ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಅಧಿಕಾರಿಗಳಿಗೆ ನನ್ನ ಭಾಷಣ ಇಷ್ಟವಂತೆ: ಸಿ.ಎಂ ಇಬ್ರಾಹಿಂ

By Nayana
|
Google Oneindia Kannada News

ಬಾಗಲಕೋಟೆ, ಮೇ 08: ಬಾದಾಮಿ ರೆಸಾರ್ಟ್‌ ಮೇಲೆ ದಾಳಿ, ಗುಡ್ಡ ಅಗೆದು ಇಲಿ ಹಿಡಿದಂತೆ, ಐಟಿ ಅಧಿಕಾರಿಗಳಿಗೆ ಸಿಎಂ ಇಬ್ರಾಹಿಂ ಬಿಟ್ಟು ಬೇರೇನೂ ಸಿಕ್ಕಿಲ್ಲ, ಅಧಿಕಾರಿಗಳು ನನ್ನ ನೋಡಿ ನಿಮ್ಮ ಭಾಷಣ ಚೆನ್ನಾಗಿದೆ ಎಂದರು ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದರು.

ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವರಿಗೆ ಸೇರಿದ, ಬಾದಾಮಿ ಹೊರವಲಯದಲ್ಲಿರುವ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ರೆಸಾರ್ಟ್ ನಲ್ಲಿ ಸಿಎಂ ಇಬ್ರಾಹಿಂ ಇದ್ದರು ಎಂದು ತಿಳಿದು ಬಂದಿತ್ತು. ಈ ವಿಚಾರವಾಗಿ ಈ ವಿಚಾರವಾಗಿ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.

ಆನಂದ್ ಸಿಂಗ್ ಗೆ ಸೇರಿದ ಬಾದಾಮಿಯ ರೆಸಾರ್ಟ್ ಮೇಲೆ ಐಟಿ ದಾಳಿ ಆನಂದ್ ಸಿಂಗ್ ಗೆ ಸೇರಿದ ಬಾದಾಮಿಯ ರೆಸಾರ್ಟ್ ಮೇಲೆ ಐಟಿ ದಾಳಿ

ಬಾದಾಮಿಯಲ್ಲಿ ಹಣ ಖರ್ಚು ಮಾಡಿ ಸಿಎಂ ಗೆಲ್ಲುವ ಪರಿಸ್ಥಿತಿ ಇಲ್ಲ ಇಲ್ಲಿಯ ಜನರೇ ಹಣ ಖರ್ಚು ಮಾಡಿ ಸಿಎಂ ಅವರನ್ನು ಗೆಲ್ಲಿಸುತ್ತಾರೆ.

IT sleuths applause Ibrahims style of speech

ಪಾರಸ್ ಮಲ್ ಖರ್ಚಿಗೆ ತಂದಿರೋ ಹಣ ತೆಗೆದುಕೊಂಡು ಹೋಗಿದ್ದಾರೆ . ಪಾಪ ಊಟಕ್ಕೆ ಹಣ ಇಲ್ಲದಂತೆಕುಳಿತಿದ್ದಾನೆ.ಇದು ರಾಜಕೀಯ ಪ್ರೇರಿತ ದಾಳಿ ಅಲ್ಲದೇ ಇನ್ನೇನು .ಐಟಿ ಅಧಿಕಾರಿಗಳು ನಮ್ಮ ಬೀಗರಲ್ಲ, ನಮ್ಮ ಜೊತೆಗೆ ಬೀಗಸ್ತನ ಮಾಡೋದಕ್ಕೆ ಬಂದಿರಲಿಲ್ಲ.

ಅವರು ಬಂದಿದ್ದೇ ನಮ್ಮನ್ನ ಎದುರಿಸೋಕೆ. ಏನೋ ಸಿಗುತ್ತೆ ಅಂತ ಆಸೆ ಇಟ್ಟುಕೊಂಡು ಬಂದಿದ್ದರು. ನಮ್ಮ ಹತ್ರ ಏನು ಸಿಗಬೇಕು ನಾವು ಅಕ್ಷಯ ಪಾತ್ರೆಯಲ್ಲಿ ಬಿಕ್ಷೆ ಬೇಡುವ ಜನ. ಬಿಜೆಪಿಯರ ಮೇಲೆ ಐಟಿ ದಾಳಿ ಆಗಲ್ಲ, ಯಾಕೆಂದರೆ ಕೇಂದ್ರದಲ್ಲಿ ಸರ್ಕಾರ ಅವರದ್ದೇ ಇದೆ.

ಬಿಜೆಪಿಯವರು ದುಡ್ಡು ಹಂಚುವ ಕೆಲಸ ಮಾಡ್ತಾರೆ, ಅದನ್ನ ಜನರೇ ತಡೆಯಬೇಕು, ನಮ್ಮಿಂದ ಸಾಧ್ಯವಿಲ್ಲ ಎಂದರು.

English summary
Former union ministers C.M. Ibrahim said income tax department officials have nothing found in resort where he stayed and the officials also appreciated his style of speech in public rallies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X