ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪರೇಷನ್ ಕಮಲ: ಅಮಿತ್ ಶಾ ಪಿತಾಮಹ, ಮೋದಿ ಮೌನಿ ಬಾಬಾ

|
Google Oneindia Kannada News

ಬಳ್ಳಾರಿ, ಜುಲೈ 13: ಈಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ, ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿ ವರಿಷ್ಠರ ಕೈವಾಡವಿದೆ ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆರೋಪಿಸಿದರು.

ಆಪರೇಷನ್ ಕಮಲಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಪಿತಾಮಹ. ಎಲ್ಲವೂ ತಮ್ಮ ನೇರದಲ್ಲಿ ನಡೆಯುತ್ತಿದ್ದರೂ, ಪ್ರಧಾನಿ ಮೋದಿ 'ಮೌನಿಬಾಬಾ' ಆಗಿದ್ದಾರೆಂದು ಉಗ್ರಪ್ಪ, ಬಿಜೆಪಿ ವಿರುದ್ದ ಕಿಡಿಕಾರಿದರು.

ಗೆದ್ದೇ ಗೆಲ್ಲುತ್ತೇನೆ ಎನ್ನುವ ಅಚಲ ವಿಶ್ವಾಸದಲ್ಲಿ ಎಚ್ಡಿಕೆ: ಏನಿರಬಹುದು ಕಾರ್ಯತಂತ್ರ?ಗೆದ್ದೇ ಗೆಲ್ಲುತ್ತೇನೆ ಎನ್ನುವ ಅಚಲ ವಿಶ್ವಾಸದಲ್ಲಿ ಎಚ್ಡಿಕೆ: ಏನಿರಬಹುದು ಕಾರ್ಯತಂತ್ರ?

ಗೋವಾದಲ್ಲಿ ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೊಮ್ಮೆ ನೋಡಿ, ಈ ಎಲ್ಲಾ ಬೆಳವಣಿಗೆಗಳು ಅಮಿತ್ ಶಾ ನಿರ್ದೇಶನದಲ್ಲಿ ನಡೆಯುತ್ತಿದೆ ಎಂದು ಉಗ್ರಪ್ಪ ಆಪಾದಿಸಿದ್ದಾರೆ.

Karnataka political crisis: All is happening under the direction of Shah and Modi: V S Ugrappa said

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಗ್ರಪ್ಪ, ಶಾಸಕರನ್ನು ಕೋಟಿ ಕೋಟಿ ಕೊಟ್ಟು ಖರೀದಿಸುತ್ತಿದ್ದಾರೆ, ಕೇಂದ್ರದ ಆದಾಯ ತೆರಿಗೆ, ಇಡಿ ಇಲಾಖೆಗಳು ಕಣ್ಮುಚ್ಚಿ ಕೂತಿದೆ ಎಂದು ಉಗ್ರಪ್ಪ ಬೇಸರ ವ್ಯಕ್ತ ಪಡಿಸಿದರು.

ಸಾ.ರಾ.ಮಹೇಶ್ - ಬಿಜೆಪಿ ಮುಖಂಡರ ಭೇಟಿಯ ನಂತರದ ಬೆಳವಣಿಗೆಗಳು ಸಾ.ರಾ.ಮಹೇಶ್ - ಬಿಜೆಪಿ ಮುಖಂಡರ ಭೇಟಿಯ ನಂತರದ ಬೆಳವಣಿಗೆಗಳು

ಸಿದ್ದಾಂತ, ಪ್ರಜಾಪ್ರಭುತ್ವದ ಬಗ್ಗೆ ದೊಡ್ಡದೊಡ್ಡ ಮಾತನಾಡುವ ಮೋದಿಯವರು ಮೌನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಯಡಿಯೂರಪ್ಪನವರಿಗೆ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಾಗದ ನಂತರ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿರುವುದು ಎನ್ನುವುದನ್ನು ಬಿಜೆಪಿಯವರು ಮೊದಲು ಅರಿಯಲಿ ಎಂದು ಉಗ್ರಪ್ಪ ಹೇಳಿದರು.

English summary
Karnataka political crisis: Operation Kamala is happening under the direction of BJP National President Amit Shah and PM Modi: Senior Congress leader and former MP V S Ugrappa said in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X