ಪಂಜಾಬ್ : ಗ್ರೆನೇಡ್ ದಾಳಿಕೋರರ ಸುಳಿವು ನೀಡಿದರೆ 50 ಲಕ್ಷ ರು!
ಅಮೃತ್ ಸರ್, ನವೆಂಬರ್ 19: ಅಮೃತ್ ಸರದ ರಾಜಸಾನ್ಸಿಯ ನಿರಂಕಾರಿ ಭವನ್ ಪ್ರಾರ್ಥನಾ ಮಂದಿರದ ಮೇಲೆ ಇಬ್ಬರು ಆಗಂತುಕರು ಗ್ರೆನೇಡ್ ದಾಳಿ ನಡೆಸಿದ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ತನಿಖೆ ಆರಂಭಿಸಿದೆ.
ಭಾನುವಾರದಂದು ನಡೆದ ಈ ದಾಳಿಯಲ್ಲಿ ಮೂವರು ಮೃತಪಟ್ಟು, 20ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರು ಪರಿಹಾರ ಧನ ಘೋಷಿಸಿದ್ದಾರೆ.
ಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವು
ದಾಳಿಕೋರರ ಮಾಹಿತಿ ಕೋರಿಗೆ: ಇಬ್ಬರು ದಾಳಿಕೋರರ ಮಾಹಿತಿ ಕಲೆ ಹಾಕುತ್ತಿರುವ ಸ್ಥಳೀಯ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ. ಆದರೆ, ದೃಶ್ಯಗಳು ಸ್ಪಷ್ಟವಾಗಿಲ್ಲ. ಅವರು ಬಂದಿದ್ದ ಬೈಕಿಗೆ ನಂಬರ್ ಪ್ಲೇಟ್ ಕೂಡಾ ಇರಲಿಲ್ಲ. ದುಷ್ಕರ್ಮಿಗಳ ನೀಡಿದರೆ 50 ಲಕ್ಷರು ಬಹುಮಾನ ನೀಡುವುದಾಗಿ ಸಿಎಂ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.
ಕಾಬೂಲ್ ನ ಹೈಸ್ಕೂಲ್ ಎದುರು ಆತ್ಮಹತ್ಯಾ ದಾಳಿ, ಎಂಟು ಮಂದಿ ಸಾವು
ಶಂಕಿತರ ಮಾಹಿತಿ ನೀಡಿ, ತನಿಖೆಗೆ ಸಹಕರಿಸಿದಲ್ಲಿ ಸರ್ಕಾರ ವಿಶೇಷ ಬಹುಮಾನ ನೀಡಲಿದ್ದು, ಮಾಹಿತಿಯನ್ನು ಪಂಜಾಬ್ ಪೊಲೀಸರ ಸಹಾಯವಾಣಿ 181ಕ್ಕೆ ಕರೆ ಮಾಡಿ ನೀಡಬಹುದು
Punjab: Three member team of National Investigation Agency (NIA) reached the blast site in Amritsar. The blast that took place earlier in the day claimed three lives. pic.twitter.com/iBI0TLV84t
— ANI (@ANI) November 18, 2018
ಘಟನೆಯನ್ನು ಮೇಲ್ನೋಟಕ್ಕೆ ಗಮನಿಸಿದಲ್ಲಿ ಇದೊಂದು ಉಗ್ರ ಕೃತ್ಯ, ಖಾಲಿಸ್ತಾನ್ ಬೆಂಬಲಿಗರು ಮಾಡಿರಬಹುದು ಎಂದು ಅನುಮಾನ ಮೂಡಿದೆ. ಘಟನೆ ನಡೆದಾಗ 200ಕ್ಕೂ ಅಧಿಕ ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದು ಅಮೃತ್ ಸರ್ ಗಡಿ ಭಾಗದ ಐಜಿಪಿ ಎಸ್ ಪಿಎಸ್ ಪಾರ್ಮಾರ್ ಅವರು ಹೇಳಿದ್ದಾರೆ.