ಬಾಗಲಕೋಟೆ; ಮಕ್ಕಳನ್ನು ಕಾಪಾಡಿ ಸಿಡಿಲಿಗೆ ತಾನು ಬಲಿಯಾದ ತಾಯಿ
ಬಾಗಲಕೋಟೆ, ಮೇ 30: ಬಾಗಲಕೋಟೆಯಲ್ಲಿ ಇಂದು ಸಂಜೆ ಭಾರೀ ಮಳೆ ಸುರಿದಿದ್ದು, ಸಿಡಿಲಿಗೆ ಓರ್ವ ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ.
Recommended Video
ರೈತರಿಗೆ
ಯಾವುದೇ
ರೀತಿಯ
ಮೋಸವಾಗದಂತೆ
ನೋಡಿಕೊಳ್ಳಲು
ಪಣ
ತೊಟ್ಟಿರುವೆ
-
BC
Patil
|
Farmers
ಮಹಿಳೆಯು ತನ್ನ ಇಬ್ಬರು ಮಕ್ಕಳೊಂದಿಗೆ ಹೊಲದಿಂದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಂತವ್ವ ಭೋವಿ (25) ಮೃತ ದುರ್ದೈವಿ. ಈಕೆಯ 1 ವರ್ಷ ಹಾಗೂ 4 ವರ್ಷದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯಲ್ಲಿ ಭಾರೀ ಗಾಳಿ ಮಳೆ: ಸಿಡಿಲಿಗೆ ಯುವಕ ಬಲಿ
ಮಕ್ಕಳ ಜೊತೆ ಮನೆಗೆ ಬರುವ ವೇಳೆ ಗುಡುಗು ಸಹಿತ ಜೋರು ಮಳೆ ಸುರಿದಿದೆ. ಸಿಡಿಲು ಬಡಿದಾಗ ಆ ಶಬ್ದಕ್ಕೆ ತಾಯಿ ಮಕ್ಕಳನ್ನು ಆ ಬದಿ ನೂಕಿದ್ದಾಳೆ. ಆದರೆ ಸಿಡಿಲಿಗೆ ತಾನು ಬಲಿಯಾಗಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Comments
English summary
Woman protected her two children and died by lightening strike in badami of Bagalkote district
Story first published: Saturday, May 30, 2020, 20:25 [IST]