ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತರ ಗೊಂದಲಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ

|
Google Oneindia Kannada News

ಅಮರಾವತಿ, ಆಗಸ್ಟ್ 10 : ಟಿಟಿಡಿ ಆಡಳಿತ ಮಂಡಳಿಯ 743 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಆದರೆ, ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ, ದರ್ಶನ ಎಂದಿನಂತೆ ಇರಲಿದೆ ಎಂದು ಆಡಳಿತ ಮಂಡಳಿ ಹೇಳಿದೆ.

Recommended Video

BSY Discharged : ಒಂದೇ ವಾರದಲ್ಲಿ ಆಸ್ಪತ್ರೆಯಿಂದ ಹೊರಬಂದ ಯಡಿಯೂರಪ್ಪ | Oneindia Kannada

ಸೋಮವಾರ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. "ಆಂಧ್ರ ಪ್ರದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ತಿರುಪತಿಯಲ್ಲಿ ಮಾತ್ರ ಹೆಚ್ಚಾಗುತ್ತಿಲ್ಲ" ಎಂದು ಹೇಳಿದ್ದಾರೆ.

ತಿರುಮಲ ತಿರುಪತಿ ಭಕ್ತರಿಗೆ ಆಘಾತಕಾರಿ ಸಂಗತಿ ತಿಳಿಸಿದ ಅಧಿಕಾರಿ ತಿರುಮಲ ತಿರುಪತಿ ಭಕ್ತರಿಗೆ ಆಘಾತಕಾರಿ ಸಂಗತಿ ತಿಳಿಸಿದ ಅಧಿಕಾರಿ

"ನಮ್ಮ ಹಿತ ಕಾಪಾಡಲು ಬಾಲಾಜಿ ಇದ್ದಾನೆ. ಇಂತಹ ಬಿಕ್ಕಟ್ಟಿನಲ್ಲಿ ನಮ್ಮನ್ನು ಅವನೇ ಕಾಪಾಡುತ್ತಾನೆ, ಮುನ್ನೆಡೆಸುತ್ತಾನೆ. ದೇವಾಲಯ ಮುಚ್ಚಲು ಯಾವುದೇ ಕಾರಣಗಳು ಇಲ್ಲ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಿರುಪತಿ ಬಂದ್ ಮಾಡಿ; ದರ್ಶನದ ವಿಚಾರ ಮತ್ತೆ ಆರಂಭ ತಿರುಪತಿ ಬಂದ್ ಮಾಡಿ; ದರ್ಶನದ ವಿಚಾರ ಮತ್ತೆ ಆರಂಭ

Tirupati Balaji Temple Wont Close Down

ತಿರುಪತಿಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಜಾರಿಗೊಳಿಸಿದ್ದ ಲಾಕ್ ಡೌನ್ ಆಗಸ್ಟ್ 14ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಭಕ್ತರ ಭೇಟಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಲಾಗಿದೆ.

ತಿರುಪತಿ ದೇವಾಲಯ ಬಂದ್ ಮಾಡಿ; ಟಿಟಿಡಿ ಸಿಬ್ಬಂದಿ ಪತ್ರ ತಿರುಪತಿ ದೇವಾಲಯ ಬಂದ್ ಮಾಡಿ; ಟಿಟಿಡಿ ಸಿಬ್ಬಂದಿ ಪತ್ರ

ಜುಲೈ ತಿಂಗಳಿನಲ್ಲಿಯೇ ತಿರುಪತಿಯಲ್ಲಿ ದರ್ಶನ ನಿಲ್ಲಿಸಬೇಕು ಎಂದು ಟಿಟಿಡಿ ಸಿಬ್ಬಂದಿಗಳೇ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಆದರೆ, ದೇವಾಲಯ ಮುಚ್ಚುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿತ್ತು.

ಸದ್ಯ ಪ್ರತಿದಿನ ಸುಮಾರು 12 ಸಾವಿರ ಜನರು ತಿರುಪತಿಗೆ ಭೇಟಿ ನೀಡುತ್ತಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ದೇವಾಲಯ ಮುಚ್ಚಿ ಎನ್ನುವ ಬೇಡಿಕೆಗೂ ಆಡಳಿತ ಮಂಡಳಿ ಒಪ್ಪಿಗೆ ನೀಡಿಲ್ಲ.

English summary
743 staff of Tirumala Tirupati Devasthanam (TTD) tested positive for Coronavirus. But board said that Tirumala Tirupati Balaji temple won’t be closed for darshan to the devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X