ಮರುನಾಮಕರಣ ಗಲಾಟೆ: ಆಂಧ್ರದ ಸಚಿವರ ಮನೆಗೆ ಪ್ರತಿಭಟನಾಕಾರರಿಂದ ಬೆಂಕಿ
ಅಮರಾವತಿ, ಮೇ 24: ಆಂಧ್ರಪ್ರದೇಶದ ಜಗನ್ ಮೋಹನ್ ಸರ್ಕಾರದ ಸಾರಿಗೆ ಸಚಿವ ಪಿನಿಪೆ ವಿಶ್ವರೂಪು ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಮಾಹಿತಿ ಪ್ರಕಾರ ಪೊಲೀಸರು ಸಚಿವರು ಹಾಗೂ ಅವರ ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ವಾಸ್ತವವಾಗಿ ಮಂಗಳವಾರ ಮಧ್ಯಾಹ್ನ ಪೊಲೀಸರು ಲಾಠಿ ಚಾರ್ಜ್ ಮಾಡಿದ ನಂತರ ಅಮಲಾಪುರಂ ಜಿಲ್ಲೆಯಲ್ಲಿ ಈ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದೆ. ಹೊಸದಾಗಿ ರೂಪುಗೊಂಡ ಕೋನಸೀಮಾ ಜಿಲ್ಲೆಗೆ ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಅವರ ಹೆಸರನ್ನು ಕೋನಸೀಮಾ ಜಿಲ್ಲೆಗೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ರಾಜ್ಯ ಸರ್ಕಾರ ಮೇ 18 ರಂದು ಅಧಿಸೂಚನೆ ಹೊರಡಿಸಿದೆ. ಇದು ಕೋನಸೀಮೆಯೊಳಗೆ ವಾಸಿಸುವ ಜನರಿಂದ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಕೇಳಿದೆ. ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳು ಇದ್ದಲ್ಲಿ ಕೋನಸೀಮಾ ಜಿಲ್ಲಾಧಿಕಾರಿಗಳಿಗೆ 30 ದಿನಗಳ ಒಳಗೆ ಕಳುಹಿಸಲು ಜನರನ್ನು ಒತ್ತಾಯಿಸಲಾಗಿದೆ. ಆದರೆ, ಪ್ರಸ್ತಾವನೆಯನ್ನು ವಿರೋಧಿಸಿ ಕೆಎಸ್ಎಸ್ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೆ ಇದಕ್ಕೆ ಕೆಲ ಗುಂಪುಗಳು ವಿರೋಧ ವ್ಯಕ್ತವಾಗಿದೆ. ಆದರೆ ಜನರ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಬಿಆರ್ ಅಂಬೇಡ್ಕರ್ ಹೆಸರಿಡದಿರಲು ಒತ್ತಾಯ
ವಾಸ್ತವವಾಗಿ ಆಂಧ್ರಪ್ರದೇಶದ ಹೊಸದಾಗಿ ರೂಪುಗೊಂಡ ಜಿಲ್ಲೆ ಕೋನಸೀಮಾವನ್ನು ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಜನರು ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಬಳಿಕ ಬೆಂಕಿ ಹಚ್ಚಿದ ಘಟನೆ ರಾಜ್ಯದ ಅಮಲಾಪುರಂ ನಗರದಲ್ಲಿ ಬೆಳಕಿಗೆ ಬಂದಿದೆ. ಕೋನಸೀಮಾ ಜಿಲ್ಲೆಯಲ್ಲಿ ಶಾಸಕ ಪೊನ್ನಡ ಸತೀಶ್ ಅವರ ಮನೆಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಪೊಲೀಸ್ ವಾಹನ, ಶಾಲಾ ಬಸ್ಗೆ ಬೆಂಕಿ
ಅಮಲಾಪುರಂ ಪಟ್ಟಣದಲ್ಲಿ ಪೊಲೀಸ್ ವಾಹನ ಮತ್ತು ಶಾಲಾ ಬಸ್ಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರ ಕಲ್ಲು ತೂರಾಟದಿಂದಾಗಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುವುದು ದುರದೃಷ್ಟಕರ ಎಂದು ಈ ಘಟನೆಯ ಕುರಿತು ರಾಜ್ಯ ಗೃಹ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಹಿಂದಿನ ಪೂರ್ವ ಗೋದಾವರಿ ಜಿಲ್ಲೆಯಿಂದ ಹೊಸ ಕೋನಸೀಮಾ ಜಿಲ್ಲೆಯ ಹೆಸರನ್ನು ಕಳೆದ ವಾರ ರಾಜ್ಯ ಸರಕಾರ ಬಿ.ಆರ್.ಅಂಬೇಡ್ಕರ್ ಕೋಣಸೀಮ ಎಂದು ಬದಲಾಯಿಸಲು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಜನರಿಂದ ಆಕ್ಷೇಪಣೆಗಳು ವ್ಯಕ್ತವಾಗಿವೆ. ಈ ಹೆಸರನ್ನು ಯಥಾಸ್ಥಿತಿಯಲ್ಲಿಡಲು ಹಲವು ಸಮಿತಿಗಳು ಒತ್ತಾಯಿಸಿವೆ.
ಪ್ರತಿಭಟನಾಕಾರರ ಬಂಧನ
ಕೋಣಸೀಮ ಸಾಧನಾ ಸಮಿತಿ (ಕೆಎಸ್ಎಸ್) ಕರೆ ನೀಡಿದ್ದ ಪ್ರತಿಭಟನೆಯಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ಸರಕಾರದ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದಾಗ, ಕೆಲವರು ಜಿಲ್ಲಾಧಿಕಾರಿ ಕಚೇರಿ ಕಡೆಗೆ ಓಡಿದರು. ಪೊಲೀಸರು ಬೆನ್ನಟ್ಟಿ ಕೆಲವರನ್ನು ಬಂಧಿಸಿದ್ದಾರೆ. ಅವರನ್ನು ಪೊಲೀಸ್ ವಾಹನಗಳಲ್ಲಿ ಕರೆದೊಯ್ಯುತ್ತಿದ್ದಾಗ ಇತರರು ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳಿಗೆ ಹಾನಿ ಮಾಡಿದರು. ಗುಂಪು ಪೊಲೀಸ್ ವಾಹನ ಮತ್ತು ಖಾಸಗಿ ಬಸ್ಗೆ ಬೆಂಕಿ ಹಚ್ಚಿದೆ.
ಪೊಲೀಸರಿಗೆ ಗಾಯ
ಅಮಲಾಪುರಂ ಏರಿಯಾ ಆಸ್ಪತ್ರೆ ಬಳಿಯೂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಎಸ್.ವಿ ಸುಬ್ಬಾ ರೆಡ್ಡಿ ಪಾರಾಗಿದ್ದರೂ ಕೆಲ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಹಿಂಸಾಚಾರವನ್ನು ಗೃಹ ಸಚಿವೆ ಟಿ.ಅನಿತಾ ಖಂಡಿಸಿದ್ದಾರೆ. ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನಾಕಾರರನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಭಾರತ ಸಂವಿಧಾನದ ಪಿತಾಮಹ ಡಾ.ಅಂಬೇಡ್ಕರ್ ಅವರ ಹೆಸರನ್ನು ಜಿಲ್ಲೆಗೆ ನಾಮಕರಣ ಮಾಡುವ ನಿರ್ಧಾರವನ್ನು ವಿರೋಧಿಸಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
|
ಜಗನ್ ಮೋಹನ್ ರೆಡ್ಡಿ ವಿರುದ್ಧ ಆರೋಪ
ಕೋನಸೀಮಾ ಜಿಲ್ಲೆಯನ್ನು ಪೂರ್ವ ಗೋದಾವರಿಯಿಂದ ತೆಗೆದುಕೊಳ್ಳಲಾಗಿದ್ದು, ಅಮಲಪುರಂ ಇದರ ಕೇಂದ್ರ ಕಛೇರಿಯಾಗಿದೆ. ಏಪ್ರಿಲ್ 4 ರಂದು ರಚಿಸಲಾದ 13 ಜಿಲ್ಲೆಗಳಲ್ಲಿ ಇದು ಒಂದಾಗಿದ್ದು, ಸದ್ಯ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 26 ಕ್ಕೆ ಏರಿಕೆಯಾಗಿದೆ.
ಎನ್ಟಿಆರ್ ಎಂದೇ ಜನಪ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು, ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಸಂಸ್ಥಾಪಕ ನಂದಮೂರಿ ತಾರಕ ರಾಮರಾವ್ ಅವರಂತಹ ಪ್ರಮುಖ ವ್ಯಕ್ತಿಗಳ ಹೆಸರನ್ನು ಸರ್ಕಾರವು ಕೆಲವು ಜಿಲ್ಲೆಗಳಿಗೆ ಹೆಸರಿಸಿತ್ತು. ಅದೇ ರೀತಿ, ಎರಡು ಹೊಸ ಜಿಲ್ಲೆಗಳಿಗೆ ಸಂತ ಸಂಯೋಜಕ ತಲ್ಲಪಾಕ ಅನ್ನಮಾಚಾರ್ಯ (ಅನ್ನಮಯ್ಯ) ಮತ್ತು ಸತ್ಯ ಸಾಯಿ ಬಾಬಾ (ಶ್ರೀ ಸತ್ಯ ಸಾಯಿ) ಹೆಸರನ್ನು ಇಡಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಸರ್ಕಾರವು ವೈ.ಎಸ್. ಅಂಬೇಡ್ಕರ್ ಅವರ ಹೆಸರನ್ನು ಜಿಲ್ಲೆಗೆ ಹೆಸರಿಸದಿದ್ದಕ್ಕಾಗಿ ಜಗನ್ ಮೋಹನ್ ರೆಡ್ಡಿ ದಲಿತ ಗುಂಪುಗಳು ಮತ್ತು ಇತರರಿಂದ ಟೀಕೆಗೆ ಒಳಗಾಗಿದ್ದರು.