ಮಧ್ಯಂತರ ಚುನಾವಣೆ ಇಲ್ಲ ಎನ್ನುತ್ತಲೇ ಚುನಾವಣೆಗೆ ತಯಾರಿ: ಸಿದ್ದರಾಮಯ್ಯ
ಬಾದಾಮಿ, ಜೂನ್ 28: ಮಧ್ಯಂತರ ಚುನಾವಣೆ ಸಾಧ್ಯವೇ ಇಲ್ಲ ಎನ್ನುತ್ತಲೇ ಮಧ್ಯಂತರ ಚುನಾವಣೆ ಬಗ್ಗೆ ಸುಳಿವು ನೀಡಿದ್ದಾರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ.
ತಮ್ಮ ಕ್ಷೇತ್ರವಾದ ಬಾದಾಮಿಯಲ್ಲಿ ಸಭೆಯೊಂದರಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಧ್ಯಂತರ ಚುನಾವಣೆ ಇಲ್ಲವೆಂದುಕೊಂಡೇ ಚುನಾವಣೆಗೆ ತಯಾರಾಗಿರಬೇಕು ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ ಎಚ್.ಡಿ.ದೇವೇಗೌಡ
ದೇವೇಗೌಡ ಅವರು ಮೊದಲಿಗೆ ಮಧ್ಯಂತರ ಚುನಾವಣೆ ಮಾತನ್ನಾಡಿದ್ದರು, ಆಗ ಸಿದ್ದರಾಮಯ್ಯ ಅವರು ಅದನ್ನು ಅಲ್ಲಗಳೆದಿದ್ದರು, ಆದರೆ ಈಗ ಸಿದ್ದರಾಮಯ್ಯ ಅವರೇ ತಮ್ಮ ಪಕ್ಷದವರಿಗೆ ಚುನಾವಣೆಗೆ ತಯಾರಾಗಿ ಎಂದಿರುವುದು ಅನುಮಾನ ಮೂಡಿಸಿದೆ.
ಅಹಿಂದ ಸಂಘಟನೆ ಮಾಡಿದ್ದಕ್ಕೆ ಜೆಡಿಎಸ್ನಿಂದ ಹೊರಗೆ ಹಾಕಿದರು ಎಂಬ ಬಯ್ಯಾಪುರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಹೇಳಿದ್ದು ಸರಿಯಾಗಿಯೇ ಇದೆ, ಅದರಲ್ಲಿ ತಪ್ಪೇನಿದೆ, ಸತ್ಯವನ್ನು ತಿರುಚಲು ಆಗುತ್ತಾ?, ಈಗ ಕಾಂಗ್ರೆಸ್ನಲ್ಲಿದ್ದೇನೆ, ಪಕ್ಷದ ಮೂಲಕವೇ ಸಂಘಟನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.