ್ರಹ್ಮೋಸ್
ನಂತಹ
ಪ್ರತಿಷ್ಠಿತ
ಕ್ಷಿಪಣಿಗಳು
ಇವರು
ತಯಾರಿಸಲ್ಪಟ್ಟ
ಚೇಂಬರ್
ಗಳಲ್ಲಿ
ಪರೀಕ್ಷಿಸಲ್ಪಟ್ಟವು.
ಜಾಗತೀಕರಣದ ತೀವ್ರ ಪೈಪೋಟಿಯ ನಡುವೆಯೂ ಜೇಕಬ್ ಕ್ರಾಸ್ಟಾರವರು ತಮ್ಮ ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಉನ್ನತ ದರ್ಜೆಯಲ್ಲಿ ಕಾಪಾಡಿಕೊಂಡು ಬಂದಿರುತ್ತಾರೆ. ಇವರ ಕಂಪನಿಯು ಪ್ಯಾಕೇಜಿಂಗ್ ಮತ್ತು ಪರ್ಪ್ಲಿಂಗ್ಗೆ ಸಂಬಂಧಪಟ್ಟ ವಿಷಯಗಳಿಗೆ ಕನ್ಸಲ್ಟೆನ್ಸಿ ಸೇವೆಯನ್ನೂ ಸಹ ನೀಡುತ್ತದೆ.
ಜೇಕಬ್ ಕ್ರಾಸ್ಟಾರವರ ಸಂಘಟನಾ ಕೌಶಲ್ಯಗಳನ್ನು ಗುರುತಿಸಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ನ ಅಧ್ಯಕ್ಷರನ್ನಾಗಿ 2010-11ರಲ್ಲಿ ಆಯ್ಕೆ ಮಾಡಲಾಯಿತು. ಇದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಮಂಡಳಿಗಳಿಗೆ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಎಲ್ಲಾ ಸೇವೆಗಳನ್ನು ಪರಿಗಣಿಸಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.