ಬಳ್ಳಾರಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆ; ನಾಶವಾದ ಬೆಳೆಗಳು
ಬಳ್ಳಾರಿ, ಜುಲೈ 25: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕಳೆದ ಎರಡು ದಿನಗಳಿಂದಲೂ ಭಾರೀ ಮಳೆಯಾಗುತ್ತಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
Recommended Video
ಭಾರತದಲ್ಲಿ
ಚೀನಾ
ವ್ಯವಹಾರ
ಇನ್ನು
ಮುಂದೆ
ಸುಲಭವಲ್ಲ
|
Oneindia
Kannada
ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ, ಹಗರಿ ಬೊಮ್ಮನಹಳ್ಳಿ ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿ ಅಪಾರ ಪ್ರಮಾಣದ ಮಳೆಯಾಗಿದೆ. ಕೆಲವೆಡೆ ಹಳ್ಳಗಳು ತುಂಬಿ ಹರಿದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಎರಡು ದಿನ ಕರ್ನಾಟಕದ ಕರಾವಳಿಗೆ ಮಳೆಯ ಆರೆಂಜ್ ಅಲರ್ಟ್
ರೈತರು ಈಚೆಗಷ್ಟೇ ಕೃಷಿ ಕೈಗೊಂಡು ಹೊಲಗಳನ್ನು ಬಿತ್ತಿದ್ದರು. ಆದರೆ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ. ಶ್ರೀಕಂಠಾಪುರ ತಾಂಡದಲ್ಲೂ ಮಳೆಯಾಗಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಇನ್ನೊಂದೆಡೆ ಮಳೆ ನೀರಿನ ರಭಸಕ್ಕೆ ಜಮೀನಿನಲ್ಲಿ ಟ್ರಾಕ್ಟರ್ ಇಂಜಿನ್ ಸಹ ಕೊಚ್ಚಿಕೊಂಡು ಹೋಗಿದೆ. ರೈತ ವೆಂಕಟೇಶ್ ಅವರಿಗೆ ಸೇರಿದ ಟ್ರಾಕ್ಟರ್ ಇಂಜಿನ್ ಕೊಚ್ಚಿಕೊಂಡು ಹೋಗಿದೆ.
Comments
English summary
People life disrupted by heavy rain in ballari since two days,