ಬಾಗಲಕೋಟೆ: ಮೂರು ಕಡೆ ವಿಶ್ವ ಯೋಗ ದಿನಾಚರಣೆ, 10 ಸಾವಿರ ವಿದ್ಯಾರ್ಥಿಗಳು ಭಾಗಿ
ಬಾಗಲಕೋಟೆ, ಜೂನ್.17: ಬಿವಿವಿ ಸಂಘದ ವತಿಯಿಂದ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ದಿನಾಚರಣೆಯಲ್ಲಿ ಮೂರು ಕಡೆ ಏಕಕಾಲಕ್ಕೆ 3 ಸಾವಿರ ಸಿಬ್ಬಂದಿ ಮತ್ತು ಹತ್ತು ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷ ಹಾಗೂ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ನಗರದಲ್ಲಿ
ಭಾನುವಾರ
ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ
ಅವರು
ಬಸವೇಶ್ವರ
ಕಲಾ,
ವಿಜ್ಞಾನ,
ವಾಣಿಜ್ಯ,
ಕಾನೂನು,
ಶಿಕ್ಷಣ,
ಪಾಲಿಟೆಕ್ನಿಕ್,
ಡೆಂಟಲ್,
ಔಷಧ
ವಿಜ್ಞಾನ,
ಪ್ರಾಥಮಿಕ
ಹಾಗೂ
ಪ್ರೌಢಶಾಲೆ
ವಿದ್ಯಾರ್ಥಿಗಳು,
ವಿದ್ಯಾರ್ಥಿನಿಯರು
ಹಾಗೂ
ಶಾಲಾ
ಕಾಲೇಜುಗಳ
ಶಿಕ್ಷಕ-ಶಿಕ್ಷಕೇತರ
ಸಿಬ್ಬಂದಿ
ಯೋಗ
ದಿನಾಚರಣೆಯಲ್ಲಿ
ಪಾಲ್ಗೊಳ್ಳುತ್ತಾರೆ.
ಈ ಬಾರಿ ಯೋಗ ದಿನಾಚರಣೆಯ ಮ್ಯಾಪಿಂಗ್ ಮಾಡಲಿದೆ ಇಸ್ರೋ
ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಇದರ ನೇತೃತ್ವ ವಹಿಸಲಿದೆ. ಡಾ.ಸಂಗೀತಾ ಬಳಗಾನೂರ, ಡಾ.ಆರ್.ಬಿ.ಹೊಸಮನಿ ಹಾಗೂ ಶ್ರೀಮತಿ ಮಲ್ಲಮ್ಮ ಬಾಜಪ್ಪನವರ ತಂಡ ಇದರ ನಿರ್ದೇಶನ ಮಾಡಲಿದೆ ಎಂದರು.
ನವನಗರದ
ಎಸ್.
ನಿಜಲಿಂಗಪ್ಪ
ವೈದ್ಯಕೀಯ
ಮಹಾವಿದ್ಯಾಲಯದ
ಹಾಗೂ
ಹಾನಗಲ್
ಕುಮಾರೇಶ್ವರ
ಆಸ್ಪತ್ರೆಯ
ಆವರಣದಲ್ಲಿ
ಜರುಗುವ
ಕಾರ್ಯಕ್ರಮದ
ನೇತೃತ್ವವನ್ನು
ಸಿದ್ದಣ್ಣ
ಶೆಟ್ಟರ
ವಹಿಸಲಿದ್ದಾರೆ.
ಡಾ.ಅಶೋಕ
ಬಡಕಲಿ,
ಡಾ.ಮೀನಾಕ್ಷಿ
ಬಡಕಲಿ,
ಡಾ.
ಎಸ್.ಎಸ್.
ದೊಡಮನಿ
ಹಾಗೂ
ಡಾ.
ನಾಗರಾಜ
ಅಂಬಿಗೇರ
ತಂಡದವರು
ಯೋಗ
ಪ್ರಾತ್ಯಕ್ಷಿಕೆ
ಪ್ರದರ್ಶಿಸಲಿದ್ದಾರೆ.
ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಅವರ ನೇತೃತ್ವದಲ್ಲಿ ಬಾಗಲಕೋಟೆಯ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಶ್ರೀ ಸಂಗಣ್ಣ ಕುಪ್ಪಸ್ತ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಹೀಗೆ ಮೂರು ಕಡೆ ಈ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಯೋಗ ದಿನಾಚರಣೆಯಲ್ಲಿ ಬಿ.ವ್ಹಿ.ವ್ಹಿ. ಸಂಘದ ವಿವಿಧ ಸಂಸ್ಥೆಗಳು, ಕಾಲೇಜುಗಳ ಪ್ರಾಚಾರ್ಯರು, ನಿರ್ದೇಶಕರು, ಸಂಯೋಜಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಒಟ್ಟು 3 ಸಾವಿರ ಸಿಬ್ಬಂದಿ ಮತ್ತು ಹತ್ತು ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.
2014 ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ಎಂದು ಘೋಷಿಸಿದೆ.
2014 ಸೆಪ್ಟೆಂಬರ್ 27 ರಂದು ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಜಿಯವರು ಯೋಗ ಭಾರತದ ಪ್ರಾಚೀನ ಸಂಪ್ರದಾಯವನ್ನು ವಿಶ್ವಸಮುದಾಯಕ್ಕೆ ಪರಿಚಯಿಸಿದಾಗ 177ಕ್ಕೂ ಹೆಚ್ಚಿನ ರಾಷ್ಟ್ರಗಳು ಸ್ಪಂದಿಸಿ ಸಹಮತ ವ್ಯಕ್ತಪಡಿಸಿದವು.
ದೇಹ-ಮನಸ್ಸು ಮತ್ತು ಆಧ್ಯಾತ್ಮದ ಸಾಮರಸ್ಯ ಸಾಧಿಸುವ ಕ್ರಮ 5000 ವರ್ಷಗಳಷ್ಟು ಪ್ರಾಚೀನವಾದುದು. ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಈ ಯೋಗ ಸಾಧನೆ ಮಹತ್ವದ್ದಾಗಿದೆ.
ಈ ಹಿನ್ನೆಲೆಯಲ್ಲಿ ಬಾಗಲಕೋಟ ಬಿವಿವಿ ಸಂಘ ಹಾಗೂ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬಾಗಲಕೋಟೆಯ ಮೂರು ಸ್ಥಳಗಳಲ್ಲಿ ವಿಶ್ವಯೋಗ ದಿನಾಚರಣೆಯನ್ನು ಜೂನ 21 ರಂದು ಬೆಳಗ್ಗೆ 6.45 ರಿಂದ 7.45 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಗೌರವಕಾರ್ಯದರ್ಶಿ
ಮಹೇಶ
ಎನ್.
ಅಥಣಿ,
ವೈದ್ಯಕೀಯ
ಕಾಲೇಜುಗಳ
ಆಡಳಿತ
ಮಂಡಳಿಯ
ಕಾರ್ಯಾಧ್ಯಕ್ಷ
ಸಿದ್ದಣ್ಣ
ಶೆಟ್ಟರ,
ಪ್ರಾಥಮಿಕ
ಹಾಗೂ
ಪ್ರೌಢ
ಶಿಕ್ಷಣ
ಮತ್ತು
ಕಾಲೇಜುಗಳ
ಆಡಳಿತ
ಮಂಡಳಿಯ
ಕಾರ್ಯಾಧ್ಯಕ್ಷ
ಅಶೋಕ
ಎಂ.
ಸಜ್ಜನ
ಮತ್ತಿತರರು
ಸುದ್ದಿಗೋಷ್ಠಿಯಲ್ಲಿದ್ದರು.