ಅಮರಾವತಿ, ಜ 4: ಆಂಧ್ರಪ್ರದೇಶಕ್ಕೆ ಅಮರಾವತಿ ಹೊರತಾಗಿ ಇನ್ನೆರಡು ನಗರವನ್ನು ರಾಜಧಾನಿಯನ್ನಾಗಿ ಮಾಡಲು ಹೊರಟಿರುವ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಕ್ರಮದ ವಿರುದ್ದ, ತೆಲುಗುದೇಶಂ ನೇತೃತ್ವದ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.
ಅಮರಾವತಿ ಜಿಲ್ಲೆಯ ಮಂದಮ್ಮಮ್ ಎನ್ನುವಲ್ಲಿ ನಡೆಯುತ್ತಿದ್ದ ಪ್ರತಿಭಟೆನೆ ವೇಳೆ, ಪೊಲೀಸ್ ಮುಖ್ಯಸ್ಥರು ನಡೆದುಕೊಂಡ ರೀತಿಗೆ ಪ್ರತಿಭಟನಾಕಾರರೇ ಬೇಸ್ತು ಬಿದ್ದಿದ್ದಾರೆ.
ರೈತರ ಹೋರಾಟಕ್ಕಾಗಿ ಎಂತಹ 'ತ್ಯಾಗ' ಮಾಡಿದ ಚಂದ್ರಬಾಬು ನಾಯ್ಡು ಪತ್ನಿ!
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಡೆಪ್ಯುಟಿ ಸುಪರಿಡೆಂಟ್ ಆಪ್ ಪೊಲೀಸ್ ವೀರಾ ರೆಡ್ಡಿ ಆಗಮಿಸಿದ್ದಾರೆ. ಆಗ, ಪ್ರತಿಭಟನಾಕಾರರು, ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು, ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ.
ಆ ವೇಳೆ, ಕೈಮುಗಿಯುತ್ತಾ ಅಧಿಕಾರಿ ವೀರಾ ರೆಡ್ಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಭಟನಾಕಾರರು ಜಗ್ಗದಿದ್ದಾಗ, ಒಬ್ಬೊಬ್ಬರ ಕಾಲಿಗೆ ಬಿದ್ದು ವಾಪಸ್ ಹೋಗುವಂತೆ ಕೇಳಿಕೊಳ್ಳುತ್ತಿರುವ ದೃಶ್ಯವೀಗ ವೈರಲ್ ಆಗಿದೆ.
#WATCH Protesters fell at feet of Deputy Superintendent of Police(DSP) Veera Reddy, who in turn fell at the feet of protesters in Mandadam in Amravati district. Farmers have been protesting for more than three weeks against the state govt's three capitals proposal. #AndhraPradesh pic.twitter.com/hAvhXtWZ8t
— ANI (@ANI) January 4, 2020
ಆಂಧ್ರದಲ್ಲಿ ವೈ.ಎಸ್.ಜಗನ್ ಅಧಿಕಾರ ಸ್ವೀಕರಿಸಿದ ನಂತರ, ಹಿಂದಿನ ಸರಕಾರದ ಹಲವು ಯೋಜನೆಗಳನ್ನು ರದ್ದುಪಡಿಸುವುದೋ ಅಥವಾ ಬದಲಾವಣೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರದ ಸಚಿವಾಲಯದ ಕಾರ್ಯಗಳನ್ನು ನಿರ್ವಹಿಸಲು ಒಂದು ರಾಜಧಾನಿ, ಶಾಸಕರ ಕಾರ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಮತ್ತೊಂದು ರಾಜಧಾನಿ ಹಾಗೂ ಹೈಕೋರ್ಟ್ ನ್ನು ಮತ್ತೊಂದು ರಾಜಧಾನಿಯಲ್ಲಿ ವಿಂಗಡಿಸಲು ತಜ್ಞರ ಸಮಿತಿ, ಜಗನ್ ಸರಕಾರಕ್ಕೆ ಸಲಹೆ ನೀಡಿದೆ.
ಜಗನ್ ಸರಕಾರದ ಕ್ರಮವನ್ನು ವಿರೋಧಿಸಿ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ರೈತರ ಭಾರೀ ಪ್ರತಿಭಟನೆ ನಡೆಯುತ್ತಿದೆ. ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರಿಯೂ ಆಗಿರುವ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ, ರೈತರ ಹೋರಾಟಕ್ಕಾಗಿ ತಮ್ಮ ಚಿನ್ನವನ್ನೂ ಹರಾಜಿಗೆ ಇಡುವ ಮೂಲಕ, ಭಾರೀ ಸುದ್ದಿಯಾಗಿದ್ದರು.
RECOMMENDED STORIES