ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನ: ಭಕ್ತಾದಿಗಳು ಪಾಲಿಸಬೇಕಾದ ನಿಯಮಗಳಿವು
ತಿರುಪತಿ, ಜೂನ್ 6: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಲಾಕ್ ಡೌನ್ ಅನ್ವಯ ದೇಶದ ಎಲ್ಲಾ ದೇವಾಲಯಗಳೂ ಮುಚ್ಚಲ್ಪಟ್ಟಿತ್ತು. ಇದೀಗ ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆದಿದ್ದು, ಉಳಿದೆಡೆ ನಿಯಮಗಳನ್ನು ಸಡಿಲಗೊಳಿಸಲಾಗಿದೆ.
Recommended Video
ಕೋವಿಡ್-19 ಸೋಂಕನ್ನು ತಡೆಗಟ್ಟುವ ಸಲುವಾಗಿ ಮಾರ್ಚ್ 20 ರಂದು ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಬಂದ್ ಮಾಡಲಾಗಿತ್ತು. 128 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಕ್ತಾದಿಗಳಿಗೆ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಾಲಯ ಮುಚ್ಚಲ್ಪಟ್ಟಿತ್ತು.
ಅನ್ ಲಾಕ್ 1.0: ಭಕ್ತರಿಗೆ ತಿರುಪತಿ ದೇವಾಲಯದ ಮಹತ್ವದ ಪ್ರಕಟಣೆ
ಆದ್ರೀಗ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ.. ವಿಶ್ವದ ಶ್ರೀಮಂತ ಹಿಂದೂ ದೇಗುಲ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ತೆರೆಯಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ.
ಕೊರೊನಾ ಮುಂದೆ ತಿಮ್ಮಪ್ಪನೂ ಮಂಕು; ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ
ಜೂನ್ 8 ರಿಂದ (ಸೋಮವಾರ) ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯ ಭಕ್ತರಿಗೆ ಮುಕ್ತವಾಗಲಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಕೆಲವು ನಿಯಮಗಳನ್ನು ಪಾಲಿಸಲೇಬೇಕಿದೆ. ಭಕ್ತರಿಗೆ ಟಿಟಿಡಿ ನೀಡಿರುವ ಮಾರ್ಗಸೂಚಿಗಳು ಇಂತಿವೆ:
ಪ್ರತಿ ಗಂಟೆಗೆ 500 ಭಕ್ತಾದಿಗಳಿಗೆ ದರ್ಶನದ ಅವಕಾಶ
* ಬೆಳಗ್ಗೆ 6.30 ರಿಂದ ಸಂಜೆ 7.30 ರವರೆಗೆ ಪ್ರತಿ ಗಂಟೆಗೆ ಸುಮಾರು 500 ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ಅವಕಾಶ.
* ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 10 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ.
ಪ್ರಾಯೋಗಿಕ ದರ್ಶನದ ಸ್ಪಾಟ್ ವ್ಯವಸ್ಥೆ
* ಪ್ರಾಯೋಗಿಕವಾಗಿ ಟಿಟಿಡಿಯ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಜೂನ್ 8 ಮತ್ತು 9 ರಂದು ಇಂಟರ್ ನೆಟ್ ಸೌಲಭ್ಯವನ್ನು ಬಳಸಿಕೊಂಡು ದರ್ಶನದ ಸ್ಲಾಟ್ ಕಾಯ್ದಿರಿಸಲಾಗುತ್ತದೆ. (ಇದಕ್ಕಾಗಿ ನೌಕರರು ತಮ್ಮ ಸ್ಲಾಟ್ ಗಳನ್ನು ಜೂನ್ 6 ಮತ್ತು 7 ರಂದು ಸ್ಲಾಟ್ ಗಳನ್ನು ಕಾಯ್ದಿರಿಸಬೇಕಿದೆ).
* ಜೂನ್ 10 ರಂದು ತಿರುಮಲ ಆವರಣದಲ್ಲಿರುವ ಟೈಮ್ ಸ್ಲಾಟ್ ಟೋಕನ್ ಕೌಂಟರ್ ಗಳಲ್ಲಿ ತಿರುಮಲ ಸ್ಥಳೀಯರಿಗೆ ಪ್ರತಿ ಗಂಟೆಗೆ 500 ವ್ಯಕ್ತಿಗಳಿಗೆ ಮಾತ್ರ ಸ್ಲಾಟ್ ಟೋಕನ್ ನೀಡಲಾಗುವುದು.
* ಜೂನ್ 11 ರಿಂದ ಭಕ್ತರಿಗೆ 300 ರೂಪಾಯಿ ಮೌಲ್ಯದ ದರ್ಶನದ ಆನ್ ಲೈನ್ ಟಿಕೆಟ್ ನೀಡಲಾಗುವುದು. ಬುಕ್ಕಿಂಗ್ ಗಾಗಿ ಆನ್ ಲೈನ್ ಕೋಟಾ ಜೂನ್ 8 ರಿಂದ ಲಭ್ಯವಿರಲಿದೆ.
ಆಸ್ತಿ ಮಾರಾಟ ಮಾಡುವ ಟಿಟಿಡಿ ನಿರ್ಧಾರ ತಡೆದ ಆಂಧ್ರ ಸರ್ಕಾರ!
ಆನ್ ಲೈನ್ ನಲ್ಲಿ ದರ್ಶನದ ಟಿಕೆಟ್ ಕಾಯ್ದಿರಿಸಬೇಕು
* ಗ್ರಾಮಗಳಿಂದ ಅಥವಾ ಗ್ರಾಮೀಣ ಪ್ರದೇಶಗಳಿಂದ ಬರುವವರು ಆನ್ ಲೈನ್ ನಲ್ಲಿಯೇ ದರ್ಶನದ ಟಿಕೆಟ್ ಕಾಯ್ದಿರಿಸಬೇಕಿದೆ.
* ಗ್ರಾಮಸ್ಥರಿಗೆ ಸಹಾಯ ಮಾಡಲು ಟಿಕೆಟ್ ಕಾಯ್ದಿರಿಸುವ ಸರಳ ಹಂತಗಳ ಬಗ್ಗೆ ತರಬೇತಿ ನೀಡಲಾಗುವುದು.
* ತಿರುಪತಿಯಲ್ಲಿರುವ ಎಸ್.ಎಸ್.ಡಿ ಕೌಂಟರ್ ಗಳಲ್ಲಿ ಪ್ರತಿದಿನ 3,000 ಸರ್ವ ದರ್ಶನ ಟಿಕೆಟ್ ಗಳನ್ನು ನೀಡಲಾಗುವುದು.
ವಿ.ಐ.ಪಿ ದರ್ಶನ ಇದ್ಯಾ.?
* ಜೂನ್ 11 ರಿಂದ ವಿ.ಐ.ಪಿ ದರ್ಶನ ವ್ಯವಸ್ಥೆ ಆರಂಭವಾಗಲಿದೆ.
* ಪ್ರತಿದಿನ ಬೆಳಗ್ಗೆ 6.30 ರಿಂದ 7.30 ರವರೆಗೆ ವಿ.ಐ.ಪಿ ದರ್ಶನ ವ್ಯವಸ್ಥೆ ಇರಲಿದೆ.
* ವಿ.ಐ.ಪಿ ದರ್ಶನ ಪಡೆಯಲು ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ.
ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್!
ತೀರ್ಥ ನೀಡುವುದಿಲ್ಲ
* ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಅಲಿಪಿರಿ ವಾಕರ್ಸ್ ಮಾರ್ಗ ಮಾತ್ರ ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ತೆರೆದಿರುತ್ತದೆ. ಆದರೆ, ಶ್ರೀವಾರಿ ಮೆಟ್ಟು ಮಾತ್ರ ಮುಚ್ಚಲ್ಪಟ್ಟಿರುತ್ತದೆ.
* ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಇರುವುದರಿಂದ ಎರಡೂ ಘಾಟ್ ಗಳ ರಸ್ತೆಗಳು ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಮಾತ್ರ ತೆರೆದಿರುತ್ತವೆ.
* ಮುಖ್ಯ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಕುಲಮಾಥ, ಭಾಷ್ಯಕಾರೂಳ ಸನ್ನಿಧಿ ಮತ್ತು ಯೋಗನರಸಿಂಹ ಸ್ವಾಮಿ ಸೇರಿದಂತೆ ಉಪ ದೇವಾಲಯಗಳನ್ನು ಸದ್ಯಕ್ಕೆ ತೆರೆಯುವುದಿಲ್ಲ.
* ಭಕ್ತರಿಗೆ ಪುಷ್ಕರಣಿ ಪ್ರವೇಶಿಸಲು ಅವಕಾಶವಿಲ್ಲ.
* ಭಕ್ತರಿಗೆ ತೀರ್ಥ ಮತ್ತು ಶತಾರಿ ನೀಡಲಾಗುವುದಿಲ್ಲ.
* ಶ್ರೀವಾರಿ ಹುಂಡಿ ಬಳಿ ಗಿಡಮೂಲಿಕೆಗಳ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತದೆ.
ಕೊಠಡಿ ಹಂಚಿಕೆ ಹೇಗೆ.?
* ಟಿಕೆಟ್ ನೊಂದಿಗೆ ಅಲಿಪಿರಿಗೆ ಪ್ರವೇಶಿಸುವ ಪ್ರತಿಯೊಬ್ಬ ಭಕ್ತರು ಅಲಿಪಿರಿ ಟೋಲ್ ಗೇಟ್ ನಲ್ಲಿ ಥರ್ಮಲ್ ಸ್ಕ್ಯಾನಿಂಗ್, ವೆಹಿಕಲ್ ಸ್ಕ್ಯಾನಿಂಗ್ ಮತ್ತು ಹ್ಯಾಂಡ್ ಸ್ಯಾನಿಟೈಸ್ ಗೆ ಒಳಗಾಗಬೇಕಿದೆ.
* ತಿರುಮಲದಲ್ಲಿ ಯಾತ್ರಾರ್ಥಿಗಳಿಗೆ ಪರ್ಯಾಯ (ಬೆಸ-ಬೆಸ, ಸಮ-ಸಮ) ಕ್ರಮದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ.
* ತಿರುಮಲದಲ್ಲಿ ಪ್ರತಿ ಕೋಣೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೇವಲ 24 ಗಂಟೆಗಳ ಕಾಲ ಉಳಿಯುವ ಅವಕಾಶವಿರುತ್ತದೆ.
* ಕೊಠಡಿಗಳ ವಿಸ್ತರಣೆಗೆ ಅವಕಾಶವಿಲ್ಲ.
* ಕೊಠಡಿಗಳ ಮರು ಹಂಚಿಕೆಗಾಗಿ 12 ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಲಾಗುವುದು.
* ಪ್ರತಿ ಎರಡು ಗಂಟೆಗಳಿಗೊಮ್ಮೆ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು.
* ತಿರುಪತಿಯಲ್ಲೂ ಕೊಠಡಿಯ ಹಂಚಿಕೆ ಇದೇ ವ್ಯವಸ್ಥೆಯನ್ನು ಅನುಸರಿಸುತ್ತದೆ.
ತಿರುಮಲದಲ್ಲಿ ಮದುವೆ.?
* ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ, ಆರೋಗ್ಯ ಅಧಿಕಾರಿಯ ಅನುಮೋದನೆಯ ನಂತರ ತಿರುಮಲದಲ್ಲಿರುವ ಮದುವೆ ಮಂಟಪದಲ್ಲಿ 50 ಜನರ ಸಮ್ಮುಖದಲ್ಲಿ ಮಾತ್ರ ವಿವಾಹ ನಡೆಸಲು ಅವಕಾಶ ನೀಡಲಾಗಿದೆ.
ನಿರಂತರ ಪ್ರಕಟಣೆ
* ಕೋವಿಡ್-19 ಬಗ್ಗೆ ಯಾತ್ರಾರ್ಥಿಗಳಲ್ಲಿ ಅರಿವು ಮೂಡಿಸಲು ಎಸ್.ಇ.ಡಿ ಮತ್ತು ಎಸ್.ಎಸ್.ಡಿ ಎಂಟ್ರಿ, ತಿರುಮಲ ವಸತಿ ಸೌಕರ್ಯ, ಅಲಿಪಿರಿ ಮಾರ್ಗದಲ್ಲಿ ತಡೆರಹಿತ ಪ್ರಕಟಣೆಗಳನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾಡಲಾಗುವುದು.
* ತಿರುಮಲ ತಿರುಪತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಕಡ್ಡಾಯ.
* ಮಾತೃಶ್ರೀ ತರಿಗೊಂಡ ವೆಂಗಮಾಂಬ ಅನ್ನದಾನಂ ಕಾಂಪ್ಲೆಕ್ಸ್ ಮಾತ್ರ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿದೆ.
* ಯಾತಾರ್ಥಿಗಳ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರು, ಶ್ರೀವಾರಿ ಸೇವಕರು ಮತ್ತು ಕ್ಷೌರಿಕರಿಗೆ ಪಿಪಿಇ ಕಿಟ್ ಗಳನ್ನು ನೀಡಲಾಗುವುದು.
ಕೋವಿಡ್-19 ಪರೀಕ್ಷೆ
* ಪ್ರತಿದಿನ 200 ಭಕ್ತಾದಿಗಳು ಮತ್ತು ನೌಕರರಿಗೆ ಕೋವಿಡ್-19 ರಾಂಡಮ್ ಪರೀಕ್ಷೆ ನಡೆಸಲಾಗುವುದು.
* ತಿರುಮಲದ ಅಲಿಪಿರಿ ಮತ್ತು ಅಶ್ವಿನಿ ಆಸ್ಪತ್ರೆಯಲ್ಲಿ ವಿಶೇಷ ಕೋವಿಡ್-19 ಪರೀಕ್ಷೆ ಮತ್ತು ಮಾದರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* ಭಕ್ತರು ಮತ್ತು ನೌಕರರ ಅನುಕೂಲಕ್ಕಾಗಿ ಕೊರೊನಾ ಪರೀಕ್ಷಾ ಪ್ರಯೋಗಾಲಯವನ್ನು ತಿರುಪತಿಯಲ್ಲಿ SVIMS ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ.
* ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದರೆ, ಭಕ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆದುಕೊಳ್ಳಬೇಕಿದೆ.
ಕಂಟೇನ್ಮೆಂಟ್ ಝೋನ್ ನಲ್ಲಿರುವವರು ದರ್ಶನ ಟಿಕೆಟ್ ಕಾಯ್ದಿರಿಸಬೇಡಿ
* ಕಂಟೇನ್ಮೆಂಟ್ ಝೋನ್ ನಲ್ಲಿರುವ ಭಕ್ತಾದಿಗಳು ಆನ್ ಲೈನ್ ದರ್ಶನ ಟಿಕೆಟ್ ಗಳನ್ನು ಕಾಯ್ದಿರಿಸದಂತೆ ಸೂಚಿಸಲಾಗಿದೆ.
* ಆನ್ ಲೈನ್ ಟಿಕೆಟ್ ಕಾಯ್ದಿರಿಸಿದ ಇತರೆ ರಾಜ್ಯಗಳ ಭಕ್ತರು ಆಯಾ ರಾಜ್ಯ ಸರ್ಕಾರಗಳು ಸೂಚಿಸಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು.
* ದರ್ಶನದ ಟಿಕೆಟ್ ಗಳು ರಾಜ್ಯವನ್ನು ಪ್ರವೇಶಿಸಲು ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಭಕ್ತರು ಗಮನಿಸಬೇಕು.