ಹೈವೆಲಿ ಗೂಡಂಗಡಿಗಳಿಗೆ ನುಗ್ಗಿದ ಲಾರಿ; ಮೂವರು ಸಾವು
ಬಾಗಲಕೋಟೆ, ಮಾರ್ಚ್ 17; ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ.
Recommended Video
Bagalkot
girl
reads
letter
complaining
and
slams
BJP
government
|
Oneindia
Kannada
ಜಿಲ್ಲೆಯ ಕೆರೂರ ಪಟ್ಟಣದ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ರಸ್ತೆ ಬದಿಯ ಗೂಡಂಗಡಿಗಳಿಗೆ ಲಾರಿಯೊಂದು ನುಗ್ಗಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಮಾನಂದಪ್ಪ ಕರಿ (17), ಪೂಜಾ ಹಳಪೇಠೆ (22) ಲಕ್ಣ್ಮಣ ಹಾದಿಮನಿ (32)ಮೃತರು. ಮೃತರು ಕೆರೂರು, ಬೆಳಗಾವಿ ಜಿಲ್ಲೆ ಸುರೇಬಾನ, ಹುಬ್ಬಳ್ಳಿ ಮೂಲದವರು..
ಒಬ್ಬ ಬಾಲಕ ಸೇರಿದಂತೆ ಆರು ಜನರನ್ನು ಕೆರೂರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Comments
English summary
Lory Accident In Kerur City: 3 Death at Bagalkote district. 2 persons hospitalised.