ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಸರ್ಕಾರದಿಂದ ಅಗ್ನಿಪಥ್‌ ವಿರುದ್ಧ ಶೀಘ್ರವೇ ನಿರ್ಣಯ

|
Google Oneindia Kannada News

ಅಮೃತಸರ, ಜೂ.30: ಸೇನಾಪಡೆಗಳಿಗೆ ಯುವಕರನ್ನು ಅಲ್ಪಾವಧಿಗೆ ನೇಮಿಸಿಕೊಳ್ಳುವ ಕೇಂದ್ರದ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ವಿರೋಧಿಸಲು ಪಂಜಾಬ್ ಸರ್ಕಾರವು ಶೀಘ್ರದಲ್ಲೇ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ತರಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ಘೋಷಿಸಿದ್ದಾರೆ.

ಪ್ರತಿಪಕ್ಷದ ನಾಯಕ (ಎಲ್‌ಒಪಿ) ಪರತಾಪ್ ಸಿಂಗ್ ಬಾಜ್ವಾ ಅಗ್ನಿಪಥ್‌ ನೇಮಕಾತಿ ಯೋಜನೆಯ ವಿರುದ್ಧ ಪಂಜಾಬ್ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಒತ್ತಾಯಿಸಿದ ನಂತರ ಶೂನ್ಯ ವೇಳೆಯಲ್ಲಿ ಸಿಎಂ ಭಗವಂತ ಮಾನ್‌ ಈ ಘೋಷಣೆ ಮಾಡಿದರು. ಆದರೆ ಬಿಜೆಪಿ ನಾಯಕ ಅಶ್ವನಿ ಶರ್ಮಾ ಸಲಹೆಯನ್ನು ವಿರೋಧಿಸಿದ್ದಾರೆ.

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ; ಪಂಜಾಬ್ ಸರ್ಕಾರದ ಘೋಷಣೆಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ; ಪಂಜಾಬ್ ಸರ್ಕಾರದ ಘೋಷಣೆ

ಅಗ್ನಿಪಥ್‌ ಯೋಜನೆ ವಿರುದ್ಧದ ನಿರ್ಣಯವನ್ನು ಗುರುವಾರ ಸದನದ ಮುಂದೆ ಮಂಡಿಸಲಾಗುವುದು ಎಂದು ತಿಳಿದುಬಂದಿದೆ. ಅಗ್ನಿಪಥ್‌ ವಿಷಯವನ್ನು ಪ್ರಸ್ತಾಪಿಸಿದ ಬಜ್ವಾ, ಸಶಸ್ತ್ರ ಪಡೆಗಳಿಂದ ನೇಮಕಗೊಂಡ ಶೇ 20 ಯುವಕರು ಪಂಜಾಬ್‌ನಿಂದ ಬಂದವರು. ಆದರೆ ಸರ್ಕಾರಗಳು ನೇಮಕಾತಿಯನ್ನು ಜನಸಂಖ್ಯೆಯ ಆಧಾರದ ಮೇಲೆ ಮಾಡಿದ ಪರಿಣಾಮ ರಾಜ್ಯದ ಪ್ರಾತಿನಿಧ್ಯವು ಶೇ. 7.8 ಕ್ಕೆ ಇಳಿಯಿತು. ಈ ಹೊಸ ಯೋಜನೆಯೊಂದಿಗೆ ಇದು 2.3 ಕ್ಕೆ ಇಳಿಯುತ್ತದೆ ಎಂದು ಹೇಳಿದ ಅವರು ಅಗ್ನಿಪಥ್ ಯೋಜನೆಯನ್ನು ವಿರೋಧಿಸಲು ರಾಜ್ಯ ವಿಧಾನಸಭೆಯ ಜಂಟಿ ನಿರ್ಣಯಕ್ಕೆ ಒತ್ತಾಯಿಸಿದರು.

ಸಿಎಂ ಭಗವಂತ ಮಾನ್ ಇದನ್ನು ಭಾವನಾತ್ಮಕ ಸಮಸ್ಯೆ ಎಂದು ಕರೆದರು. 17 ವರ್ಷ ವಯಸ್ಸಿನವರು ನೇಮಕಗೊಂಡಾಗ ಮತ್ತು 21ನೇ ವಯಸ್ಸಿನಲ್ಲಿ ಹಿಂದಿರುಗಿದಾಗ ಅವರು ಮದುವೆಯಾಗುವುದಿಲ್ಲ. ಅವನು ತನ್ನನ್ನು ತಾನು ಮಾಜಿ ಸೈನಿಕ ಎಂದು ಕರೆಯಲು ಹಿಂಜರಿಯುತ್ತಾರೆ ಅಲ್ಲದೆ (ರಕ್ಷಣಾ) ಕ್ಯಾಂಟೀನ್ ಸೌಲಭ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ. ನಾನು ಈ ಯೋಜನೆಯನ್ನು ವಿರೋಧಿಸುತ್ತೇನೆ ಎಂದು ಅವರು ಹೇಳಿದರು.

 ಯೋಜನೆಗಳ ಮೂಲವನ್ನು ಯಾರು ಅರಿತಿಲ್ಲ

ಯೋಜನೆಗಳ ಮೂಲವನ್ನು ಯಾರು ಅರಿತಿಲ್ಲ

ಅಗ್ನಿಪಥ್ ಕೇಂದ್ರ ಸರ್ಕಾರದ ವಿಚಿತ್ರ ಯೋಜನೆಯಾಗಿದ್ದು ಅದು ಭಾರತೀಯ ಸೇನೆಯ ಮೂಲ ರಚನೆಯನ್ನು ನಾಶಪಡಿಸುತ್ತದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕರಾಳ ಕೃಷಿ ಕಾನೂನುಗಳು ಮತ್ತು ಇತರ ಯೋಜನೆಗಳ ಮೂಲವನ್ನು ಬಿಜೆಪಿ ನಾಯಕರನ್ನು ಹೊರತುಪಡಿಸಿ ಯಾರೂ ಅರ್ಥಮಾಡಿಕೊಂಡಿಲ್ಲ. ಅಗ್ನಿಪಥ್‌ನಂತಹ ಆಧಾರರಹಿತ ನಡೆಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪಂಜಾಬ್ ವಿಧಾನಸಭೆ ಮಾತ್ರವಲ್ಲ, ದೇಶದಾದ್ಯಂತ ಎಲ್ಲಾ ರಾಜ್ಯಗಳ ವಿಧಾನಸಭೆಗಳು ಈ ಯೋಜನೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಸಿಎಂ ಮಾನ್‌ ಹೇಳಿದರು.

Breaking: ಇಬ್ಬರು ಅಧಿಕಾರಿಗಳಿಗೆ ಗುಂಡು ಹಾರಿಸಿದ ಯೋಧBreaking: ಇಬ್ಬರು ಅಧಿಕಾರಿಗಳಿಗೆ ಗುಂಡು ಹಾರಿಸಿದ ಯೋಧ

 ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ

ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ

ಆದಾಗ್ಯೂ, ಬಿಜೆಪಿ ಶಾಸಕ ಅಶ್ವನಿ ಶರ್ಮಾ ಬಜ್ವಾ ಸಲಹೆಯನ್ನು ವಿರೋಧಿಸಿ ಅವರು ಎಲ್ಲರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರು ಇದನ್ನು ವಿರೋಧಿಸುತ್ತಿದ್ದಾರೆ, ಏಕೆಂದರೆ ಈ ಯೋಜನೆಯು ಕೆಲಸ ಮಾಡಿದರೆ 2029 (ಲೋಕಸಭಾ) ಚುನಾವಣೆಯಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಸಿಎಂ ಮಾನ್‌ ಹೇಳಿದರು.

 21ನೇ ವರ್ಷಕ್ಕೆ 47 ಲಕ್ಷ ಆದಾಯ ಪಡೆಯುತ್ತಾರೆ

21ನೇ ವರ್ಷಕ್ಕೆ 47 ಲಕ್ಷ ಆದಾಯ ಪಡೆಯುತ್ತಾರೆ

ನೇಮಕಾತಿ ಯೋಜನೆಯ ಅನುಕೂಲಗಳನ್ನು ಹೇಳಿದ ಬಿಜೆಪಿ ನಾಯಕ ಅಶ್ವನಿ ಶರ್ಮಾ 17ನೇ ವಯಸ್ಸಿನಲ್ಲಿ ನೇಮಕಗೊಂಡವರು ಶೈಕ್ಷಣಿಕ ಅರ್ಹತೆ, ಕೌಶಲ್ಯ ತರಬೇತಿ ಜೊತೆಗೆ 21ನೇ ವರ್ಷಕ್ಕೆ 47 ಲಕ್ಷವನ್ನು ಪಡೆಯುತ್ತಾರೆ. ಜೊತೆಗೆ ಅವರಲ್ಲಿ ಶೇ. 25 ರಷ್ಟು ಸಾಮಾನ್ಯ ಕೇಡರ್‌ಗೆ ಆಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದರು.

 ಅಗ್ನಿಪಥ್‌ ನಿರ್ಣಯ ತನ್ನಿ: ಖೈರಾ

ಅಗ್ನಿಪಥ್‌ ನಿರ್ಣಯ ತನ್ನಿ: ಖೈರಾ

ಕಾಂಗ್ರೆಸ್ ಸದಸ್ಯ ಸುಖಪಾಲ್ ಖೈರಾ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲು ಗಾಯಕ ಸಿಧು ಮೂಸ್ ವಾಲಾ ಅವರ ಹಾಡನ್ನು ನಿಷೇಧಿಸಿರುವುದನ್ನು ರಾಜ್ಯ ವಿಧಾನಸಭೆ ಖಂಡಿಸಬೇಕು. ಅಲ್ಲದೆ ಅಗ್ನಿಪಥ್‌ ನೇಮಕಾತಿ ಯೋಜನೆ ವಿರುದ್ಧ ನಿರ್ಣಯ ತರಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಮನ್ ಕೂಡ ಅವರ ಸಲಹೆಯನ್ನು ಬೆಂಬಲಿಸಿದರು.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

English summary
Punjab Chief Minister Bhagwant Mann announced that the Punjab government will soon bring a resolution in the state assembly to oppose the Agnipath recruitment scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X