ಹೊಸಪೇಟೆ: ಸಿಎಂ ಬಿಎಸ್ವೈ, ಡಿಸಿಎಂ ಸವದಿಗೆ ಸಾರಿಗೆ ನೌಕರನ ಮಗಳಿಂದ ಹೃದಯ ಕಲಕುವ ಮನವಿ
ವಿಜಯನಗರ, ಏಪ್ರಿಲ್ 8: ಕರ್ನಾಟಕ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಪುಟಾಣಿ ಬಾಲಕಿ ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷಣ ಸವದಿ ಅವರಿಗೆ ಮನವಿ ಮಾಡಿಕೊಂಡಿದ್ದಾಳೆ.
ಈಗಾಗಲೇ ಸಾರಿಗೆ ನೌಕರರು ರಾಜ್ಯಾದ್ಯಾಂತ 6ನೇ ವೇತನ ಮತ್ತು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಅನಿರ್ದಿಷ್ಟ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ಮಾತನಾಡಲಿ: ಸಚಿವ ಕೆ.ಎಸ್ ಈಶ್ವರಪ್ಪ
ಇತ್ತ ಕಡೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಾರಿಗೆ ನೌಕರರೊಬ್ಬರ ಮಗಳು ತನ್ನ ತಂದೆಯ ಪರವಾಗಿ 6ನೇ ವೇತನ ಜಾರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.
ವಿಡಿಯೋ ಮಾಡಿ ಮನವಿ ಮಾಡಿರುವ ಬಾಲಕಿ, ""ನಾವು ಒಳ್ಳೆಯ ಶಾಲೆ, ಶಿಕ್ಷಣ ಪಡೆಯಬೇಕೆಂಬ ತುಂಬಾ ಆಸೆಗಳಿವೆ. ಆದರೆ, ಈಗ ಬರುವ ನಮ್ಮಪ್ಪನ ಸಂಬಳ ಯಾವುದಕ್ಕೂ ಸಾಲುವುದಿಲ್ಲ. ಹಾಗಾಗಿ, ಸಂಬಳ ಜಾಸ್ತಿ ಮಾಡಿದರೆ ನಾವು ಉತ್ತಮ ಶಿಕ್ಷಣವನ್ನು ಪಡೆದು ಉದ್ಯೋಗವನ್ನು ಕಂಡುಕೊಳ್ಳುತ್ತೇವೆ'' ಎಂದು ವಿನಂತಿಸಿದ್ದಾಳೆ.
"ಆರನೇ ವೇತನ ಜಾರಿ ಮಾಡಬೇಕು, ಒಂದು ವೇಳೆ ಜಾರಿ ಮಾಡದೇ ಇದ್ದರೆ ಹೋರಾಟ ಮುಂದುವರೆಯುತ್ತದೆ. ನಮ್ಮಪ್ಪನ ಹಾಗೆ ಕೆಲಸ ಮಾಡುವ ನೌಕರರು ಹಿಂದೆ ಸರಿದರೂ ನಾವು ಹಿಂದೆ ಸರಿಯುವುದಿಲ್ಲ'' ಎಂದು ಅಚಲ ಮನಸ್ಸಿನಿಂದ ಲಲಿತಾ ಬಾಗೇವಾಡಿ ಎಂಬ ಪುಟ್ಟ ಬಾಲಕಿ ಹೇಳಿದ ಮಾತಿದು.