ಕೊರೊನಾ ಸೋಂಕು ಹಿನ್ನೆಲೆ; ಉಚ್ಚಂಗಿದುರ್ಗ ಜಾತ್ರೋತ್ಸವ ರದ್ದು
ವಿಜಯನಗರ, ಏಪ್ರಿಲ್ 14: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಚ್ಚಂಗಿದುರ್ಗದ ಜಾತ್ರೋತ್ಸವ ರದ್ದುಗೊಂಡಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶ್ರೀ ಉಚ್ಚಂಗಿದುರ್ಗ ಕ್ಷೇತ್ರದ ಜಾತ್ರೆ ಮಹೋತ್ಸವ ಸೋಮವಾರ ನಡೆಯಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ವಿಜಯನಗರ ಜಿಲ್ಲಾಡಳಿತ ರದ್ದು ಮಾಡಿದೆ. ಉಚ್ಚಂಗಿ ಕ್ಷೇತ್ರ ಯುಗಾದಿ ಹಬ್ಬದ ಸಂದರ್ಭದಲ್ಲಿ ಯಾವಾಗಲೂ ಭಕ್ತರಿಂದ ತುಂಬಿ ತುಳುಕುತ್ತಿತ್ತು.
ಎರಡನೇ ಅಲೆ ಕೊರೊನಾ ಆರಂಭವಾದ ಹಿನ್ನೆಲೆ ರಾಜ್ಯ ಸರ್ಕಾರ ಕಠಿಣ ಕೊರೊನಾ ಮಾರ್ಗಸೂಚಿ ಬಿಡುಗಡೆಗೊಳಿಸಿದ ಹಿನ್ನೆಲೆ ಜಿಲ್ಲಾಡಳಿತ ಜಾತ್ರೆ ಉತ್ಸವಗಳು, ಹಬ್ಬ-ಹರಿದಿನಗಳು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದನ್ನು, ಸಾರ್ವಜನಿಕ ಸಮಾರಂಭಗಳು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಉಚ್ಚಂಗಿದುರ್ಗ ಕ್ಷೇತ್ರ ಭಕ್ತರಿಲ್ಲದೆ ಭಣಗುಡುತ್ತಿದೆ.
Comments
English summary
Uchchangidurga Jatrotsava in Harapanahalli taluk in Vijayanagar district has been canceled due to increasing number of coronavirus cases.