ಸಿದ್ದು ನ್ಯಾಮಗೌಡ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಸಿದ್ದರಾಮಯ್ಯ
Recommended Video
ನೆನ್ನೆ
ನಿಧನರಾದ
ಸಿದ್ದು
ನ್ಯಾಮಗೌಡ
ಬಗ್ಗೆ
ಸಿದ್ದರಾಮಯ್ಯ
ಹೇಳಿದ್ದು
ಹೀಗೆ
|
Oneindia
Kannada
ಬಾಗಲಕೋಟೆ, ಮೇ. 29 : ಡಿಸಿಎಂ ಡಾ.ಜಿ.ಪರಮೇಶ್ವರ ಹಾಗೂ ಮಾಜಿ ಸಿ.ಎಂ. ಸಿದ್ದರಾಮಯ್ಯ ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು.
ಹುಬ್ಬಳ್ಳಿಯಿಂದ ಹೆಲಿಕ್ಯಾಫ್ಟರ್ ಮೂಲಕ ಆಗಮಿಸಿದ ನಾಯಕರು ಜಮಖಂಡಿ ತಾಲೂಕು ಕ್ರೀಡಾಂಗಣದಲ್ಲಿ ಇರಿಸಲಾಗಿದ್ದ ನ್ಯಾಮಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇಂದು ಸಿದ್ದು ನ್ಯಾಮಗೌಡ ಅಂತ್ಯಕ್ರಿಯೆ: ಕಾಂಗ್ರೆಸ್ ಮುಖಂಡರ ಆಗಮನ
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನ್ಯಾಮಗೌಡರು ತಮ್ಮ ಸಾಧನೆಯಿಂದ ಹೆಸರನ್ನು, ಬದುಕನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ಇಂತಹ ಶಾಸಕರನ್ನು ಕಳೆದುಕೊಂಡಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಸರಳ ಸಜ್ಜನಿಕೆಯ ನಾಯಕ ನ್ಯಾಮಗೌಡರು ರಾಮಕೃಷ್ಣ ಹೆಗಡೆ ಅವರನ್ನು ಪರಾಭವಗೊಳಿಸಿ, ಕೇಂದ್ರ ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
Comments
siddu nyamagouda siddaramaiah g parameshwara funeral bagalkot district news ಸಿದ್ದು ನ್ಯಾಮಗೌಡ ಅಂತಿಮ ಸಂಸ್ಕಾರ ಬಾಗಲಕೋಟೆ
English summary
Former Chief Minister Siddaramaiah, Deputy Chief Minister Dr Parameshwara attended to Jamkhandi MLA Siddu Nyamagouda funeral. In this time siddaramaiah said about Nyamagouda achievements.