ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರೀಂದರ್ ಜೊತೆ ವೈಮನಸ್ಯ, ಸಭೆಗೂ ಹಾಜರಾಗದ ಸಿಧು

|
Google Oneindia Kannada News

ಚಂಡಿಗಢ, ಜೂನ್ 06: ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಜೊತೆಗೆ ವೈಮನಸ್ಯ ಹೊಂದಿರುವ ಕಾಂಗ್ರೆಸ್ ಮುಖಂಡ, ಸಚಿವ ನವಜೋತ್ ಸಿಧು ಗುರುವಾರ ನಡೆದ ಸಚಿವ ಸಂಪುಟ ಸಭೆಗೂ ಹಾಜರಾಗದೆ ತಮ್ಮ ಮುನಿಸನ್ನು ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ ಅಮರೇಂದರ್ ಸಿಂಗ್‌ಗೆ ಸಿಧು ನೀಡಿದ ಉತ್ತರವೇನು?ಕ್ಯಾಪ್ಟನ್ ಅಮರೇಂದರ್ ಸಿಂಗ್‌ಗೆ ಸಿಧು ನೀಡಿದ ಉತ್ತರವೇನು?

ಈ ನಡೆ ಪಂಜಾಬ್ ಕಾಂಗ್ರೆಸ್ ಎರಡು ಬಣಗಳಾಗಿ ಒಡೆಯುವ ಸೂಚನೆಯನ್ನು ನೀಡಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಾಗಾಯ್ತೂ, ಪಂಜಾಬಿನಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅಮರೀಂದರ್ ಸಿಂಗ್ ಬಯಸಿದ್ದರು. ಇಂದು ಸಹ ಸಚಿವ ಸಂಪುಟ ಬದಲಿಸುವ ಬಗ್ಗೆಯೇ ಸಭೆ ನಡೆಸಲು ನಿರ್ಧರಿಸಲಾಗಿತ್ತು.

Navjot Singh Sidhu skipped a cabinet meeting

ಕಾಂಗ್ರೆಸ್ ಸೋಲಿಗೆ ಸಿಧು ಕಾರಣ: ಸಂಪುಟದಿಂದ ಕಿತ್ತೊಗೆಯಲು ಅಮರಿಂದರ್ ಬಯಕೆಕಾಂಗ್ರೆಸ್ ಸೋಲಿಗೆ ಸಿಧು ಕಾರಣ: ಸಂಪುಟದಿಂದ ಕಿತ್ತೊಗೆಯಲು ಅಮರಿಂದರ್ ಬಯಕೆ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿಧು ಅವರೇ ಕಾರಣ ಎಂದು ಅಮರೀಂದರ್ ಸಿಂಗ್ ಹೇಳಿದ್ದರು. ಜೊತೆಗೆ ಸಿಧು ಅವರನ್ನು ಸಂಪುಟದಿಂದ ಕಿತ್ತೆಸೆಯಲು ನಿರ್ಧರಿಸಿದ್ದರು. ಸಿಧು ಅವರ ಭಾರತ ವಿರೋಧಿ ಹೇಳಲಿಕೆಗಳು, ಪಾಕಿಸ್ತಾನ ಪರವಾದ ನಿಲುವು ಇವು ಪಂಜಾಬಿನಲ್ಲೂ ಕಾಂಗ್ರೆಸ್ ಸರಕಾರದ ಪತನಕ್ಕೆ ಕಾರಣವಾಗಬಹುದು ಎಂಬುದು ಅಮರೀಂದರ್ ಆತಂಕವಾಗಿತ್ತು.

English summary
Punjab Cabinet Minister Navjot Singh Sidhu skipped a cabinet meeting on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X