ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ : ವೀರಣ್ಣ ಚರಂತಿಮಠ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮೇ 27 : ಹಸಿದವರು ಮತ್ತು ಹಳಸಿದವರು ಕೂಡಿಕೊಂಡು ಮಾಡಿರುವ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಲ್ಪ ಕಾಲ ಆಡಳಿತ ನಡೆಸಲಿದ್ದು, ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗಾಗಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಶಾಸಕರು ನಿಮ್ಮ ಕೆಲಸ ಮಾಡಿಲ್ಲವೆಂದರೆ ಹುಚ್ಚು ನಾಯಿ ರೀತಿ ಹೊಡೆಯಿರಿ''ಶಾಸಕರು ನಿಮ್ಮ ಕೆಲಸ ಮಾಡಿಲ್ಲವೆಂದರೆ ಹುಚ್ಚು ನಾಯಿ ರೀತಿ ಹೊಡೆಯಿರಿ'

ಇನ್ನು ಅಧಿಕಾರ ವಹಿಸಿಕೊಂಡು ನಾಲ್ಕೈದು ದಿನಗಳು ಕಳೆದಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಸರ್ಕಾರ ಗೊಂದಲದಲ್ಲೇ ಬಿದ್ದು ಹೋಗಲಿದೆ ಎಂದರು. ಅತಿ‌ ವೇಗವಾಗಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜನರ ಕಲ್ಯಾಣಕ್ಕಾಗಿ ಬರಲಿದೆ.

Dr Veeranna Charantimath says coalition governament will decline in six months

2018ರಲ್ಲಿ ಮತ್ತೊಮ್ಮೆ ದೇಶದಲ್ಲಿ ನರೇಂದ್ರ‌ ಮೋದಿಯವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಸಂಸದ‌ ಪಿ.ಸಿ.ಗದ್ದಿಗೌಡರ ಮಾತನಾಡಿ, ರಾಜ್ಯದಲ್ಲಿರುವ ಕಿಚಡಿ‌ ಸರ್ಕಾರ ಮತ್ತು ಅಪಮೈತ್ರಿ ಮಾಡಿಕೊಂಡ ಸರ್ಕಾರಕ್ಕೆ ಆಯುಷ್ಯ ಕಡಿಮೆ‌ ಇದೆ‌. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ ಎಂದು ಟೀಕಿಸಿದರು.

English summary
Bagalakote MLA Dr Veeranna Charantimath Speaking at a congratulatory ceremony held on Sunday for BJP activists, coalition governament will rule in the state for a short while and will decline in six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X