ಕೊರೊನಾದಿಂದ ಶಿಕ್ಷಕರನ್ನು ಕಾಪಾಡಿ; ಶಿಕ್ಷಣ ಸಚಿವರಿಗೊಂದು ಪತ್ರ
ಬಳ್ಳಾರಿ, ಮಾರ್ಚ್ 19: ಕೊರೊನಾ ಮಹಾಮಾರಿಯಿಂದ ಶಿಕ್ಷಕರನ್ನು ಕಾಪಾಡಿ ಎಂದು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಬಳ್ಳಾರಿಯ ಪ್ರಗತಿಪರರು, ಸಮಾನಮನಸ್ಕರರು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಈಗಾಗಲೇ ವಿಶ್ವಾದ್ಯಂತ ಸಾವಿರಾರು ಜನರನ್ನು ಕೊರೊನಾ ಬಲಿ ಪಡೆದಿದ್ದು, ಸಾಕಷ್ಟು ವೇಗವಾಗಿ ಹರಡುತ್ತಿರುವ ಈ ಮಹಾಮಾರಿ ಕೊರೊನಾ ವೈರಸ್ ನಿಂದ ಶಿಕ್ಷಕ ವೃಂದ ಅನಾಹುತಕ್ಕೆ ಸಿಲುಕಬಾರದು. ಈ ತಿಂಗಳು ಮುಗಿದ ಕೂಡಲೇ ಏಪ್ರಿಲ್, ಮೇ ತಿಂಗಳಲ್ಲಿ ಎನ್ ಪಿಆರ್ ಗಣತಿಗೆ ಶಿಕ್ಷಕರು ತೆರಳುತ್ತಾರೆ.
ಕೊರೊನಾ ಭಯ; ನೂರು ದಿನ ರಜೆ ಕೊಡಿ ಎಂದ ನಂಗಲಿ ಪೇದೆ ಪತ್ರ ವೈರಲ್
ಈ ಸಮಯದಲ್ಲಿ ಒಂದು ವೇಳೆ ಕೊರೊನಾ ಸೋಂಕು ಶಿಕ್ಷಕರಿಗೆ ತಗುಲಿದರೆ, ಆ ಕುಟುಂಬದ ಸ್ಥಿತಿ ಏನು? ಮಕ್ಕಳ ಸ್ಥಿತಿ ಏನು? ಹಾಗಾಗಿ ಕೊರೊನಾ ರಾಜ್ಯದಿಂದ ತೊಲಗುವವರೆಗೆ ಈ ಎನ್ ಪಿಆರ್ ನೋಂದಣಿ ಮುಂದೂಡಿ, ಶಿಕ್ಷಕ ವೃಂದವನ್ನು ಕಾಪಾಡಿ ಎಂದು ಪತ್ರ ಬರೆದಿದ್ದಾರೆ.
Comments
English summary
Teachers in ballary wrote a letter to education minister sureshkumar to postpone npr due to coronavirus,