ವಿಡಿಯೋ: ನಟ-ರಾಜಕಾರಣಿ ಬಾಲಕೃಷ್ಣರಿಂದ ಪತ್ರಕರ್ತನ ಮೇಲೆ ಹಲ್ಲೆ
ಹಿಂದೂಪುರ (ಆಂಧ್ರಪ್ರದೇಶ), ಮಾರ್ಚ್ 29: ನಟ- ತೆಲುಗು ದೇಶಂ ಪಕ್ಷದ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಹಲ್ಲೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮೋಜೋ ಟಿವಿಯ ಪತ್ರಕರ್ತನನ್ನು ಬೆದರಿಸುತ್ತಿರುವುದು ಹಾಗೂ ಆತನ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಕೂಡ ಸೆರೆಯಾಗಿವೆ. ಬುಧವಾರದಂದು ಈ ಘಟನೆ ನಡೆದಿದೆ. ಹಿಂದೂಪುರ ಶಾಸಕರೂ ಆದ ಬಾಲಕೃಷ್ಣ ತಮ್ಮ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸುವಾಗ ಈ ಘಟನೆ ನಡೆದಿದೆ.
ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ನಟ ಬಾಲಕೃಷ್ಣ
ಇದೀಗ ಆ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ ಹಾಗೂ ಷೇರ್ ಆಗುತ್ತಿದೆ. ಟಿಡಿಪಿಯ ಕಾರ್ಯಕರ್ತರು ಬಾಲಕೃಷ್ಣ ಅವರಿಗೆ ಹಾರ ಹಾಕಿದ್ದಾರೆ. ಆ ನಂತರ ಹಲವು ಮಕ್ಕಳು ಬಾಲಯ್ಯ ಬಳಿಗೆ ತೆರಳಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ವೈಯಕ್ತಿಕ ಭದ್ರತಾ ಸಿಬ್ಬಂದಿ ಆ ಮಕ್ಕಳನ್ನು ತಳ್ಳಿದ್ದಾರೆ. ಆ ದೃಶ್ಯವನ್ನು ವರದಿಗಾರ ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ.
ಇದನ್ನು ಗಮನಿಸಿದ ಬಾಲಕೃಷ್ಣ ಪತ್ರಕರ್ತರ ಜತೆ ಜಗಳಕ್ಕೆ ಇಳಿದು, ಹಲ್ಲೆ ಮಾಡಿದ್ದಾರೆ. ಕೆಟ್ಟ ಮಾತುಗಳಲ್ಲಿ ಬಯ್ದು, ಕೊಲ್ಲುವುದಾಗಿ ಧಮಕಿ ಹಾಕಿದ್ದಾರೆ. ಮೊದಲು ಆ ವಿಡಿಯೋ ಡಿಲೀಟ್ ಮಾಡು ಎಂದು ಬಾಲಕೃಷ್ಣ ಬೆದರಿಸುವುದು ತುಂಬ ಸ್ಪಷ್ಟವಾಗಿ ಕೇಳಿಸುತ್ತದೆ. ನನಗೆ ಕತ್ತಿ ಬಳಸುವುದೂ ಗೊತ್ತಿದೆ, ಬಾಂಬ್ ಹಾಕುವುದೂ ಗೊತ್ತಿದೆ. ನಿನ್ನ ಪ್ರಾಣ ತೆಗೀತೀನಿ ಎಂದು ಬೆದರಿಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಅಗಿದೆ.
Actor and #TDP Hindupur MLA, #Balakrishna issuing death threats to journalists. #Elections2019 #YSRCP #nbk #Congress #BJP #JSP pic.twitter.com/MBWn5xCv5u
— Rahul Devulapalli (@rahulscribe) 27 March 2019
ಬಾಲಕೃಷ್ಣ ಸಾರ್ವಜನಿಕವಾಗಿ ಹೀಗೆ ನಡೆದುಕೊಳ್ಳುತ್ತಿರುವುದು ಮೊದಲೇನಲ್ಲ. ಈ ಹಿಂದೆಯೂ ತನ್ನ ಅಭಿಮಾನಿಗಳು, ತಮ್ಮದೇ ಪಕ್ಷದ ಸದಸ್ಯರಿಗೆ ಹೊಡೆದ ಉದಾಹರಣೆಗಳಿವೆ.