ಕೋವಿಡ್ 19 ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಬಳ್ಳಾರಿ, ಆಗಸ್ಟ್ 16: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ಎಲ್ಲಾ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಸರಕಾರದ ಎಸ್ಡಿಅರ್ಎಫ್ ಮಾರ್ಗ ಸೂಚಿಯನ್ವಯ ತಲಾ ರೂ.50 ಸಾವಿರಗಳ 'ಪರಿಹಾರ ಧನ' ವಿತರಿಸಲು ಕೇಂದ್ರ ಸರ್ಕಾರವು ಅದೇಶಿಸಲಾಗಿತ್ತು.
2022 ಮೇ 15ಕ್ಕಿಂತ ಮೊದಲು ಕೋವಿಡ್-19 ನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಬಂದ ಅರ್ಜಿಗಳನ್ನು ಬಿಎಂಎಸ್ ತಂತ್ರಾಂಶದಲ್ಲಿ ನಮೂದಿಸಲು ಇದ್ದ ಕಾಲಮಿತಿಯನ್ನು 07 ದಿನಗಳ ಕಾಲ ಅಂದರೆ ಆಗಸ್ಟ್ 16ರಿಂದ ಆಗಸ್ಟ್ 23ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ಸಿಎಂ ಆಗಬೇಕೆಂಬುದು ನನ್ನ ಆಶಯ: ಸಚಿವ ಶ್ರೀರಾಮುಲು
ಕೋವಿಡ್-19 ನಿಂದಾಗಿ ಸಾವು ದೃಢಪಟ್ಟಿದ್ದು, ಅರೋಗ್ಯ ಇಲಾಖೆಯ ದತ್ತಾಂಶದಲ್ಲಿ ಲಭ್ಯವಿಲ್ಲದ ಪ್ರಕರಣಗಳನ್ನು ಅಪರ ಜಿಲ್ಲಾಧಿಕಾರಿಗಳು ಅಧ್ಯಕ್ಷತೆಯಲ್ಲಿ ರಚಿಸಲಾದ ಕುಂದು ಕೊರತೆ ನಿವಾರಣಾ ಸಮಿತಿಯಲ್ಲಿ ತೀರ್ಮಾನಿಸಿ State Covid War Room Line List ನಲ್ಲಿ ಸೇರ್ಪಡೆಗೊಳಿಸಿ SDRF ಮಾರ್ಗಸೂಚಿಯನ್ವಯ ಪರಿಹಾರ ಪಾವತಿಸಲು ಸರಕಾರ ಆದೇಶಿಸಿತ್ತು.
ಮೇ 16ರ ನಂತರದ ಮರಣ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ 2022 ಮಾರ್ಚ್24ಕ್ಕೆ ಅನ್ವಯ 90 ದಿನಗಳ ಕಾಲಮಿತಿಯು ಹಿಂದಿನಂತೆ ಮುಂದುವರೆಯುವುದು. ಮೇ 15ಕ್ಕಿಂತ ಮೊದಲು ಕೋವಿಡ್-19 ವೈರಾಣುವಿನಿಂದ ಮೃತಪಟ್ಟ ಪ್ರಕರಣಗಳಲ್ಲಿ ಪರಹಾರಕ್ಕಾಗಿ ಬಾಕಿ ಇರುವ ಅರ್ಜಿಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಎಸ್ಎಸ್ಎಪಿ ಶಾಖೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಅರ್ಜಿಯ ಜೊತೆಗೆ ಸಂಬಂಧಿಸಿದ ದಾಖಲೆಗಳನ್ನು ಆಗಸ್ಟ್ 18ರೊಳಗಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಬಳ್ಳಾರಿ: ಉದ್ಯೋಗದ ಭರವಸೆ ನೀಡಿ ಭೂಮಿ ವಶ; ಭೂಮಿಯೂ ಇಲ್ಲ, ಉದ್ಯೋಗವೂ ಇಲ್ಲ
ಜಿಲ್ಲಾಧಿಕಾರಿಗಳಿಂದ
ಗ್ರಾಮ
ವಾಸ್ತವ್ಯ
ಬಳ್ಳಾರಿ
ಜಿಲ್ಲಾಧಿಕಾರಿ
ಪವನಕುಮಾರ
ಮಾಲಪಾಟಿ
ಅವರು
ಕಂಪ್ಲಿ
ತಾಲೂಕಿನ
ರಾಮಸಾಗರ
ಗ್ರಾಮದಲ್ಲಿ
ಆಗಸ್ಟ್
20ರಂದು
ಗ್ರಾಮವಾಸ್ತವ್ಯ
ನಡೆಸಿ
ಗ್ರಾಮಸ್ಥರ
ದೂರು-ದುಮ್ಮಾನ
ಆಲಿಸಲಿದ್ದಾರೆ.
ಇದಕ್ಕಾಗಿ
ಎಲ್ಲ
ಸಿದ್ಧತೆಗಳು
ಗ್ರಾಮದಲ್ಲಿ
ಭರದಿಂದ
ಸಾಗಿವೆ.
ಜಿಲ್ಲಾಧಿಕಾರಿಗಳು
ಸ್ಥಳದಲ್ಲಿಯೇ
ಅನೇಕ
ಸಮಸ್ಯೆಗಳಿಗೆ
ಪರಿಹಾರ
ಕಲ್ಪಿಸಲಿದ್ದಾರೆ
ಮತ್ತು
ಉಳಿದ
ಸಮಸ್ಯೆಗಳಿಗೆ
ಕಾಲಮಿತಿಯಲ್ಲಿ
ಪರಿಹರಿಸಲು
ಅಧಿಕಾರಿಗಳಿಗೆ
ನಿರ್ದೇಶನ
ನೀಡಲಿದ್ದಾರೆ.
ರಾಮಸಾಗರ ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದು ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಕಂಪ್ಲಿ ತಹಸೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇರಲಿದ್ದಾರೆ. ತಾಲೂಕುಮಟ್ಟದಲ್ಲಿ ತಹಸೀಲ್ದಾರರು ಸಹ ಒಂದೊಂದು ಊರುಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡಲಿದ್ದಾರೆ. ಈ ಗ್ರಾಮವಾಸ್ತವ್ಯದ ಮೂಲಕ ಜನರ ಮನೆಬಾಗಿಲಿಗೆ ಸರಕಾರ ತೆರಳಿದಂತಾಗಲಿದೆ.