ಬಳ್ಳಾರಿಯಲ್ಲಿ ಕೆಪಿಸಿಎಲ್ ಇಂಜಿನಿಯರ್ ಭೀಕರ ಕೊಲೆ
ಬಳ್ಳಾರಿ, ಮೇ 7 : ಬಳ್ಳಾರಿಯ ಕುಡಿತಿನಿಯ ಕೆಪಿಸಿಎಲ್ ನಲ್ಲಿ ಕಾರ್ಯ ಪಾಲಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರು ಮೂಲದ ರಮೇಶ್ ಅವರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿಯ
ಗಾಂಧಿನಗರದಲ್ಲಿ
ನೆಲೆಸಿರುವ
ರಮೇಶ್
(56)
ಅವರ
ಮೃತದೇಹ
ಮಂಗಳವಾರ
ಸಂಜೆ
4
ಗಂಟೆ
ಸುಮಾರಿಗೆ
ಹೊಸಪೇಟೆ
ರಸ್ತೆಯ
ಮೊರಾರ್ಜಿ
ದೇಸಾಯಿ
ಹಾಸ್ಟೆಲ್
ಬಳಿ
ಪತ್ತೆಯಾಗಿದೆ.
ಬಳ್ಳಾರಿ
ಗ್ರಾಮಾಂತರ
ಪೊಲೀಸರು
ಕೊಲೆ
ಪ್ರಕರಣ
ದಾಖಲಿಸಿಕೊಂಡಿದ್ದು,
ಆರೋಪಿಗಳಿಗಾಗಿ
ಹುಡುಕಾಟ
ನಡೆಸಿದ್ದಾರೆ.
ಒಂಟಿಯಾಗಿದ್ದರು : ಕೆಪಿಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಗಾಂಧಿನಗರದಲ್ಲಿ ಒಂಟಿಯಾಗಿ ನೆಲೆಸಿದ್ದರು. ಅವರ ಪತ್ನಿ ಮತ್ತು ಕುಟುಂಬ ಸದಸ್ಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸೋಮವಾರ ರಾತ್ರಿ 7.30ರ ಸುಮಾರಿಗೆ ರಮೇಶ್ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಾರೆ. [ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭ]
ನಂತರ ಹೊಸಪೇಟೆ ರಸ್ತೆಗೆ ತೆರಳಿದ್ದಾರೆ. ಮಂಗಳವಾರ ಮುಂಜಾನೆ ರಮೇಶ್ ಅವರ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶ್ವಾನದಳದೊಂದಿಗೆ ರಮೇಶ್ ಶವ ಸಿಕ್ಕ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ರಮೇಶ್ ಅವರ ಮೊಬೈಲ್ ಗೆ ಬಂದಿರುವ ಕರೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬಳ್ಳಾರಿ ಗ್ರಾಮಾಂತರ ಠಾಣೆ ಪೊಲೀಸರು ಬೆಂಗಳೂರಿನಲ್ಲಿರುವ ರಮೇಶ್ ಅವರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಶವ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.