ಕಾಕಿನಾಡಿನ ಸಮುದ್ರ ತೀರದಲ್ಲಿ ಚಿನ್ನದ ಮಣಿಗಳನ್ನು ಹುಡುಕುತ್ತಿರುವ ಜನರು
ಅಮರಾವತಿ, ನವೆಂಬರ್ 29: ಕಳೆದ ಎರಡು ದಿನಗಳಿಂದ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಕಡಲತೀರಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮೀನುಗಾರರು ಚಿನ್ನದ ಮಣಿಗಳನ್ನು ಹುಡುಕುತ್ತಿದ್ದಾರೆ.
ಭಾರೀ ಮಳೆ ಹಾಗೂ ತಂಪು ಹವಾಮಾನವನ್ನು ಎದುರಿಸುತ್ತಿರುವ ಈ ಜನರು, ಹೆಚ್ಚಾಗಿ ಯು ಕೊಥಪಲ್ಲಿ ಬ್ಲಾಕ್ನ ಉಪ್ಪಡಾ ಮತ್ತು ಸುರದಪೇಟೆ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.
ರೈತರ ಹೊಲಕ್ಕೆ ಪ್ಯಾಕ್ ಮಾಡಿದ ಗೊಬ್ಬರ ತಲುಪಿಸಲಿದೆ ಟಿಟಿಡಿ!
ಇತ್ತೀಚಿನ ನಿವಾರ್ ಚಂಡಮಾರುತದಿಂದ ಉಂಟಾದ ಏರಿಳಿತ ಅಲೆಗಳಿಂದಾಗಿ, ಸಮುದ್ರ ತೀರದಲ್ಲಿ ಧಾನ್ಯಗಳು ಮತ್ತು ಚಿನ್ನದ ಮಣಿಗಳನ್ನು ಹುಡುಕುವ ಆಸೆಯೊಂದಿಗೆ ಬೀಚ್ ನಲ್ಲಿ ಮರಳನ್ನು ಜರಡಿ ಹಿಡಿಯುತ್ತಿದ್ದಾರೆ.
ಯು ಕೊಥಪಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ ಲೋವಾ ರಾಜು ಮಾತನಾಡಿ, "ನಮ್ಮ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಕಡಲತೀರಕ್ಕೆ ಬಂದ ನಾಲ್ಕರಿಂದ ಐದು ಮೀನುಗಾರರು ಮರಳಿನ ಮೇಲೆ ಕೆಲವು ಚಿನ್ನದ ಮಣಿಗಳನ್ನು ಕಂಡಿದ್ದಾರೆ. ಅವುಗಳಿಂದ ಹಣ ಗಳಿಸಬಹದು. ಯಾವುದೇ ಸಮಯದಲ್ಲಿ ಕಾಡ್ಗಿಚ್ಚಿನಂತೆ ಸುದ್ದಿ ಹರಡಿ, ಗ್ರಾಮಸ್ಥರು ಚಿನ್ನದ ಮಣಿಗಳು ಮತ್ತು ಧಾನ್ಯಗಳನ್ನು ಹುಡುಕುತ್ತಾ ಕಡಲತೀರವನ್ನು ಸೇರಬಹುದು ಎಂದು ಖಾಸಗಿ ಪತ್ರಿಕೆಗೆ ತಿಳಿಸಿದ್ದಾರೆ.
ಗ್ರಾಮಸ್ಥರು ಛತ್ರಿಗಳನ್ನು ಹಿಡಿದು ಉಪ್ಪಡಾ ಕಡಲತೀರದಾದ್ಯಂತ ಹುಡುಕಾಡುತ್ತಿದ್ದು, ಮೀನುಗಾರಿಕೆ ಬಲೆಗಳು, ಬಾಚಣಿಗೆ ಮತ್ತು ಬಟ್ಟೆಗಳನ್ನು ಬಳಸಿ ಮರಳನ್ನು ಜರಡಿ ಹಿಡಿಯುತ್ತಿದ್ದಾರೆ. ಆದಾಗ್ಯೂ ಕೆಲವು ಜನರು ಮಣಿಗಳನ್ನು ಹುಡುಕುತ್ತಿದ್ದು, ಗ್ರಾಮಸ್ಥರು ಭರವಸೆ ಕಳೆದುಕೊಂಡಿಲ್ಲ "ಎಂದು ಎಸ್ಐ ಎಂದರು.
ಚಿನ್ನದ ಮಣಿಗಳು ಅಥವಾ ಧಾನ್ಯಗಳನ್ನು ಹೇಗೆ ತೀರಕ್ಕೆ ತೊಳೆದುಕೊಂಡು ಬಂದಿದೆ ಎಂದು ಕೇಳಿದಾಗ, ""ಕಳೆದ ತಿಂಗಳ ಭಾರೀ ಮಳೆಯ ಸಮಯದಲ್ಲಿ ಕರಾವಳಿಯ ಕೆಲವು ಮನೆಗಳು ಮತ್ತು ಒಂದೆರಡು ಹಳೆಯ ದೇವಾಲಯಗಳು ಕೊಚ್ಚಿ ಹೋಗಿವೆ ಮತ್ತು ಅವುಗಳಲ್ಲಿ ಕೆಲವು ಸಣ್ಣ ಚಿನ್ನದ ತುಂಡುಗಳನ್ನು ಕಳೆದುಕೊಂಡಿರಬಹುದು ಎಂದು ಎಸ್ಐ ರಾಜು ಹೇಳಿದರು.
"ಹತ್ತಿರದ ಪ್ರದೇಶಗಳಲ್ಲಿನ ಯಾತ್ರಾ ಕೇಂದ್ರಗಳಿಗೆ ಬರುವ ಜನರು ಪವಿತ್ರ ಸ್ನಾನ ಮಾಡುವಾಗ, ಸಮುದ್ರದಲ್ಲಿ ಕೆಲವು ಸಣ್ಣ ಚಿನ್ನದ ತುಂಡುಗಳನ್ನು ಬಿಡುವುದು ಸಾಮಾನ್ಯವಾಗಿದೆ. ಇತ್ತೀಚಿನ ನಿವಾರ್ ಚಂಡಮಾರುತ ಸಮಯದಲ್ಲಿ ಈ ಕೆಲವು ಸಣ್ಣ ಚಿನ್ನದ ವಸ್ತುಗಳು ಉಬ್ಬರವಿಳಿತದ ಅಲೆಗಳಿಂದ ತೀರವನ್ನು ಸೇರಿಕೊಂಡಿರಬಹುದು" ಎಂದು ತಿಳಿಸಿದರು.
ದೊಡ್ಡ ಚಿನ್ನದ ತುಂಡುಗಳು ಇದ್ದಿದ್ದರೆ, ಕಂದಾಯ ಅಧಿಕಾರಿಗಳು ಈಗ ಕಾರ್ಯಾಚರಣೆಗೆ ಇಳಿಯುತ್ತಿದ್ದರು. ಪೊಲೀಸರು ಜಾಗ್ರತೆ ವಹಿಸಿದ್ದಾರೆ ಎಂದು ಎಸ್ಐ ಹೇಳಿದ್ದಾರೆ.