ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಎಸ್ಪಿ ಕೈ ಅಡುಗೆ!

|
Google Oneindia Kannada News

ವಿಶಾಖಪಟ್ಟಣಂ, ಮೇ.21: ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರ ಹಸಿವು ನೀಗಿಸುವ ನಿಟ್ಟಿನಲ್ಲಿ ಸ್ವತಃ ಮಹಿಳಾ ಎಸ್ಪಿ ಲೆಮನ್ ರೈಸ್ ತಯಾರಿಸಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ಕಳೆದ ಬುಧವಾರ ರಾತ್ರಿ ವಿಶಾಖಪಟ್ಟಣಂ ಎಸ್ಪಿ ರಾಜಕುಮಾರ್ ಅವರಿಗೆ ಕೆಲವು ವಲಸೆ ಕಾರ್ಮಿಕರು ಕರೆ ಮಾಡು ನೋವು ತೋಡಿಕೊಂಡಿದ್ದರು. ಕಳೆದ ಮೇ.16ರಂದು ನೆಲ್ಲೂರಿನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂವರೆಗೂ ನಡೆದುಕೊಂಡು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.

ಶ್ರಮಿಕ್ ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಕೊರೊನಾ ಅಂಟಲು ಇಷ್ಟೇ ಸಾಕು!ಶ್ರಮಿಕ್ ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಕೊರೊನಾ ಅಂಟಲು ಇಷ್ಟೇ ಸಾಕು!

ಇನ್ನು, ವಲಸೆ ಕಾರ್ಮಿಕರಿಗೆ ಮಾರ್ಗಮಧ್ಯೆ ಎಲ್ಲಿಯೂ ಊಟ ಸಿಗದೇ ಪರದಾಡಿದ್ದನ್ನು ಎಸ್ಪಿ ಅವರಲ್ಲಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ನೋವಿಗೆ ಸ್ಪಂದಿಸಿದ ಎಸ್ಪಿ ರಾಜಕುಮಾರ್ ಸ್ವತಃ ತಾವೇ ಲೆಮನ್ ರೈಸ್ ತಯಾರಿಸಿಕೊಂಡು ಬಂದು ವಲಸೆ ಕಾರ್ಮಿಕರಿಗೆ ವಿತರಿಸಿದ್ದಾರೆ.

Visakhapatnam SP Prepared Lemon Rice And Distribute For migrant workers

ಕ್ವಾರೆಂಟೈನ್ ಕೇಂದ್ರದಲ್ಲಿದ್ದ ವಲಸೆ ಕಾರ್ಮಿಕರು:

ವಿಶಾಖಪಟ್ಟಣಂ ತಲುಪಲು ನಡೆದುಕೊಂಡು ಬರುತ್ತಿದ್ದ ವಲಸೆ ಕಾರ್ಮಿಕರಿಗೆ ಕೆಲವರು ಎಸ್ಪಿ ರಾಜಕುಮಾರಿ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ್ದು, ಅಗತ್ಯ ಸಹಾಯ ಬೇಕಿದ್ದಲ್ಲಿ ಇವರಿಗೆ ಕರೆ ಮಾಡುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳಾ ವಲಸೆ ಕಾರ್ಮಿಕರೊಬ್ಬರು ಎಸ್ಪಿಯವರಿಗೆ ಫೋನ್ ಮಾಡಿ ನೋವು ತೋಡಿಕೊಂಡಿದ್ದರು.

ಹಸಿವಿನಿಂದ ಬಳಲುತ್ತಿದ್ದ ವಲಸೆ ಕಾರ್ಮಿಕರಿಗಾಗಿ ಮನೆಯಿಂದಲೇ ಊಟ ತಯಾರಿಸಿಕೊಂಡು ಅವರು ತಿಳಿಸಿದ ಪ್ರದೇಶಕ್ಕೆ ತೆರಳಿದೆ. ಆದರೆ ಎಲ್ಲ ಕಾರ್ಮಿಕರನ್ನು ಸ್ಥಳೀಯ ಕಾಲೇಜ್ ಒಂದರಲ್ಲಿ ಕ್ವಾರೆಂಟೈನ್ ನಲ್ಲಿ ಇರಿಸಲಾಗಿತ್ತು. ನಂತರ ಅಲ್ಲಿಗೆ ತೆರಳಿ ಊಟವನ್ನು ನೀಡಿರುವುದಾಗಿ ಎಸ್ಪಿ ರಾಜ್ ಕುಮಾರಿ ತಿಳಿಸಿದ್ದಾರೆ.

English summary
Visakhapatnam SP Prepared Lemon Rice And Distribute For migrant workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X