ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆಗೆ ಆನಂದ್ ಸಿಂಗ್ ಹೊಸ ಆಡಿಯೋ ಅಸ್ತ್ರ

|
Google Oneindia Kannada News

ಬಳ್ಳಾರಿ, ನವೆಂಬರ್ 10: ವಿಜಯನಗರ ನೂತನ ಜಿಲ್ಲೆಗಾಗಿ ಅನರ್ಹ ಶಾಸಕ ಆನಂದ್ ಸಿಂಗ್ ಆಡಿಯೋ ಬಿಡುಗಡೆ ಮಾಡಿದ್ದಾರೆ.

ನೂತನ ಜಿಲ್ಲೆ ಕುರಿತು ಕಿರುಹೊತ್ತಿಗೆ ಜೊತೆಗೆ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆನಂದ್ ಸಿಂಗ್ ತಮ್ಮ ಧ್ವನಿಯಲ್ಲೇ ಕ್ಷೇತ್ರದ ಜನರಿಗೆ ಸಂದೇಶ ರವಾನಿಸಿದ್ದಾರೆ.

ಆನಂದ್ ಸಿಂಗ್ ದಿಢೀರ್ ರಾಜೀನಾಮೆ: ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ?ಆನಂದ್ ಸಿಂಗ್ ದಿಢೀರ್ ರಾಜೀನಾಮೆ: ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ?

ಎರಡು ತಿಂಗಳ ಹಿಂದೆ ಸಿಎಂ ಬಳ್ಳಾರಿ ನಾಯಕರ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಆನಂದ್ ಸಿಂಗ್ ಅವರು, ಆದರೆ ಎರಡು ತಿಂಗಳ ನಂತರ ಸಿಂಗ್ ವಿಜಯನಗರ ಜಿಲ್ಲೆ ಬಗ್ಗೆ ಮತ್ತೆ ಮಾತನಾಡಿದ್ದಾರೆ.

Anand Singhs New Audio For By-Election

ಆನಂದ್ ಸಿಂಗ್ ಆಡಿಯೋದಲ್ಲಿ ಇರೋದೇನು? ಸಿಂಗ್ ತಮ್ಮ ಧ್ವನಿಯಲ್ಲೇ ವಿಜಯನಗರ ಜಿಲ್ಲೆಯ ಅವಶ್ಯಕತೆ ಹಾಗೂ ಈ ವಿಚಾರವಾಗಿ ನಡೆದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಮನೆ ಮಗ ಆನಂದ್ ಸಿಂಗ್ ಮಾಡುವ ನಮಸ್ಕಾರಗಳು ಎಂದು ಮಾತು ಆರಂಭಿಸಿರುವ ಅವರು, ವಿಜಯನಗರ ಜಿಲ್ಲೆಯಾಗುವ ಸಮಯ ಹತ್ತಿರ ಬಂದಿದೆ. ವಿಜಯನಗರ ಜಿಲ್ಲೆ ಇಂದು ನಿನ್ನೆಯದಲ್ಲ ದಶಕಗಳ ಕನಸು ಹೀಗಾಗಿ ಸಿಎಂ ಬಳಿ ನಿಯೋಗ ಮಠಾಧೀಶರ ಹಾಗೂ ಸರ್ವ ಪಕ್ಷ ನಿಯೋಗ ಕೊಂಡೊಯ್ದಿದ್ದೆ. ಆಗ ಸಿಎಂ ಕೂಡ ಪರೋಕ್ಷವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 3 ರಂದು ನನಸಾಗಬೇಕಿದ್ದ ಕನಸು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ. ವಿಜಯನಗರ ಜಿಲ್ಲೆಯಾಗುವುದು ಶತಸಿದ್ದ ಎಂದು ಆನಂದ್ ಪುನರುಚ್ಚರಿಸಿದ್ದಾರೆ

ಈ ಬಗ್ಗೆ ಕಿರು ಹೊತ್ತಿಗೆ ಪುಸ್ತಕ ಒಂದೂವರೆ ಲಕ್ಷ ಪ್ರತಿ ಮುದ್ರಿಸಿ ಕ್ಷೇತ್ರದಾದ್ಯಂತ ಮನೆಮನೆಗೆ ತೆರಳಿ ಕೊಟ್ಟಿದ್ದರು.

English summary
Anand Singh has released audio for the new district of Vijayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X