ಬಳ್ಳಾರಿ ಲೋಕಸಭೆ ಚುನಾವಣೆ ಅಪ್ಡೇಟ್: ವಿಎಸ್ ಉಗ್ರಪ್ಪಗೆ ದಾಖಲೆ ಜಯ
ಬಳ್ಳಾರಿ, ನವೆಂಬರ್ 06: ಕರ್ನಾಟಕದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣಾ ಫಲಿತಾಂಶ ಮಂಗಳವಾರ(ನವೆಂಬರ್ 06)ದಂದು ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಅಂತಿಮ ಫಲಿತಾಂಶ: ವಿಎಸ್ ಉಗ್ರಪ್ಪ: 6,28,365 ಮತಗಳು ; ಜೆ ಶಾಂತಾ : 3,85,204 ಮತಗಳು
ನವೆಂಬರ್ 3 ಶನಿವಾರದಂದು ನಡೆದ ಉಪಚುನಾವಣೆಯ ಫಲಿತಾಂಶ ಕುತೂಹಲಕಾರಿಯಾಗಿತ್ತು. ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸಿ ಎಸ್ ಪುಟ್ಟರಾಜು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಬಳ್ಳಾರಿ ಬಿಜೆಪಿ ಸಂಸದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಶಿವಮೊಗ್ಗ ಉಪ ಚುನಾವಣೆ ಫಲಿತಾಂಶ Live : ರಾಘವೇಂದ್ರ ಮುನ್ನಡೆ
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತ ಅವರು ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ವಿ.ಎಸ್.ಉಗ್ರಪ್ಪ ಮೊದಲ ಬಾರಿಗೆ ಸ್ಪರ್ಧಿಸಿದ್ದರು.
5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ LIVE ಅಪ್ಡೇಟ್ಸ್
ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಡಾ.ಟಿ.ಆರ್.ಶ್ರೀನಿವಾಸ್ ಕಣದಲ್ಲಿದ್ದರು. ಬಿ. ಶ್ರೀರಾಮುಲು ಹಾಗೂ ಡಿಕೆ ಶಿವಕುಮಾರ್ ನಡುವಿನ ಪ್ರತಿಷ್ಠಾ ಕಣವಾಗಿ ಮಾರ್ಪಾಟ್ಟಿದ್ದು, ಯಾರಿಗೆ ಮೇಲುಗೈ ಎಂಬುದು ಇಂದು ನಿರ್ಧಾರವಾಗಿದೆ.
ಸ್ವಾತಂತ್ರ್ಯ ಬಂದಾಗಿನಿಂದ 2000 ದ ವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿದೆ. ಈ ಬಾರಿ ದೀಪಾವಳಿ ಲಡ್ಡು ಕೈ ನಾಯಕರ ಬಾಯಿಗೆ ಬಿದ್ದಿದೆ.
Karnataka: Counting of votes is underway for #KarnatakaByElection2018. Visuals from a counting station in Bellary. pic.twitter.com/CDvEBxQNjm
— ANI (@ANI) November 6, 2018
#KarnatakaBypolls2018: Counting of votes begins at counting centres in Bellary and Shimoga Lok Sabha constituencies, pic.twitter.com/J9syo6wsRQ
— ANI (@ANI) November 6, 2018