ನಾಲ್ಕು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ: ರಮೇಶ ಜಿಗಜಿಣಗಿ
ಬಾಗಲಕೋಟೆ, ಜೂನ್.06 : ಕೇಂದ್ರ ಸರ್ಕಾರದಿಂದ ವಿದ್ಯುತ್ ಪೂರೈಕೆ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ನಾಲ್ಕು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಗ್ರಾಮೀಣ ಪ್ರದೇಶಗಳ 1 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಭೀಮ್ ಆಪ್ ಮೂಲಕ 24,172 ಕೋಟಿ ವ್ಯವಹಾರ ನಡೆಸಲಾಗಿದೆ ಎಂದರು.
ಕೆಇಆರ್ಸಿಯ ರಿಯಾಯಿತಿ ವಿದ್ಯುತ್ ನಿರ್ಣಯದಿಂದ ಮೆಟ್ರೋ ನಿರಾಳ
ಉಜ್ವಲ ಯೋಜನೆಯಡಿ 3,98,77,723 ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕವನ್ನು ಬಿಪಿಎಲ್ ಕುಟುಂಬಗಳಿಗೆ ನೀಡಲಾಗಿದೆ. ಕರ್ನಾಟಕಕ್ಕೆ ಕೊಡುಗೆ-18 ಸರ್ಕಾರಿ ಮೆಡಿಕಲ್ ಕಾಲೇಜ್ ಪೈಕಿ ಮೂರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡುಗೆಯಾಗಿದೆ.
ಕನ್ನಡಿಗರಿಗೆ ಮೊದಲ ಬಾರಿಗೆ ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿ ಕೊಟ್ಟಿದ್ದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರೈತರ
ಬ್ಯಾಂಕ್
ಖಾತೆಗಳಿಗೆ
ನೇರವಾಗಿ
ಹಣ
ಹಾಕುವುದರಿಂದಾಗಿ
ಮಧ್ಯ
ವರ್ತಿಗಳ
ಹಾವಳಿ
ತಪ್ಪಿದೆ.
ಸಂಕಷ್ಟದಲ್ಲಿರುವ
ರೈತರಿಗೆ
ಕೊಂಚ
ಮಟ್ಟಿನ
ನೆಮ್ಮದಿ
ತಂದಿದೆ.
ಲೋಕಸಭಾ
ಚುನಾವಣೆಯಲ್ಲಿ
ವರಿಷ್ಟರು
ಸ್ಪರ್ಧೆ
ಮಾಡು
ಎಂದು
ಅವಕಾಶ
ಕೊಟ್ಟರೆ
ಮಾತ್ರ
ಚುನಾವಣೆಯಲ್ಲಿ
ಸ್ಪರ್ಧಿಸುತ್ತೇನೆ
ಎಂದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ವಿ.ಪ.ಸದಸ್ಯ ಹಣಮಂತ ನಿರಾಣಿ, ಮಾಜಿ ವಿ.ಪ.ಸದಸ್ಯ ನಾರಾಯಣಸಾ ಭಾಂಡಗೆ, ರಾಜು ರೇವಣಕರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.