ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ನಾಯಕರ ವಿರುದ್ಧವೇ ಶಾಸಕ ಆನಂದ್ ಸಿಂಗ್ ದೂರು

|
Google Oneindia Kannada News

Recommended Video

ಕಾಂಗ್ರೆಸ್ ನಾಯಕರ ವಿರುದ್ಧವೇ ಶಾಸಕ ಆನಂದ್ ಸಿಂಗ್ ದೂರು | Anand singh | Oneindia Kannada

ಹೊಸಪೇಟೆ, ಜುಲೈ 23: ತಮ್ಮ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಪ್ರತಿ ದೂರು ನೀಡಿದ್ದಾರೆ.

'ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ' ಜಿಲ್ಲಾ ಕಾಂಗ್ರೆಸ್ ನಾಯಕರು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ನೀಡಿದ್ದರು.

ಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರು ಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರು

ಇದಕ್ಕೆ ಪ್ರತಿಯಾಗಿ ಆನಂದ್ ಸಿಂಗ್ ಅವರು ಶನಿವಾರ ದೂರು ನೀಡಿದ್ದಾರೆ. 'ನಾನು ಕಾಣೆಯಾಗಿಲ್ಲ. ನನ್ನ ಗೌರವ, ಘನತೆ ಹಾಳು ಮಾಡುವ ಉದ್ದೇಶದಿಂದ ದೂರು ನೀಡಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.

Karnataka political crisis vijayanagar Congress MLA Anand Singh complaint against leaders

'ಜುಲೈ 13ರವರೆಗೂ ನಾನು ಹೊಸಪೇಟೆಯಲ್ಲಿಯೇ ಇದ್ದೆ. ಅಂದು ಸಂಜೆ ನನ್ನ ತಂದೆಯವರಾದ ಬಿ.ಎಸ್. ಪೃಧ್ವಿರಾಜ್ ಸಿಂಗ್ ಜಾರಿ ಬಿದ್ದಿದ್ದರ ಕಾರಣ ಹೊಸಪೇಟೆಯ ಡಾ.ಬಿ.ಆರ್. ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಸಲಹೆ ಮೇರೆಗೆ ಜುಲೈ 15ರಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ 17ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. 18 ಮತ್ತು 19ರಂದು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇನೆ' ಎಂದು ಬರೆದಿದ್ದಾರೆ.

ರಾಜೀನಾಮೆ ನೀಡಿ ಕಾಣೆ ಆಗಿದ್ದ ಶಾಸಕ ಆನಂದ್ ಸಿಂಗ್ ದಿಢೀರ್ ಪ್ರತ್ಯಕ್ಷ!ರಾಜೀನಾಮೆ ನೀಡಿ ಕಾಣೆ ಆಗಿದ್ದ ಶಾಸಕ ಆನಂದ್ ಸಿಂಗ್ ದಿಢೀರ್ ಪ್ರತ್ಯಕ್ಷ!

'ಮಾಧ್ಯಮಗಳಲ್ಲಿ ಪುನಃ ಕಾಣೆಯ ಸುದ್ದಿ ಬರುತ್ತಿರುವುದನ್ನು ಗಮನಿಸಿ ತಂದೆಯವರ ಆರೋಗ್ಯ ತಪಾಸಣೆ ಬಾಕಿ ಇದ್ದರೂ ಅವರನ್ನು ಬೆಂಗಳೂರಿನ ಮನೆಯಲ್ಲಿಯೇ ಬಿಟ್ಟು ತಮ್ಮ ಠಾಣೆಗೆ ಹಾಜರಾಗಿ ಎಲ್ಲ ದಾಖಲೆಗಳನ್ನು ಸಲ್ಲಿಸುತ್ತಿದ್ದೇನೆ' ಎಂದು ವಿವರಿಸಿದ್ದಾರೆ.

ಜತೆಗೆ ತಮ್ಮ ಗೌರವಕ್ಕೆ ಹಾನಿಯುಂಟು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ.

English summary
Karnataka political crisis: One of the Rebel MLAs, Anand Singh lodged a return complaint against Ballari Congress leaders who had given complaint against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X