ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಡುರಸ್ತೆಯಲ್ಲಿ ವಕೀಲೆಗೆ ಥಳಿಸಿದಕ್ಕೆ ಕಾರಣ ಹೇಳುವ ಸಂಪೂರ್ಣ ವಿಡಿಯೋ

|
Google Oneindia Kannada News

ಬಾಗಲಕೋಟೆ, ಮೇ 18: ಬಾಗಲಕೋಟೆಯಲ್ಲಿ ಇತ್ತೀಚೆಗೆ ಮಹಿಳಾ ಮಕೀಲರ ಮೇಲೆ ವ್ಯಕ್ತಿಯೊಬ್ಬ ಮನಬಂದಂತೆ ಥಳಿಸಿದ್ದ, ಈ ವಿಡಿಯೋ ಈ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಅಸಲಿ ಸತ್ಯ ಬಯಲಾಗಿದೆ.

ಅಂದಹಾಗೇ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಹಲವಾರು ಜನ ವ್ಯಕ್ತಿಗೆ ಹಿಡಿ ಶಾಪ ಕೂಡ ಹಾಕಿದ್ದರು. ಆದರೆ ಇಲ್ಲಿ ನಡೆದಿರುವುದೇ ಬೇರೆ ಹಂಚಿಕೊಂಡಿದ್ದೇ ಬೇರೆ. ಬಹುಶ: ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದರೆ ವ್ಯಕ್ತಿ ಮೇಲಾಗಲಿ ಮಹಿಳೆ ಮೇಲಾಗಲಿ ಯಾರಿಗೂ ಸಿಂಪತಿ ಬರಲು ಸಾಧ್ಯವೇ ಇಲ್ಲ. ಯಾಕೆಂದರೆ ಸಂಪೂರ್ಣ ವಿಡಿಯೋದಲ್ಲಿ ಮಹಿಳೆ ಆರಂಭದಲ್ಲಿ ವ್ಯಕ್ತಿಗೆ ಥಳಿಸಿದ್ದಾಳೆ. ಈ ವಿಡಿಯೋದಲ್ಲಿ ಮಹಿಳೆಗೆ ಮಾತ್ರ ಥಳಿಸಿದ ಭಾಗವನ್ನು ಹಂಚಿಕೊಳ್ಳಲಾಗಿತ್ತು. ಆದರೆ ಪೂರ್ಣ ವಿಡಿಯೋದಲ್ಲಿ ಆರಂಭದಲ್ಲಿ ಮಹಿಳೆ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದಿರುವುದು ಕಂಡು ಬಂದಿದೆ.

ಬಾಗಲಕೋಟೆ: ನಡುರಸ್ತೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿಬಾಗಲಕೋಟೆ: ನಡುರಸ್ತೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿ

ಅಂದಹಾಗೆ ಈ ವಿಡಿಯೋವನ್ನು ಶಶಿಕಲಾ ಡಿ.ವಿ ಎಂಬುವವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆ ವಕೀಲೆಯ ಹೆಸರು ಸಂಗೀತಾ ಶಿಕ್ಕೇರಿ ಎಂದು ಬರೆದಿದ್ದರು. ಜೊತೆಗೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಮಾಂತೇಶ್ ಚೊಳಚಗುಡ್ಡ ಎಂದು ಹೇಳಿದ್ದರು.

Bagalkot: woman assault viral video reason revealed

'ಮಧ್ಯೆ ರಾತ್ರಿಯಲ್ಲಿ ಒಂಟಿ ಮಹಿಳೆ ಸುರಕ್ಷಿತವಾಗಿ ಓಡಾಡಿದರೆ ಆಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ' ಎಂದು ಮಹತ್ಮಾ ಗಾಂಧಿಜಿ ಅವರು ಹೇಳಿದ್ದಾರೆ. ಆದರೆ ಇಲ್ಲಿ ಬೆಳಗ್ಗೆ ನಡು ರಸ್ತೆಯಲ್ಲಿ ಅಷ್ಟು ಜನಗಳ ಮದ್ಯೆ ಒಂದು ಹೆಣ್ಣನ್ನು ಒಬ್ಬ ಕ್ರೂರಿ ಈ ರೀತಿ ಕಾಲಿನಲ್ಲಿ ಒದ್ದರೂ ಅಷ್ಟು ಜನ ಸುಮ್ಮನೆ ನೋಡುತ್ತಾ ತಮಾಷೆ ನೋಡ್ತಾಯಿದ್ದಾರೆ. ಆ ಹೆಣ್ಣಿನ ರಕ್ಷಣೆಗೆ ಯಾರೂ ಮುಂದಾಗಿಲ್ಲ ಇದೇನಾ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಸಿಗುವ ಮರ್ಯಾದೆ.. ಗೌರವ.. ರಕ್ಷಣೆ... 'ಎಂದು ಪ್ರಶ್ನೆ ಮಾಡಿದ್ದರು.

Bagalkot: woman assault viral video reason revealed

'ಇದರಲ್ಲಿ ಹೆಣ್ಣಿನ ತಪ್ಪು ಇದ್ದರೆ ಕಾನೂನು ಕೈಗೆ ನೀಡಲಿ. ಅದನ್ನು ಬಿಟ್ಟು ನಡುರಸ್ತೆಯಲ್ಲಿ ಹಲ್ಲೆ ಮಾಡಲು ಅಧಿಕಾರ ಇಲ್ಲ. ಇಂತಹ ನೀಚ ಸಂಸ್ಕೃತಿಯನ್ನು ಹೊಂದಿರುವವರಿಗೆ ಯಾವುದೇ ಜಾತಿ ಆದರೂ ಪರವಾಗಿಲ್ಲ ಶಿಕ್ಷೆ ಆಗಲೇಬೇಕು. ಯಾವುದೇ ಸಮುದಾಯದ ಹೆಣ್ಣಿನ ಮೇಲೆ ಇಂತಹ ಕೃತ್ಯಗಳು ನಡೆದರೆ ಪ್ರತಿಯೊಂದು ವರ್ಗದ ಮಹಿಳೆಯರು ಹೋರಾಟ ಮಾಡಬೇಕು' ಎಂದು ಹೋರಾಟದ ಕಿಚ್ಚು ಹತ್ತಿಸಿದ್ದರು.

Bagalkot: woman assault viral video reason revealed

ಇದು ನಿಜ. ಯಾವುದೇ ಹೆಣ್ಣಿನ ಮೇಲೆ ಯಾರಿಗೇ ಆಗಲಿ ಕೈ ಮಾಡುವ ಅಧಿಕಾರ ಇಲ್ಲ. ಇದು ಗಂಡಸರ ವಿಚಾರಕ್ಕೂ ಅನ್ವಯವಾಗುತ್ತದೆ. ಯಾರೇ ತಪ್ಪು ಮಾಡಿರಲಿ ಅದಕ್ಕೆ ಶಿಕ್ಷೆ ನೀಡುವ ಅಧಿಕಾರ ಕಾನೂನಿಗೆ ಮಾತ್ರ ಇದೆ. ಅದನ್ನ ಯಾರೇ ಮೀರಿದರೂ ಪ್ರಶ್ನೆ ಮಾಡುವಂತ ಹಕ್ಕು ಎಲ್ಲರಿಗೂ ಇದೆ. ಕಾನೂನಿನ ಪ್ರಕಾರವಾಗದೇ ಇದ್ದರೂ ಒಬ್ಬ ಮನುಷ್ಯರಾಗಿ ನಾವು ಅದನ್ನು ತಡೆಯಲೇಬೇಕು. ಇಲ್ಲವಾದರೇ ಇಂದು ಬೀದಿಯಲ್ಲಿ ಹೊಡೆಯುವ ಜನ, ಕೊಲೆ ಮಾಡಲೂ ಹಿಂಜರಿಯೋದಿಲ್ಲ. ಇದೊಂದು ಮನುಕುಲವೇ ತಲೆ ತಗ್ಗಿಸುವಂತಹ ಅಮಾನವೀಯ ಕೃತ್ಯ.

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

English summary
A woman lawyer Sangeetha shikkari reportedly assaulted by Mantesh Chulagudga in Bagalkot, video goes viral. Watch the full video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X