ಶ್ರೀ ಸಂಗನಬಸವ ಮಹಾಸ್ವಾಮಿಗಳ ಪರಿಚಯ
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿರುವ ಶ್ರೀ ಶ್ರೀ ಸಂಗನಬಸವ ಮಹಾಸ್ವಾಮಿಯವರು ಬಿಜಾಪುರ ಜಿಲ್ಲೆಯ ಜಮಖಂಡಿಯಲ್ಲಿ 1938ರಲ್ಲಿ ಜನಿಸಿದರು. ತಮ್ಮ 13ನೇ ವಯಸ್ಸಿನಲ್ಲಿಯೇ ಪೂರ್ವಶ್ರಮವನ್ನು ತೊರೆದು, ದೈವಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡರು.
ಭಾರತೀಯ
ತತ್ವಜ್ಞಾನ
ಹಾಗೂ
ಧರ್ಮಶಾಸ್ತ್ರದ
ಆಳ
ಅಧ್ಯಯನಕ್ಕಾಗಿ
ಶ್ರೀಕ್ಷೇತ್ರ
ಕಾಶಿಗೆ
ತೆರಳಿದ
ಮಹಾಸ್ವಾಮಿಯವರು,
1972ರಲ್ಲಿ
ಶ್ರೀ
ಜಗದ್ಗುರು
ಕೊಟ್ಟೂರು
ಮಹಾಸಂಸ್ಥಾನ
ಮಠ,
ಹೊಸಪೇಟೆ
ಹಾಗೂ
1982ರಲ್ಲಿ
ಹಾಳಕೆರೆ
ಶ್ರೀ
ಆನಂದೀಶ್ವರ
ಸಂಸ್ಥಾನ
ಮಠದ
ಮಠಾಧೀಶರಾಗಿ
ಸೇವೆ
ಸಲ್ಲಿಸಿದ್ದಾರೆ.
ಮಠದ
ಸಂಪನ್ಮೂಲಗಳನ್ನು
ಸಮಾಜದ
ಎಲ್ಲಾ
ವರ್ಗದ
ಜನಗಳ
ಒಳಿತಿಗಾಗಿ
ಹಾಗೂ
ವಿದ್ಯಾರ್ಥಿಗಳ
ವಿದ್ಯಾಭ್ಯಾಸ,
ವ್ಯವಸಾಯ,
ಸಮಾಜ
ಸೇವೆ
ಮತ್ತು
ಸಮುದಾಯಗಳ
ಏಳಿಗೆಗಾಗಿ
ವಿನಿಯೋಗ
ಮಾಡಿರುತ್ತಾರೆ.
ಶ್ರೀಗಳು ನಿರಂತರವಾಗಿ ಕೃಷಿಕರು, ಶಿಕ್ಷಣ ತಜ್ಞರು ಹಾಗೂ ಸಮಾಜ ಸೇವಕರುಗಳೊಂದಿಗೆ ಬೆರತು ಸಮಾಜದ ಎಲ್ಲಾ ಸಮುದಾಯಗಳ ಜನರ ಏಳಿಗೆಗಾಗಿ ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಹೈದರಬಾದ್-ಕರ್ನಾಟಕ ಪ್ರಾಂತ್ಯದ ದೂರದ ಹಳ್ಳಿ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ಸಾಕ್ಷರತೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಶ್ರೀಗಳು ಸ್ಥಳೀಯ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರಚುರ ಪಡಿಸಲು ಸಂಶೋಧನೆಗಾಗಿ ಹೆಚ್ಚು ಒತ್ತು ನೀಡಿದ್ದಾರೆ. ಮಹಾ ಕವಿ ಹರಿಹರ ಸಂಶೋಧನ ಕೇಂದ್ರವನ್ನು ಸ್ಥಾಪಿಸಿ ಅದರಲ್ಲಿ ಸತತವಾಗಿ ವಿಚಾರ ಸಂಕಿರಣಗಳನ್ನು ಹಾಗೂ ಕಾರ್ಯಾಗಾರಗಳನ್ನು ನಡೆಸುತ್ತಾ ಹೇಮಕೂಟ ಎಂಬ ನಿಯತಕಾಲಿಕದಲ್ಲಿ ಧರ್ಮ, ತತ್ವಶಾಸ್ತ್ರ ಹಾಗೂ ಸಮಕಾಲೀನ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬಾದಾಮಿಯ ಶ್ರೀ ಮದ್ವೀರಶೈವ ಶಿವಮಂದಿರದ ಶತಮಾನೋತ್ಸವ ಸಮಾರಂಭದ ಚುಕ್ಕಾಣೆಯನ್ನು ವಹಿಸಿದ ಹಿರಿಮೆ ಶ್ರೀಗಳದ್ದಾಗಿದೆ. ಈ ಸಮಾರಂಭಕ್ಕೆ ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಶ್ರೀಗಳ ಎಲ್ಲಾ ಸೇವೆಯನ್ನು ಪರಿಗಣಿಸಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.